ಆ್ಯಪ್ನಗರ

ಯೋಗದಿಂದ ರೋಗಮುಕ್ತ ಬದುಕು

ಯೋಗ, ಪ್ರಾಣಾಯಾಮ ಮತ್ತು ಧ್ಯಾನದಿಂದ ಮನುಷ್ಯ ರೋಗ ರುಜಿನಗಳಿಂದ ದೂರವಿರಲು ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಬಿ.ಪಿ.ವೀರಭದ್ರಪ್ಪ ಹೇಳಿದರು.

Vijaya Karnataka 15 Sep 2019, 5:00 am
ಶಿವಮೊಗ್ಗ: ಯೋಗ, ಪ್ರಾಣಾಯಾಮ ಮತ್ತು ಧ್ಯಾನದಿಂದ ಮನುಷ್ಯ ರೋಗ ರುಜಿನಗಳಿಂದ ದೂರವಿರಲು ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಬಿ.ಪಿ.ವೀರಭದ್ರಪ್ಪ ಹೇಳಿದರು.
Vijaya Karnataka Web disease free life from yoga
ಯೋಗದಿಂದ ರೋಗಮುಕ್ತ ಬದುಕು


ತಾಲೂಕಿನ ಕಲ್ಲಹಳ್ಳಿಯಲ್ಲಿರುವ ಶಿವಗಂಗಾ ಯೋಗ ಮಹಾವಿದ್ಯಾಲಯದಲ್ಲಿಎರಡನೇ ವರ್ಷದ ಪಿ.ಜಿ. ಡಿಪ್ಲೋಮಾ ಯೋಗ ಶಿಕ್ಷಣದ ಪ್ರಾರಂಭೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲದ್ದಕ್ಕಿಂತ ಆರೋಗ್ಯವೇ ದೊಡ್ಡ ಸಂಪತ್ತು. ಹೀಗಾಗಿ, ರೋಗಮುಕ್ತ ಆಗಬೇಕಾದರೆ ನಿತ್ಯ ಯೋಗ ಮಾಡಬೇಕೆಂದು ಸಲಹೆ ನೀಡಿದರು.

ಯೋಗ ದೈಹಿಕ, ಮಾನಸಿಕ ಆತ್ಮವಿಶ್ವಾಸ ಹೆಚ್ಚಿಸುವುದರ ಜತೆಗೆ ಒಳ್ಳೆಯವರ ಸಂಪÜರ್ಕ ಕಲ್ಪಿಸುತ್ತದೆ. ಈ ನಿಟ್ಟಿನಲ್ಲಿಶಿವಗಂಗಾ ಯೋಗ ಮಹಾವಿದ್ಯಾಲಯ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಮಲ್ಲಿಕಾರ್ಜುನ್‌ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಶಿವಗಂಗಾ ಯೋಗಕೇಂದ್ರ ಪ್ರತಿನಿತ್ಯ ಸಾವಿರಾರು ಶಿಬಿರಾರ್ಥಿಗಳಿಗೆ ಉಚಿತವಾಗಿ 25 ಕೇಂದ್ರಗಳಲ್ಲಿತರಗತಿ ನಡೆಸಿ ಅವರ ಆರೋಗ್ಯ ಸದೃಢಗೊಳಿಸುತ್ತಿದೆ. ಇದು ನಿಜವಾದ ಸೇವೆ. ಸೇವೆಗೆ ಬೆಲೆ ಕಟ್ಟಲಾಗದಂತ ವಸ್ತು ಭಗವಂತ ಕೊಟ್ಟಿರುವುದನ್ನು ತೃಪ್ತಿಯಿಂದ ಅನುಭವಿಸಿ ಉಳಿದುದರಲ್ಲಿಸ್ವಲ್ಪ ಭಾಗ ದಾನ ಮಾಡಿದಾಗ ನೈಜ ತೃಪ್ತಿಸಿಗುತ್ತದೆ ಎಂದರು. ಶಿವಗಂಗಾ ಯೋಗ ಕೇಂದ್ರ ಕಾರ್ಯಾಧ್ಯಕ್ಷ ಸಿ.ವಿ.ರುದ್ರಾರಾಧ್ಯ ಮಾತನಾಡಿದರು. ಎಂಎಲ್‌ಸಿ ಹಾಗೂ ಟ್ರಸ್ಟಿ ಎಸ್‌.ರುದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಪಿ.ಜಿ.ಡಿಪ್ಲೋಮಾದಲ್ಲಿಉನ್ನತ ಶ್ರೇಣಿಯಲ್ಲಿತೇರ್ಗಡೆ ಹೊಂದಿದ 48 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಕಾರ್ಯದರ್ಶಿ ಎಸ್‌.ಎಸ್‌.ಜ್ಯೋತಿಪ್ರಕಾಶ್‌, ಪರಿಸರ ನಾಗರಾಜ್‌, ವಿಜಯ ಬಾಯರಿ, ವಿಜಯ್‌ ಕುಮಾರ್‌, ಎ.ಎಸ್‌.ಚಂದ್ರಶೇಖರ್‌, ಹೂವಯ್ಯಗೌಡರು ಇತರರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ