ಆ್ಯಪ್ನಗರ

ಪ್ರೀತಿಮಾರ್ಗದಿಂದ ದೇವರ ಒಲಿಸಿಕೊಳ್ಳಲು ಸಾಧ್ಯ: ಸ್ವಾಮೀಜಿ

ಭಕ್ತಿ ಮಾರ್ಗ ಮತ್ತು ಪ್ರೀತಿಮಾರ್ಗದಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಶ್ರೀಸಂಸ್ಥಾನ ಕಾಶೀ ಮಠಾಧೀಶ ಶ್ರೀಸಂಯಮೀಂದ್ರ ತೀರ್ಥ ಶ್ರೀಪಾದರು ಹೇಳಿದರು.

Vijaya Karnataka 2 Jan 2019, 5:00 am
ಸಾಗರ: ಭಕ್ತಿ ಮಾರ್ಗ ಮತ್ತು ಪ್ರೀತಿಮಾರ್ಗದಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಶ್ರೀಸಂಸ್ಥಾನ ಕಾಶೀ ಮಠಾಧೀಶ ಶ್ರೀಸಂಯಮೀಂದ್ರ ತೀರ್ಥ ಶ್ರೀಪಾದರು ಹೇಳಿದರು.
Vijaya Karnataka Web smr-01sgr4


ಇಲ್ಲಿನ ಶ್ರೀರಾಂಪುರ ಬಡಾವಣೆಯ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಸಾಗರ-ಸಿರಿವಂತೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲ್ಯಾಣಮಂಟಪದಲ್ಲಿನ ವಾಸ್ತವ್ಯದ 13 ಸುಸಜ್ಜಿತ ಕೋಣೆಗಳನ್ನು ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು.

ಸುಸಜ್ಜಿತ ವಾಸ್ತವ್ಯದ ಕೋಣೆಗಳ ದಾನಿಗಳು, ಜಿಎಸ್‌ಬಿ ಯುವಕ ಮಂಡಳಿ ಹಾಗೂ ಜಿಎಸ್‌ಬಿ ಮಹಿಳಾ ಮಂಡಳಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇದೇ ಸಂದರ್ಭ ಸಮಾಜದ ಅಧ್ಯಕ್ಷ ರಾಗಿ ಸುದೀರ್ಘ 60 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೆ .ಎಸ್‌. ಸೀತಾರಾಮ್‌ ರಾವ್‌ ಅವರನ್ನು ಗೌರವಿಸಲಾಯಿತು. ಶಂಕರ್‌ ಶಾನುಭಾಗ್‌ ಸ್ವಾಗತಿಸಿ, ಸುನಿಲ್‌ ಗಾಯ್‌ತೊಂಡೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ