ಆ್ಯಪ್ನಗರ

ಕಾಳು ಮೆಣಸು ಕದ್ದ ಆರೋಪಿಗಳ ಬಂಧನ

ತೀರ್ಥಹಳ್ಳಿ ತಾಲೂಕು ಹುಂಚದಕಟ್ಟೆಯಲ್ಲಿ 38 ಸಾವಿರ ರೂ. ಮೌಲ್ಯದ ಕಾಳುಮೆಣಸು ಮತ್ತು ಕಾಫಿ ಬೀಜ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ತೀರ್ಥಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 17 Mar 2019, 5:00 am
ಶಿವಮೊಗ್ಗ : ತೀರ್ಥಹಳ್ಳಿ ತಾಲೂಕು ಹುಂಚದಕಟ್ಟೆಯಲ್ಲಿ 38 ಸಾವಿರ ರೂ. ಮೌಲ್ಯದ ಕಾಳುಮೆಣಸು ಮತ್ತು ಕಾಫಿ ಬೀಜ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ತೀರ್ಥಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web detention of accused who stole pepper
ಕಾಳು ಮೆಣಸು ಕದ್ದ ಆರೋಪಿಗಳ ಬಂಧನ


ಹೊಸನಗರ ತಾಲೂಕು ಚಿತ್ತರಿಕೊಪ್ಪದ ಮಂಜುನಾಥ(37) ಮತ್ತು ಹೀರನಬೈಲು ಗಣೇಶ(38) ಬಂಧಿತ ಆರೋಪಿಗಳು. ತೀರ್ಥಹಳ್ಳಿಯ ಟಿ.ನಾಗರಾಜ್‌ ಅವರು ಹುಂಚದಕಟ್ಟೆಯಲ್ಲಿರುವ ತಮ್ಮ ತೋಟದ ಮನೆಯ ಗೋದಾಮಿನಲ್ಲಿ ಒಣಗಿಸಿ ಇಟ್ಟಿದ್ದ 120 ಕೆ.ಜಿ. ಕಾಳುಮೆಣಸು ಮತ್ತು 20ಕೆ.ಜಿ. ಕಾಫಿಬೀಜವನ್ನು ಮಾ.13ರಂದು ರಾತ್ರಿ ಕಳವು ಮಾಡಲಾಗಿತ್ತು.

ಈ ಸಂಬಂಧ ನಾಗರಾಜ್‌ ಅವರು ದೂರು ನೀಡಿದ ಅನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ