ಆ್ಯಪ್ನಗರ

ವಿದ್ಯೆ ಜತೆಗೆ ವಿನಯ ಬೆಳೆಸಿಕೊಳ್ಳಿ

ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಲೆಗಳಿಗೆ ಮಹತ್ವದ ಹೊಣೆಗಾರಿಕೆ ಇದೆ ಎಂದು ನಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಶೋಭಾ ಹೇಳಿದರು.

Vijaya Karnataka 18 Jul 2019, 5:00 am
ಸಾಗರ: ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಲೆಗಳಿಗೆ ಮಹತ್ವದ ಹೊಣೆಗಾರಿಕೆ ಇದೆ ಎಂದು ನಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಶೋಭಾ ಹೇಳಿದರು.
Vijaya Karnataka Web SMR-17SGR8


ಇಲ್ಲಿನ ಎಸ್‌ಎನ್‌ ನಗರದ ಪ್ರಜ್ಞಾಭಾರತಿ ವಿದ್ಯಾಮಂದಿರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪ್ರಜ್ಞಾಭಾರತಿ ವಿದ್ಯಾಮಂದಿರ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಕಾರಾರ‍ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷ ಣ ಸಂಸ್ಥೆಗಳು ವಿದ್ಯೆ ಕಲಿಸುವ ಜತೆ ವಿನಯ ಬೆಳೆಸಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿ ಸಮೂಹಕ್ಕೆ ಮೂಡಿಸಬೇಕು. ಗೌರವ ಕೊಡುವ ವಿಚಾರದಲ್ಲಿ ಈಗ ವ್ಯತ್ಯಯವಾಗುವುದರಿಂದಲೇ ಇಂದು ಸಂಸ್ಕೃತಿಗೆ ಧಕ್ಕೆಯಾಗಿದೆ. ಮತ್ತೊಬ್ಬರನ್ನು ಗೌರವಿಸುವ ಜಾಯಮಾನ ಜಾಸ್ತಿಯಾಗಬೇಕೆಂದರು.

ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಜಿ.ರಾಘವೇಂದ್ರ ಮಾತನಾಡಿ, ದೇಶ ಕಟ್ಟುವಲ್ಲಿ ಸಂವಿಧಾನ ಗಟ್ಟಿ ಅಡಿಪಾಯ ಹಾಕಿಕೊಟ್ಟಿದೆ. ಸಮರ್ಪಕ ನೈತಿಕ ಶಿಕ್ಷ ಣ ಕೊಡದಿರುವುದರಿಂದಲೇ ಕಾನೂನು ಉಲ್ಲಂಘನೆ ನಡೆದಿದೆ ಎಂಬ ಅನುಮಾನ ಮೂಡುವಂತಾಗಿದೆ.

ಕಾನೂನಿನ ಅರಿವು ಮಕ್ಕಳಿಗೂ ಅಗತ್ಯ. ನೈತಿಕವಾಗಿ ರೂಪುಗೊಳ್ಳುವ ಮಕ್ಕಳೇ ಆಶಾಕಿರಣ ಎಂದರು. ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಆರ್‌.ಬಿಂಬ ಅಧ್ಯಕ್ಷ ತೆ ವಹಿಸಿದ್ದರು. ವೇದಿಕೆಯಲ್ಲಿ ನ್ಯಾಯಾಧೀಶ ಫೆಲಿಕ್ಸ್‌ ಅಲ್ಫಾನೋ ಅಂತೋಣಿ, ವಕೀಲರ ಸಂಘದ ಅಧ್ಯಕ್ಷ ರವೀಶಕುಮಾರ್‌, ಖಜಾಂಚಿ ವೈ.ಎಂ.ನವೀನಕುಮಾರ್‌, ನಗರಸಭೆ ಸದಸ್ಯೆ ಸವಿತಾ ವಾಸು ಇದ್ದರು. ಪೋಕ್ಸೋ ಕಾಯ್ದೆ ಕುರಿತು ವಕೀಲ ಮರಿದಾಸ್‌, ಮಕ್ಕಳ ಹಕ್ಕುಗಳು ಕುರಿತು ವಕೀಲರ ಸಂಘದ ಕಾರ್ಯದರ್ಶಿ ರಮೇಶ್‌, ಹೆಣ್ಣು ಮಕ್ಕಳ ರಕ್ಷ ಣೆ-ಕಾನೂನು ಕುರಿತು ವಕೀಲರಾದ ಶೀಲಾ , ಗ್ರಾಹಕರ ಕಾನೂನು ಕುರಿತು ವಕೀಲ ವಿ.ಶಂಕರ್‌ ಇತರರು ಉಪನ್ಯಾಸ ನೀಡಿದರು. ಪ್ರಜ್ಞಾಭಾರತಿ ಶಾಲೆಯ ಮಾನ್ಯ, ಆಸ್ಥಾ, ಶಾರ್ವರಿ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಭಾರತಿ ಶರ್ಮ ಸ್ವಾಗತಿಸಿ, ಸದಾನಂದ ಶರ್ಮ ವಂದಿಸಿದರು. ಗಜಾನನ ಭಟ್‌ ರೇವಣಕಟ್ಟಾ ನಿರ್ವಹಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷ ಕರು, ಪೋಷಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ