ಆ್ಯಪ್ನಗರ

‘ಹಕ್ಕಿನೊಂದಿಗೆ ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳಿ’

ಮಕ್ಕಳಲ್ಲಿ ಸಂವಿಧಾನಬದ್ಧವಾಗಿ ಪ್ರಾಪ್ತವಾಗಿರುವ ಹಕ್ಕುಗಳೊಂದಿಗೆ ಕರ್ತವ್ಯ ಪ್ರಜ್ಞೆಯೂ ಮೂಡಿಸಬೇಕೆಂದು ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎಂ.ಸರಸ್ವತಿ ಸಲಹೆ ನೀಡಿದರು.

Vijaya Karnataka 9 Jul 2019, 5:00 am
ಶಿವಮೊಗ್ಗ: ಮಕ್ಕಳಲ್ಲಿ ಸಂವಿಧಾನಬದ್ಧವಾಗಿ ಪ್ರಾಪ್ತವಾಗಿರುವ ಹಕ್ಕುಗಳೊಂದಿಗೆ ಕರ್ತವ್ಯ ಪ್ರಜ್ಞೆಯೂ ಮೂಡಿಸಬೇಕೆಂದು ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎಂ.ಸರಸ್ವತಿ ಸಲಹೆ ನೀಡಿದರು.
Vijaya Karnataka Web SMG-0707-2-15-7SMG1


ಪರಿಸರ ಅಧ್ಯಯನ ಕೇಂದ್ರ, ಜಿಲ್ಲಾ ಶಿಕ್ಷ ಣ ಮತ್ತು ತರಬೇತಿ ಸಂಸ್ಥೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ನಗರದ ಡಯಟ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ಪರಿಸರ ಮಿತ್ರ ಶಾಲೆ ಕುರಿತ ಶಿಕ್ಷ ಕರೊಂದಿಗೆ ಸಂವಾದದಲ್ಲಿ 'ಪರಿಸರ ಮಿತ್ರ ಸ್ವಮೌಲ್ಯಮಾಪನ' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಮಕ್ಕಳಿಗೆ ಕೇವಲ ಪದವಿ ಶಿಕ್ಷ ಣ ನೀಡಿದರೆ ಸಾಲದು. ಶಿಕ್ಷ ಣ, ಕಾನೂನು ಬಗ್ಗೆ ಅರಿವು ಮೂಡಿಸಬೇಕು. ಮೂಲಸೌಲಭ್ಯಗಳನ್ನು ಬಳಸುವ ಹಕ್ಕಿದೆ. ಜತೆಗೆ, ಅದನ್ನು ಜೋಪಾನ ಮಾಡುವಂತಹ ಕರ್ತವ್ಯ ಸಹ ಇದೆ ಎಂದರು. ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಎಲ್‌.ಜನಾರ್ಧನ್‌ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ವೀರಭದ್ರಪ್ಪ ಅಧ್ಯಕ್ಷ ತೆ ವಹಿಸಿದ್ದರು. ಕಿಡ್ಸ್‌ ಅಧ್ಯಕ್ಷ ಸಿ.ಎಸ್‌.ಚಂದ್ರಶೇಖರ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಹರಿಶಂಕರ್‌, ಡಯಟ್‌ ಪರಿಸರ ಅಧ್ಯಯನ ಕೇಂದ್ರದ ಜಿಲ್ಲಾ ಸಂಯೋಜಕ ಜೀವಿ ಹರಿಪ್ರಸಾದ್‌, ದಿನೇಶ್‌ ಹೊಸನಗರ, ಬಾಲಕೃಷ್ಣ ಸೇರಿ ಶಿವಮೊಗ್ಗ ತಾಲೂಕಿನ ವಿವಿಧ ಶಾಲೆಗಳ ಶಿಕ್ಷ ಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ