ಆ್ಯಪ್ನಗರ

ಎಂಪಿಎಂ ಮುಚ್ಚಲು ಕಾರ್ಮಿಕ ಇಲಾಖೆ ಅನುಮತಿ

ರಾಜ್ಯ ಸರಕಾರಿ ಸ್ವಾಮ್ಯದ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯನ್ನು(ಎಂಪಿಎಂ) ಮುಚ್ಚುವ ಆಡಳಿತ ಮಂಡಳಿ ತೀರ್ಮಾನವನ್ನು ಕಾರ್ಮಿಕ ಇಲಾಖೆಯು ಪುರಸ್ಕರಿಸಿ ಕಾರ್ಖಾನೆ ಬೀಗ ಮುದ್ರೆಗೆ ಅನುಮತಿ ನೀಡಿದೆ.

Vijaya Karnataka 6 Jul 2019, 6:30 pm
ಶಿವಮೊಗ್ಗ: ರಾಜ್ಯ ಸರಕಾರಿ ಸ್ವಾಮ್ಯದ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯನ್ನು(ಎಂಪಿಎಂ) ಮುಚ್ಚುವ ಆಡಳಿತ ಮಂಡಳಿ ತೀರ್ಮಾನವನ್ನು ಕಾರ್ಮಿಕ ಇಲಾಖೆಯು ಪುರಸ್ಕರಿಸಿ ಕಾರ್ಖಾನೆ ಬೀಗ ಮುದ್ರೆಗೆ ಅನುಮತಿ ನೀಡಿದೆ.
Vijaya Karnataka Web department of labor permission to close mpm
ಎಂಪಿಎಂ ಮುಚ್ಚಲು ಕಾರ್ಮಿಕ ಇಲಾಖೆ ಅನುಮತಿ


ಇದರೊಂದಿಗೆ ಕಾರ್ಖಾನೆಯು ಇತಿಹಾಸದ ಪುಟ ಸೇರುವುದು ಅಂತಿಮಗೊಂಡಂತಾಗಿದೆ. ಕಾರ್ಖಾನೆ ಹಾಗೂ ಉದ್ಯೋಗವನ್ನು ಉಳಿಸಿಕೊಳ್ಳಲು ಕಾರ್ಮಿಕರಿಗೆ ಇದ್ದ ಕಡೇ ಆಸರೆಯೂ ಅವರ ನೆರವಿಗೆ ಬರದಂತಾಗಿದೆ.

ನಿರಂತರ ನಷ್ಟ ಹಿನ್ನೆಲೆಯಲ್ಲಿ ಎಂಪಿಎಂ ಆಡಳಿತ ಮಂಡಳಿಯು ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ನಾಲ್ಕು ವರ್ಷಗಳ ಹಿಂದೆ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಲ್ಲದೆ ಆನಂತರದಲ್ಲಿ ಕಾರ್ಖಾನೆಗೆ ಬೀಗ ಹಾಕಿತ್ತು. ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸಿ ಎಲ್ಲ ಕಾರ್ಮಿಕರನ್ನು ನಿವೃತ್ತಿಗೊಳಿಸಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲು ತೀರ್ಮಾನಿಸಿತ್ತು.

ಸರಕಾರದ ತೀರ್ಮಾನದ ವಿರುದ್ಧ ಕಾರ್ಮಿಕರು ನಿರಂತರ ಹೋರಾಟ ನಡೆಸಿ ಕಾರ್ಖಾನೆ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಕಡೇ ಹೋರಾಟ ಎಂಬಂತೆ ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಪುನಾರಂಭಿಸುವಂತೆ ಆದೇಶಿಸಬೇಕೆಂದು ಒತ್ತಾಯಿಸಿ ಕಾರ್ಮಿಕ ಸಂಘವು ಕಾರ್ಮಿಕ ಇಲಾಖೆಗೆ ತಕರಾರು ಅರ್ಜಿ ಸಲ್ಲಿಸಿತ್ತು.

ವಾದ ಪ್ರತಿವಾದವನ್ನು ಆಲಿಸಿದ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ ನಾಯಕ್‌ ಅವರು 1947ರ ಕೈಗಾರಿಕಾ ವಿವಾದ ಕಾಯಿದೆ ಕಲಂ 25 ಓ(2)ರ ಅನ್ವಯ ಆಡಳಿತ ಮಂಡಳಿಯು ಸಂಸ್ಥೆಯನ್ನು ಮುಚ್ಚಲು ತೀರ್ಮಾನಿಸಿರುವುದನ್ನು ಪುರಸ್ಕರಿಸಿ ಜೂ.28ರಂದು ಆದೇಶ ನೀಡಿದ್ದಾರೆ.

ಕಾರ್ಮಿಕ ಇಲಾಖೆ ಆದೇಶದ ವಿರುದ್ಧ ಕಾರ್ಮಿಕರು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ