ಆ್ಯಪ್ನಗರ

ಶಿಸ್ತು ಕಲಿಕೆ ಜೀವನಕ್ಕೆ ದಾರಿದೀಪ

ವಿದ್ಯಾರ್ಥಿಗಳು ಶಿಸ್ತು ಕಲಿಕೆಗೆ ಎನ್‌ಸಿಸಿ ಹಾಗೂ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ಗಳಂತಹ ತರಬೇತಿ ಅತ್ಯವಶ್ಯಕ ಎಂದು ನಗರಸಭಾ ಪೌರಾಯುಕ್ತ ಮನೋಹರ್‌ ಹೇಳಿದರು.

Vijaya Karnataka 5 Aug 2019, 5:00 am
ಭದ್ರಾವತಿ: ವಿದ್ಯಾರ್ಥಿಗಳು ಶಿಸ್ತು ಕಲಿಕೆಗೆ ಎನ್‌ಸಿಸಿ ಹಾಗೂ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ಗಳಂತಹ ತರಬೇತಿ ಅತ್ಯವಶ್ಯಕ ಎಂದು ನಗರಸಭಾ ಪೌರಾಯುಕ್ತ ಮನೋಹರ್‌ ಹೇಳಿದರು.
Vijaya Karnataka Web SMR-3BDVT1


ಅವರು ಶನಿವಾರ ಹಳೇನಗರ ಸಂಚಿಯ ಹೊನ್ನಮ್ಮ ಸರಕಾರಿ ಬಾಲಿಕಾ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷ ಣ ಇಲಾಖೆ, ಪೊಲೀಸ್‌ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕೆ ಕೊಡುಗೆ ನೀಡಲು ವಿದ್ಯಾರ್ಥಿ ಜೀವನದಲ್ಲಿ ಕಲಿತ ಮೆಟ್ಟಿಲುಗಳು ಮುಂದೆ ಸಹಕಾರಿಯಾಗಲಿದೆ. ಅದೇ ಮುಂದಿನ ಜೀವನಕ್ಕೂ ದಾರಿದೀಪವಾಗಲಿದೆ ಎಂದರು.

ಹಳೇನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ಭರತ್‌ಕುಮಾರ್‌ ಮಾತನಾಡಿ, ಪೊಲೀಸ್‌ ಮತ್ತು ಜನ ಸಾಮಾನ್ಯರ ಸೇತುವೆಯಾಗಿ ಕಾರ‍್ಯನಿರ್ವಹಿಸಲು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು.

ಕೆಎಸ್‌ಆರ್‌ಪಿ ಆರ್‌ಎಸ್‌ಐ ಎ.ಟಿ.ಸಂತೋಷ್‌ ಪ್ರಾಸ್ತಾವಿಕ ಮಾತನಾಡಿ, ಡಾ.ಎಪಿಜೆ ಅಬ್ದುಲ್‌ ಕಲಾಂ ಅವರು 2010ರಲ್ಲಿ ಜನಸ್ನೇಹಿ ಪೊಲೀಸ್‌ ಮಾದರಿಯಾಗಿ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಜಾರಿಗೆ ತಂದಿದ್ದರು ಎಂದರು. ಕಾಲೇಜಿನ ಉಪ ಪ್ರಾಚಾರ್ಯರಾದ ಶಾಂತಮ್ಮ ಅಧ್ಯಕ್ಷ ತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲ ಮೇಘರಾಜ್‌, ಎಸ್‌ಡಿಎಂಸಿ ಸದಸ್ಯೆ ಸುಜಾತ, ಸಹ ಶಿಕ್ಷ ಕಿ ಉಮಾ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ