ಆ್ಯಪ್ನಗರ

ಖಿನ್ನತೆ ನಾವೇ ತಂದುಕೊಳ್ಳುವ ಅತಿಥಿ

ಖಿನ್ನತೆ ಮನುಷ್ಯ ತಾನೇ ತಂದುಕೊಳ್ಳುವ ಒಂದು ಕಾಯಿಲೆ. ಇತರರನ್ನು ಹೋಲಿಕೆ ಮಾಡಿಕೊಳ್ಳುವುದು, ಇಲ್ಲದ್ದನ್ನು ಬಯಸುವುದು, ಸದಾ ಒತ್ತಡದ ಜೀವನ ನಡೆಸುವುದು ಹಾಗೂ ಆತುರದ ನಿರ್ಧಾರಗಳಿಂದ ಖಿನ್ನತೆ ಹಾಗೂ ಮಾನಸಿಕ ಕಾಯಿಲೆ ನಮ್ಮನ್ನು ಆವರಿಸಿಕೊಳ್ಳುತ್ತದೆ ಎಂದು ಮಾನಸಿಕ ತಜ್ಞ ಡಾ. ಎಚ್‌.ಎನ್‌.ಪ್ರಮೋದ್‌ ಪ್ರತಿಪಾದಿಸಿದರು.

Vijaya Karnataka 17 Dec 2018, 5:00 am
ಶಿವಮೊಗ್ಗ : ಖಿನ್ನತೆ ಮನುಷ್ಯ ತಾನೇ ತಂದುಕೊಳ್ಳುವ ಒಂದು ಕಾಯಿಲೆ. ಇತರರನ್ನು ಹೋಲಿಕೆ ಮಾಡಿಕೊಳ್ಳುವುದು, ಇಲ್ಲದ್ದನ್ನು ಬಯಸುವುದು, ಸದಾ ಒತ್ತಡದ ಜೀವನ ನಡೆಸುವುದು ಹಾಗೂ ಆತುರದ ನಿರ್ಧಾರಗಳಿಂದ ಖಿನ್ನತೆ ಹಾಗೂ ಮಾನಸಿಕ ಕಾಯಿಲೆ ನಮ್ಮನ್ನು ಆವರಿಸಿಕೊಳ್ಳುತ್ತದೆ ಎಂದು ಮಾನಸಿಕ ತಜ್ಞ ಡಾ. ಎಚ್‌.ಎನ್‌.ಪ್ರಮೋದ್‌ ಪ್ರತಿಪಾದಿಸಿದರು.
Vijaya Karnataka Web 16SMG-Rotary


ರಾಜೇಂದ್ರ ನಗರದ ರೋಟರಿ ಶಿವಮೊಗ್ಗ ಪೂರ್ವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 'ಮಾನಸಿಕ ಒತ್ತಡ ಹಾಗೂ ನಿರ್ವಹಣೆ' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು, ಇಂದಿನ ವೇಗ ಮತ್ತು ಆಧುನಿಕ ಪ್ರಪಂಚದಲ್ಲಿ ಮನುಷ್ಯನಿಗೆ ದೈಹಿಕ ಶ್ರಮವೇ ಇಲ್ಲದಂತಾಗಿದೆ. ಮಾನಸಿಕ ಅಸ್ವಸ್ಥತೆಗೆ ಇದೂ ಒಂದು ಕಾರಣ. ಕೇವಲ ಬಿಡುವಿಲ್ಲ ಎಂದು ಹೇಳಿಕೊಳ್ಳುವುದು ದೊಡ್ಡತನ ಅಲ್ಲ. ಆ ಬಿಡುವಿಲ್ಲದ ವೇಳೆಯಲ್ಲಿ ನಾವು ದೈಹಿಕವಾಗಿ ಮಾನಸಿಕವಾಗಿ ಎಷ್ಟರ ಮಟ್ಟಿಗೆ ತೊಡಗಿಕೊಂಡಿದ್ದೇವೆ ಎಂಬುದು ಮುಖ್ಯ ಎಂದು ಹೇಳಿದರು.

ಅಂತರ್ಜಾಲ ಹಾಗೂ ಮೊಬೈಲ್‌ಗಳು ಮನುಷ್ಯನ ಬಹುತೇಕ ಸಮಯವನ್ನು ಆಕ್ರಮಿಸಿಕೊಂಡಿವೆ. ಪ್ರತಿನಿತ್ಯ ಹೆಚ್ಚು ಸಮಯವನ್ನು ಈ ಮೊಬೈಲ್‌ಗಳಲ್ಲೇ ಕಳೆಯುತ್ತಿರುವುದು ವಿಪರ್ಯಾಸ. ಇತ್ತೀಚಿನ ಆರೋಗ್ಯ ಸಂಸ್ಥೆಗಳ ವರದಿಯ ಪ್ರಕಾರ ಯವಕರಲ್ಲಿ ಹೆಚ್ಚು ಮಾನಸಿಕ ರೋಗಿಗಳು ಹೆಚ್ಚುತ್ತಿದೆ. ಇದಕ್ಕೆ ಬಹಳ ಮುಖ್ಯವಾಗಿ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗಿಯಾಗದಿರುವುದು ಎಂದರು.

ಮಾನಸಿಕ ಕಾಯಿಲೆಯಿಂದ ದೂರವಿರಲು ಪ್ರತಿನಿತ್ಯ ವಾಕಿಂಗ್‌, ಯೋಗ, ಪ್ರಾಣಾಯಾಮ, ಧ್ಯಾನ, ಕ್ರೀಡೆ ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಪ್ರತಿನಿತ್ಯ ಅಳವಡಿಸಿಕೊಳ್ಳುವುದು ಅಗತ್ಯ. ಇದರ ಜತೆ ಜತೆಯಲ್ಲಿಯೇ ಧೂಮಪಾನ, ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಮುಕ್ತರಾಗಿ ಅಂಧಾನುಕರಣೆಯ ಜೀವನ ಶೈಲಿಯಿಂದ ಹೊರಬರಬೇಕು. ಇಂದಿನ ಯುವ ಪೀಳಿಗೆ ಉತ್ತಮ ಜೀವನಶೈಲಿಯಿಂದ ವಂಚಿತರಾಗಿ ವ್ಯಾಮೋಹದ ಪ್ರಪಂಚಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಅವರಲ್ಲಿ ಮಾನಸಿಕ ಕಾಯಿಲೆ ಹೆಚ್ಚುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷ ತೆಯನ್ನು ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಎ.ಒ.ಮಹೇಶ್‌ ವಹಿಸಿದ್ದರು. ಯೂತ್‌ ಹಾಸ್ಟೆಲ್‌ ರಾಜ್ಯಘಟಕ ಉಪಾಧ್ಯಕ್ಷ ಜಿ.ವಿಜಯಕುಮಾರ್‌, ಡಾ.ಗುಡದಪ್ಪ ಕಸವಿ, ಮಾಜಿ ಜಿಲ್ಲಾ ಗವರ್ನರ್‌ ಎಚ್‌.ಎಲ್‌.ರವಿ, ಕೆ.ಜಿ.ರಾಮಚಂದ್ರರಾವ್‌, ಡಾ.ಪರಮೇಶ್ವರ್‌ ಶಿಗ್ಗಾವ್‌, ಬೆನಕಪ್ಪ, ಕಾರ್ಯದರ್ಶಿ ಗಣೇಶ್‌, ಕೇಶವಪ್ಪ, ಮಧುರಾ ಮಹೇಶ್‌, ಜ್ಯೋತಿಬೆನಕಪ್ಪ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ