ಆ್ಯಪ್ನಗರ

ಸಂಶೋಧನಾ ಗುಣದಿಂದ ಅಭಿವೃದ್ಧಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ನಡೆಯುತ್ತಿದ್ದು, ಅಂತಹ ಆಧುನಿಕ ಆವಿಷ್ಕಾರಗಳಿಗೆ ಇಂಟರ್‌ನೆಟ್‌ ಆಫ್‌ ಥೀಂಗ್ಸ್‌ ಪೂರಕವಾಗಿ ನಿಲ್ಲಲಿದ್ದು, ವಿದ್ಯಾರ್ಥಿಗಳು ಐಓಟಿ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನಾ ಗುಣ ಬೆಳೆಸಿಕೊಳ್ಳಿ ಎಂದು ಸ್ಟೆಪ್‌ ಇನ್‌ ಟೆಕ್ನೊಲಜಿ ಕಾರ್ಯನಿರ್ವಹಣಾಧಿಕಾರಿ ರಘುಪತಿ ಅಭಿಪ್ರಾಯಪಟ್ಟರು

Vijaya Karnataka 4 Apr 2019, 5:00 am
ಶಿವಮೊಗ್ಗ : ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ನಡೆಯುತ್ತಿದ್ದು, ಅಂತಹ ಆಧುನಿಕ ಆವಿಷ್ಕಾರಗಳಿಗೆ ಇಂಟರ್‌ನೆಟ್‌ ಆಫ್‌ ಥೀಂಗ್ಸ್‌ ಪೂರಕವಾಗಿ ನಿಲ್ಲಲಿದ್ದು, ವಿದ್ಯಾರ್ಥಿಗಳು ಐಓಟಿ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನಾ ಗುಣ ಬೆಳೆಸಿಕೊಳ್ಳಿ ಎಂದು ಸ್ಟೆಪ್‌ ಇನ್‌ ಟೆಕ್ನೊಲಜಿ ಕಾರ್ಯನಿರ್ವಹಣಾಧಿಕಾರಿ ರಘುಪತಿ ಅಭಿಪ್ರಾಯಪಟ್ಟರು
Vijaya Karnataka Web SMR-1ganesh5


ನಗರದ ಜೆಎನ್‌ಎನ್‌ಸಿ ಎಂಸಿಎ ವಿಭಾಗವು ಶನಿವಾರ ಏರ್ಪಡಿಸಿದ್ದ ಐಓಟಿ ಕಲಿಕಾ ಶಿಬಿರದಲ್ಲಿ ಅವರು ಮಾತನಾಡಿ, ಇಂದು ಅಂತರ್ಜಾಲದ ಮೂಲಕ ಇಡಿ ವಿಶ್ವವೇ ಅಂಗೈಯಲ್ಲಿ ಕಾಣುತ್ತಿದೆ. ನಾವು ಇರುವ ಜಾಗದಲ್ಲೇ ಇತರೆ ವಸ್ತುಗಳನ್ನು ನಿರ್ವಹಿಸುವ ಸೌಲಭ್ಯ ಐಓಟಿ ತಂತ್ರಜ್ಞಾನ ನೀಡುತ್ತಿದೆ. ಅದರೆ ಇಂತಹ ಸೌಲಭ್ಯ ಕುರಿತು ಸಂಶೋಧನೆ ನಡೆಸುವಾಗ ಅಂತರ್ಜಾಲದ ಭದ್ರತೆ ಬಗ್ಗೆ ಅರಿಯಬೇಕೆಂದು ಸಲಹೆ ನೀಡಿದರು. ಜೆಎನ್‌ಎನ್‌ಸಿ ಇ ಕಾಲೇಜಿನ ಪ್ರಾಂಶುಪಾಲ ಡಾ.ಎಚ್‌.ಆರ್‌. ಮಹದೇವಸ್ವಾಮಿ, ಎಂಸಿಎ ವಿಭಾಗದ ನಿರ್ದೇಶಕ ಎಸ್‌.ಜಿ.ಸಂತೋಷ್‌, ಶಿಬಿರದ ಸಂಯೋಜಕ ಹೇಮಂತ್‌ಕುಮಾರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ