ಆ್ಯಪ್ನಗರ

ದೇವತಾ ಆರಾಧನೆಯಿಂದ ಏಳಿಗೆ: ರಮೇಶ್‌ ಅರವಿಂದ್‌

ಲಕ್ಷಿ ್ಮೕ, ಸರಸ್ವತಿ, ದುರ್ಗಾಮಾತೆಯರನ್ನು ಭಕ್ತಿಯ ಮೂಲಕ ಒಲಿಸಿಕೊಂಡು ಪರಿಶುದ್ಧ ಜೀವನ ಕಟ್ಟಿಕೊಳ್ಳುವ ಆಶಯ ದಸರಾ ಆಚರಣೆಯಲ್ಲಿದೆ ಎಂದು ನಟ ರಮೇಶ್‌ ಅರವಿಂದ್‌ ಹೇಳಿದರು.

Vijaya Karnataka 11 Oct 2018, 5:00 am
ಸೊರಬ : ಲಕ್ಷಿ ್ಮೕ, ಸರಸ್ವತಿ, ದುರ್ಗಾಮಾತೆಯರನ್ನು ಭಕ್ತಿಯ ಮೂಲಕ ಒಲಿಸಿಕೊಂಡು ಪರಿಶುದ್ಧ ಜೀವನ ಕಟ್ಟಿಕೊಳ್ಳುವ ಆಶಯ ದಸರಾ ಆಚರಣೆಯಲ್ಲಿದೆ ಎಂದು ನಟ ರಮೇಶ್‌ ಅರವಿಂದ್‌ ಹೇಳಿದರು.
Vijaya Karnataka Web SMR-10SRBP2


ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ದಸರಾ ಉತ್ಸವ ಸಮಿತಿ, ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಬುಧವಾರ ಹಮ್ಮಿಕೊಂಡ ದಶ ಸಂಭ್ರಮದ ದಸರಾ ಉತ್ಸವವದ ಸುರಭಿ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಂಬಿಕೆ ಮತ್ತು ಪ್ರಾಮಾಣಿಕವಾದ ಶುದ್ಧ ಮನಸ್ಸಿನಿಂದ ಲಕ್ಷ್ಮೀ ಪೂಜಿಸಿದರೆ ಪ್ರಗತಿ ಸಾಧ್ಯ. ಸರಸ್ವತಿ ಸ್ವರೂಪದ ವಿದ್ಯೆಯನ್ನು ಪುಸ್ತಕ, ವ್ಯಕ್ತಿ, ದೇವರು ಮತ್ತು ಅನುಭವದಲ್ಲಿ ಹುಡುಕಿ ಸಂಪಾದಿಸಬೇಕು. ದುರ್ಗಾಮಾತೆ ಧೈರ್ಯಕ್ಕೆ ಸಂಕೇತವಾಗಿದ್ದು, ಪೂಜಿಸುವ ಮೂಲಕ ವ್ಯಕ್ತಿ ತನ್ನ ಬದುಕಿನಲ್ಲಿ ಧೈರ್ಯ ಸಾಧಿಸಬೇಕು. ಈ ಮೂರೂ ದೇವರುಗಳ ನೆಲೆಗಳನ್ನು ಅರ್ಥೈಸಿಕೊಂಡು ಶುದ್ಧ ಮನಸ್ಸಿನಿಂದ ಪ್ರಾಮಾಣಿಕ ಕಾಯಕ ಮಾಡಿದ್ದಲ್ಲಿ ಮನುಷ್ಯನ ಏಳಿಗೆ ಸಾಧ್ಯವಿದೆ ಎಂದರು. ಅನೇಕ ವ್ಯಕ್ತಿಗಳು ದೇವರನ್ನು ನಾನಾ ರೂಪದಲ್ಲಿ ಕಾಣುತ್ತಾರೆ. ಕಲಾವಿದ ಮಾತ್ರ ಕಲಾರಾಧಕರ ಚಪ್ಪಾಳೆಯಲ್ಲಿ ಕಾಣುತ್ತಾನೆ ಎಂದರು.

ಶಾಸಕ ಕುಮಾರ್‌ ಬಂಗಾರ ಅವರ ಜ್ಞಾನ ಅಪರಿಮಿತವಾದದ್ದು. ಅವರ ಅಭಿನಯದಲ್ಲಿ ಡಾ.ರಾಜ್‌ ಕುಮಾರ್‌ ಅವರ ಅಶ್ವಮೇಧ ಗೀತೆಯ ಧ್ವನಿಯನ್ನು ಸವಿದಿರುವುದು ಸ್ಮರಣೀಯ. ಅಂದಿನಿಂದ ಕುಮಾರ್‌ ಬಂಗಾರಪ್ಪ ಮತ್ತು ನನ್ನ ಸ್ನೇಹ ಪ್ರಾರಂಭವಾಗಿದೆ ಎಂದು ಸ್ಮರಿಸಿಕೊಂಡರು.

ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾಯ, ವಾಚ, ಮನಸಾ ಇಚ್ಛೆಯಿಂದ ಕಾಯಕ ಮಾಡಿದಲ್ಲಿ ಮನುಷ್ಯನ ಏಳಿಗೆ ಸಾಧ್ಯವಿದೆ ಎಂದರು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ಮಧುರಾಯ್‌ ಜಿ.ಶೇಟ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಲಕ್ಷ್ಮೀ ಮುರಳಿಧರ್‌ ಪ್ರಾರ್ಥಿಸಿ, ಷಣ್ಮುಖಾಚಾರ್‌ ಸ್ವಾಗತಿಸಿದರು. ದೀಪಕ್‌ ಧೋಂಗಡೆಕರ್‌ ನಿರೂಪಿಸಿದರು.

ಉದ್ಯಮಿಗಳಾದ ಭೋಗೇಶ್‌ ಶಿಗ್ಗಾ, ಅಶೋಕ್‌ ಬಾಸೂರ್‌, ಟಿ.ಆರ್‌.ಸುರೇಶ್‌, ಶಾಸಕ ಕುಮಾರ್‌ ಬಂಗಾರಪ್ಪ, ಪತ್ನಿ ವಿದ್ಯುಲ್ಲತಾ, ಪುತ್ರಿ ಲಾವಣ್ಯ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಆನವಟ್ಟಿಯ ಶರದ್‌ ಹರ್ಡಿಕರ್‌ ಅವರಿಂದ ಸ್ಯಾಕ್ಸೋಫೋನ್‌ ಹಾಗೂ ಭೀಮನ ಕೋಣೆಯ ಸ್ವರಾಂಜಲಿ ಕಲಾವೃಂದದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ