ಆ್ಯಪ್ನಗರ

ಪ್ರಚಾರ ಭಾಷಣಕ್ಕೆ ಅಡ್ಡಿ: ಕ್ರಮಕ್ಕೆ ಒತ್ತಾಯ

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಪರವಾಗಿ ಕೈಗೊಂಡಿದ್ದ ಚುನಾವಣೆ ಪ್ರಚಾರ ಸಭೆಗೆ ಚುನಾವಣೆ ವೀಕ್ಷ ಕ ಸಿಬ್ಬಂದಿ ಅಡ್ಡಿ ಪಡಿಸಿದ್ದಾರೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠ ಮಂಗಳವಾರ ದೂರು ಸಲ್ಲಿಸಿದೆ.

Vijaya Karnataka 11 Apr 2019, 5:00 am
ಹೊಸನಗರ : ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಪರವಾಗಿ ಕೈಗೊಂಡಿದ್ದ ಚುನಾವಣೆ ಪ್ರಚಾರ ಸಭೆಗೆ ಚುನಾವಣೆ ವೀಕ್ಷ ಕ ಸಿಬ್ಬಂದಿ ಅಡ್ಡಿ ಪಡಿಸಿದ್ದಾರೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠ ಮಂಗಳವಾರ ದೂರು ಸಲ್ಲಿಸಿದೆ.
Vijaya Karnataka Web disruption to campaign speech insist on action
ಪ್ರಚಾರ ಭಾಷಣಕ್ಕೆ ಅಡ್ಡಿ: ಕ್ರಮಕ್ಕೆ ಒತ್ತಾಯ


ಪಟ್ಟಣ ಸಮೀಪದ ಮಾವಿನಕೊಪ್ಪದಲ್ಲಿ ಶಾಸಕ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಅಭ್ಯರ್ಥಿ ಪರವಾಗಿ ಸೋಮವಾರ ರಾತ್ರಿ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಬಿಜೆಪಿ ಮುಖಂಡ ಎನ್‌.ಆರ್‌.ದೇವಾನಂದ್‌ ಅವರು ಪ್ರಚಾರ ಭಾಷಣ ಮಾಡುವ ವೇಳೆ ವೀಕ್ಷ ಕ ಸಿಬ್ಬಂದಿ ಪ್ರದೀಪ್‌ ಎಂಬುವವರು ಸಭೆಯ ಮಧ್ಯದಲ್ಲಿಯೇ ಈ ರೀತಿ ಮಾತನಾಡಬಾರದು ಎಂದು ತಿಳಿಸಿ ಭಾಷಣಕ್ಕೆ ಅಡ್ಡಿ ಪಡಿಸಿದ್ದಾರೆ. ಅಸಂವಿಧಾನಿಕವಾಗಲೀ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಲೀ ಆಗದಿದ್ದರೂ, ಅನಗತ್ಯವಾಗಿ ಅಡ್ಡಿ ಪಡಿಸಿದ್ದಾರೆ. ಕೂಡಲೇ ಸಭೆಯ ಚಿತ್ರೀಕರಣವನ್ನು ಪರಿಶೀಲಿಸಿ ಭಾಷಣಕ್ಕೆ ಅಡ್ಡಿ ಪಡಿಸಿದ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ಪ್ರಕೋಷ್ಠದ ಸಂಚಾಲಕ ವಾಲೆಮನೆ ಶಿವಕುಮಾರ್‌ ಸಾಗರ ಉಪವಿಭಾಗಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ