ಆ್ಯಪ್ನಗರ

ಕರ್ತವ್ಯನಿಷ್ಠೆಯಿಂದ ಕೆಲಸ ಸುಗಮ

ಕರ್ತವ್ಯದಲ್ಲಿ ಶಿಸ್ತು, ಸಂಯಮವಿದ್ದರೆ ಇಲಾಖೆ ಕೆಲಸ ಸುಗಮ. ಎಷ್ಟೇ ಒತ್ತಡವಿದ್ದರೂ ಕರ್ತವ್ಯ ನಿಷ್ಠೆ ಮುಂದುವರಿಸಬೇಕೆಂದು ನಿವೃತ್ತ ಎಎಸೈ ನಂಜುಂಡಪ್ಪ ಹೇಳಿದರು.

Vijaya Karnataka 4 Aug 2019, 5:00 am
ರಿಪ್ಪನ್‌ಪೇಟೆ: ಕರ್ತವ್ಯದಲ್ಲಿ ಶಿಸ್ತು, ಸಂಯಮವಿದ್ದರೆ ಇಲಾಖೆ ಕೆಲಸ ಸುಗಮ. ಎಷ್ಟೇ ಒತ್ತಡವಿದ್ದರೂ ಕರ್ತವ್ಯ ನಿಷ್ಠೆ ಮುಂದುವರಿಸಬೇಕೆಂದು ನಿವೃತ್ತ ಎಎಸೈ ನಂಜುಂಡಪ್ಪ ಹೇಳಿದರು.
Vijaya Karnataka Web SMR-1RPT1


ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಮತ್ತು ವರ್ಗಾವಣೆಗೊಂಡವರಿಗಾಗಿ ಬುಧವಾರ ಸಂಜೆ ಏರ್ಪಡಿಸಿದ್ದ ಬೀಳ್ಕೋಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ಇಲಾಖೆಗೆ ಸೇರಿದಾಕ್ಷ ಣ ಕುಟುಂಬದವರನ್ನು ಮರೆಯುತ್ತೇವೆ. ಕಾರಣ ಇಲಾಖೆಯ ಕೆಲಸದ ಒತ್ತಡ. ಈ ಮಧ್ಯೆ ಹೆಂಡತಿ, ಮಕ್ಕಳ ಕಡೆ ಹೆಚ್ಚು ಸಮಯ ಕಳೆಯಲು ಆಗುವುದಿಲ್ಲ. ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಕಡೆಗೂ ಆಸಕ್ತಿ ವಹಿಸಬೇಕಾದ ಅನಿವಾರ‍್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವೃತ್ತ ನಿರೀಕ್ಷ ಕ ಗುರಣ್ಣಹೆಬ್ಬಾಳ್‌ ಮಾತನಾಡಿ, ಪೊಲೀಸ್‌ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕುಟುಂಬದಲ್ಲಿ ಅನಾನುಕೂಲವಾಗಿವೆ ಎಂದು ರಜೆ ಕೇಳಿ ಬರುವ ಸಿಬ್ಬಂದಿಗೆ ತಕ್ಷ ಣ ರಜೆ ನೀಡಲು ಅವಕಾಶಗಳಿವೆ. ಕರ್ತವ್ಯದ ವೇಳೆ ಇನ್ನಾವುದೇ ವ್ಯವಹಾರ ನಡೆಸುವುದು ಮತ್ತು ಹಿರಿಯ ಅಧಿಕಾರಿಗಳ ಸೂಚನೆ ನಿರ್ಲಕ್ಷಿಸುವುದು ಇಲಾಖೆಗೆ ಶೋಭೆತರದು. ಅಂತಹವರ ಮೇಲೆ ಕ್ರಮಕೈಗೊಳ್ಳಬಹುದಾಗಿದೆ.

ತಪ್ಪು ಮಾಡುವುದು ಸಹಜ, ಅದನ್ನು ತಿದ್ದಿಕೊಳ್ಳುವುದು ಅಗತ್ಯ ಎಂದರು.

ಪಿಎಸ್‌ಐ ಎಲ್‌.ರಾಜಶೇಖರ್‌ ಮಾತನಾಡಿದರು. ನಿವೃತ್ತ ಎಎಸ್‌ಐ ನಂಜುಂಡಪ್ಪ, ವರ್ಗಾವಣೆಗೊಂಡ ಎಎಸ್‌ಐ ಸುರೇಶ್‌,ದಪೇಧಾರ್‌ಗಳಾದ ದೇವಿದಾಸ್‌ನಾಯ್ಕ್‌, ಯಶೋಧರ, ಶಿವಕುಮಾರ್‌, ಪೇದೆ ಚಂದ್ರಶೇಖರ್‌ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಎಎಸ್‌ಐ ಗಣಪತಿ ಸ್ವಾಗತಿಸಿದರು. ಮಂಜುನಾಥ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ