ಆ್ಯಪ್ನಗರ

ಸ್ವಚ್ಚತೆ ಹತ್ತಿರವಾದರೆ ಕಾಯಿಲೆಗಳು ದೂರ

ಜಂತುಹುಳು ನಾಶಕವನ್ನು 1ರಿಂದ 16 ವರ್ಷದ ಮಕ್ಕಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ನೀಡುವುದರಿಂದ ಮಕ್ಕಳಲ್ಲಿಜಂತುಹುಳುವಿನಿಂದ ಉಂಟಾಗುವ ಆರೋಗ್ಯ ತೊಂದರೆ ನಿಯಂತ್ರಿಸಬಹುದು ಎಂದು ಜಿಲ್ಲಾಆರೋಗ್ಯಾಧಿಕಾರಿ ರಾಜೇಶ್‌ ಸುರಗೀಹಳ್ಳಿ ಹೇಳಿದರು.

Vijaya Karnataka 26 Sep 2019, 5:00 am
ಶಿವಮೊಗ್ಗ: ಜಂತುಹುಳು ನಾಶಕವನ್ನು 1ರಿಂದ 16 ವರ್ಷದ ಮಕ್ಕಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ನೀಡುವುದರಿಂದ ಮಕ್ಕಳಲ್ಲಿಜಂತುಹುಳುವಿನಿಂದ ಉಂಟಾಗುವ ಆರೋಗ್ಯ ತೊಂದರೆ ನಿಯಂತ್ರಿಸಬಹುದು ಎಂದು ಜಿಲ್ಲಾಆರೋಗ್ಯಾಧಿಕಾರಿ ರಾಜೇಶ್‌ ಸುರಗೀಹಳ್ಳಿ ಹೇಳಿದರು.
Vijaya Karnataka Web diseases are far away if cleanliness is close
ಸ್ವಚ್ಚತೆ ಹತ್ತಿರವಾದರೆ ಕಾಯಿಲೆಗಳು ದೂರ


ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿನಗರದ ಬೆಕ್ಕಿನಕಲ್ಮಠದ ಸಭಾಂಗಣದಲ್ಲಿಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಂತುಹುಳು ನಾಶಕ ಮಾತ್ರವಲ್ಲದೆ, ಶುದ್ಧ ಆಹಾರ, ನೀರು ಸೇವನೆ, ಆಹಾರ ಸೇವನೆ ವೇಳೆ ಕೈ ತೊಳೆಯುವುದು. ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಕಡ್ಡಾಯವಾಗಿ ಶೌಚಾಲಯ ಬಳಕೆ, ಬರಿಗಾಲಿನಲ್ಲಿನಡೆಯದಿರುವುದು. ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಜಂತುಹುಳುಗಳಿಂದ ಉಂಟಾಗುವ ಅನಾರೋಗ್ಯವನ್ನು ನಿಯಂತ್ರಿಸಬಹುದಾಗಿದೆ ಎಂದರು.

ಜಂತುಹುಳುಗಳ ಸಮಸ್ಯೆಯಿಂದ ಏಕಾಗ್ರತೆ ಕೊರತೆ, ರಕ್ತಹೀನತೆ, ಆಯಾಸ, ಕಣ್ಣು ಮಂಜಾಗುವುದು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಇದು ತಕ್ಷಣ ಅನಾರೋಗ್ಯವಾಗಿ ಕಾಡದಿದ್ದರೂ ದೀರ್ಘಕಾಲದ ನಂತರ ತೀವ್ರತರಹದ ಅನಾರೋಗ್ಯಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.

ಜಂತುಹುಳು ನಾಶಕ ಮಾತ್ರೆಯಿಂದ ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬೆಳವಣಿಗೆಯಾಗುತ್ತದೆ. ಮಾತ್ರೆಯನ್ನು ನೇರವಾಗಿ ನುಂಗದೇ ಅಗಿದು ನುಂಗಬೇಕು ಆಗ ಮಾತ್ರ ಪರಿಣಾಮ ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿಜಿಲ್ಲಾಮಕ್ಕಳ ಆರೋಗ್ಯಾಧಿಕಾರಿ ಡಾ. ನಟರಾಜ, ತಾಲೂಕು ಆರೋಗ್ಯಾಧಿಕಾರಿ ಡಾ.ದಿನೇಶ್‌, ಡಾ.ವೈಜಯಂತಿಮಾಲಾ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ