ಆ್ಯಪ್ನಗರ

ಧೂಮಪಾನ ಸೇವೆಯಿಂದ ಆರೋಗ್ಯ ಹಾಳು

ಧೂಮಪಾನ ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಸುಬ್ಬಯ್ಯದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್‌. ಸುರೇಶ್‌ ಬೇಸರ ವ್ಯಕ್ತಪಡಿಸಿದರು.

Vijaya Karnataka 20 Jul 2019, 5:00 am
ಶಿವಮೊಗ್ಗ : ಧೂಮಪಾನ ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಸುಬ್ಬಯ್ಯದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್‌. ಸುರೇಶ್‌ ಬೇಸರ ವ್ಯಕ್ತಪಡಿಸಿದರು.
Vijaya Karnataka Web SMR-19GANESH5-1


ನಗರದ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಲಾದ ತಂಬಾಕು ವರ್ಜನ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಧೂಮಪಾನ ಎಂಬುದು ಜಗತ್ತಿನ ಅರ್ಧದಷ್ಟು ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅವರ ಆರೋಗ್ಯ ಹಾಳುಗೆಡವುತ್ತಿದೆ. ಸುಮಾರು 7 ಸಾವಿರ ರಾಸಾಯನಿಕ ಅಂಶಗಳನ್ನು ಸಿಗರೇಟ್‌ ಹೊಂದಿದೆ. ಇದು ಮನುಷ್ಯನನ್ನು ಕ್ಯಾನ್ಸರ್‌ಗೆ ತುತ್ತಾಗುವಂತೆ ಮಾಡುತ್ತಿದೆ. ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಯುವ ಜನತೆಯೇ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.

ಇಂದು ವಿಶ್ವದಲ್ಲಿ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆಗಳಿಗೆ ಧೂಮಪಾನ ಸೇವನೆಯೇ ಪ್ರಮುಖ ಕಾರಣವಾಗಿದ್ದು, ಹೆಚ್ಚು ಜನರು ಇಂತಹ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದರು.

ತಂಬಾಕು ಸೇವನೆ ಹಾಗೂ ಧೂಮಪಾನ ದೇಶದ ಯುವ ಜನತೆಯನ್ನು ಮರಣದ ಕೂಪಕ್ಕೆ ತಳ್ಳುತ್ತಿದೆ. ಕೆಲವು ಅಂಕಿ ಅಂಶಗಳ ಪ್ರಕಾರ ಜಗತ್ತಿನಲ್ಲಿ ಪ್ರತಿ 6 ಸೆಕೆಂಡಿಗೊಮ್ಮೆ ಒಬ್ಬ ವ್ಯಕ್ತಿ ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗೆ ಬಲಿಯಾಗುತ್ತಿದ್ದಾನೆ. ತಂಬಾಕಿನಿಂದ ಮಹಿಳೆಯರಲ್ಲಿ ಗರ್ಭಪಾತ, ಗರ್ಭಧಾರಣೆಯಲ್ಲಿ ಕುಂಠಿತ, ಬಂಜೆತನ ಮುಂತಾದ ಸಮಸ್ಯೆಗಳು ಕಂಡು ಬರುತ್ತಿವೆ. ಪುರುಷರಲ್ಲಿ ನಪುಂಸಕತೆಗೂ ಇದು ಕಾರಣವಾಗುತ್ತಿದೆ. ಜತೆಗೆ ದಂತಕ್ಷ ಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು.

ಸುಬ್ಬಯ್ಯದಂತ ವೈದ್ಯಕೀಯ ಕಾಲೇಜಿನಲ್ಲಿ ನೂತನವಾಗಿ ತಂಬಾಕು ವರ್ಜನ ಕೇಂದ್ರ ಉದ್ಘಾಟನೆಗೊಂಡಿದ್ದು, ಇದರ ಮೂಲಕ ಧೂಮಪಾನ ಮಾಡುವ ವ್ಯಕ್ತಿಯ ಉಸಿರಿನ ಮೂಲಕ ಆತ ಎಷ್ಟು ಪ್ರಮಾಣದಲ್ಲಿ ಧೂಮಪಾನ ಮಾಡುತ್ತಿದ್ದಾನೆ ಎಂದು ತಿಳಿಯುತ್ತದೆ.ಅಪಾಯದ ಹಂತದಲ್ಲಿ ಇದ್ದರೆ ಅದನ್ನು ಕೂಡಲೆ ವರ್ಜಿಸುವ ಕೆಲಸವನ್ನು ಯಂತ್ರದ ಮೂಲಕ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸುಬ್ಬಯ್ಯದಂತ ವೈದ್ಯಕೀಯ ಕಾಲೇಜಿನ ನಿರ್ದೇಶಕಿ ಡಾ.ವಿನಯಾ ಶ್ರೀನಿವಾಸ್‌, ಕಾಲೇಜಿನ ಉಪನ್ಯಾಸಕ ಡಾ.ಮಿತುನ್‌, ಡಾ.ಚೇತನ್‌ಜಗದೀಶ್‌, ಡಾ.ನವೀನ್‌, ಡಾ.ಮಹೇಶ್‌ರೆಡ್ಡಿ, ಡಾ.ಮಹೇಶ್‌ ಸ್ವಾಮಿ, ಡಾ.ಶಿವಕುಮಾರ್‌, ಡಾ.ಜೆಸಿನ್‌ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ