ಆ್ಯಪ್ನಗರ

ಸಾಂಸ್ಕೃತಿಕ, ಕ್ರೀಡೆಗೆ ಸೆಮಿಸ್ಟರ್‌ ಪದ್ದತಿ ಅಡ್ಡಿ

ಸಾಂಸ್ಕೃತಿಕ, ಕ್ರೀಡೆಗೆ ಅಡ್ಡಿಯಾಗಿರುವ ಸೆಮಿಸ್ಟರ್‌ ಪದ್ಧತಿ ರದ್ದಾಗಬೇಕು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಮಂಡಳಿ ಕಾರ್ಯಾಧ್ಯಕ್ಷ ಡಿ.ಎಸ್‌.ಅರುಣ್‌ ಹೇಳಿದರು.

Vijaya Karnataka 27 Sep 2019, 5:00 am
ಶಿವಮೊಗ್ಗ: ಸಾಂಸ್ಕೃತಿಕ, ಕ್ರೀಡೆಗೆ ಅಡ್ಡಿಯಾಗಿರುವ ಸೆಮಿಸ್ಟರ್‌ ಪದ್ಧತಿ ರದ್ದಾಗಬೇಕು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಮಂಡಳಿ ಕಾರ್ಯಾಧ್ಯಕ್ಷ ಡಿ.ಎಸ್‌.ಅರುಣ್‌ ಹೇಳಿದರು.
Vijaya Karnataka Web disruption of cultural and sport semester system
ಸಾಂಸ್ಕೃತಿಕ, ಕ್ರೀಡೆಗೆ ಸೆಮಿಸ್ಟರ್‌ ಪದ್ದತಿ ಅಡ್ಡಿ


ನಗರದ ಕುವೆಂಪು ರಂಗಮಂದಿರದಲ್ಲಿಗುರುವಾರ ಬಾಪೂಜಿ ನಗರದ ಸರಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಿಂದ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್‌, ರೋವರ್ಸ್ ಮತ್ತು ರೆಂಜರ್ಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೆಮಿಸ್ಟರ್‌ ಪದ್ಧತಿಯಿಂದ ವಿದ್ಯಾರ್ಥಿಗಳಲ್ಲಿಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಆಸಕ್ತಿ ಕಡಿಮೆಯಾಗಿದೆ. ಸೆಮಿಸ್ಟರ್‌ ಪದ್ಧತಿಯಿಂದಾಗಿ ವರ್ಷವಿಡಿ ಪರೀಕ್ಷೆಗಳು ಬರುತ್ತಿವೆ. ಇದರಿಂದ ವಿದ್ಯಾರ್ಥಿಗಳು ಪುಸ್ತಕ ಬಿಟ್ಟು ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿರುವ ಸೆಮಿಸ್ಟರ್‌ ಪದ್ಧತಿ ರದ್ದಾಗಬೇಕು ಎಂದು ಒತ್ತಾಯಿಸಿದರು.

ಭಾರತ ದೇಶ ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಪ್ರಾಚೀನ ಕಾಲದಿಂದಲೂ ವಿಶ್ವಮಾನ್ಯವಾಗಿದೆ. ಭಾರತ ಸದೃಢ ಮತ್ತು ಬಲಿಷ್ಠವಾಗಿದೆ ಎಂಬುದನ್ನು ಮನಗಂಡ ವಿಶ್ವದ ಅಗ್ರಗಣ್ಯ ರಾಷ್ಟ್ರಗಳು ಕೂಡ ಭಾರತದ ಸಂಸ್ಕೃತಿ ಮತ್ತು ಶಿಕ್ಷಣದತ್ತ ಒಲವು ತೋರುತ್ತಿದೆ ಎಂದರು.

ನಮ್ಮಲ್ಲಿಅನೇಕ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ವೇದಿಕೆ ನಿರ್ಮಾಣವಾಗಬೇಕಿದೆ. ನಮ್ಮ ಶಿಕ್ಷಣ ಪದ್ಧತಿಯಲ್ಲಿಕೆಲವೊಂದು ಬದಲಾವಣೆ ಆಗಬೇಕಿದ್ದು, ವರ್ಷವಿಡಿ ಪರೀಕ್ಷೆಯ ಜಂಜಾಟವಿಲ್ಲದೆ ಶಿಕ್ಷಣದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗವಹಿಸುವಂತಿರಬೇಕು ಎಂದರು.

ಈ ಸಂದರ್ಭದಲ್ಲಿಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ್‌, ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವಿ.ಎಲ್‌.ಎಸ್‌ ಕುಮಾರ್‌, ಡಾ.ಅರವಿಂದ್‌, ಎಲ್‌.ಎನ್‌.ಮಹೇಂದ್ರಕರ್‌, ರವಿಕುಮಾರ್‌, ರೇಷ್ಮಾ, ನಾಗರಾಜ್‌ ನಾಯಕ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ