ಶಿವಮೊಗ್ಗ : ನಗರದ ವಾಸವಿ ಸಮುದಾಯ ಭವನದಲ್ಲಿ , ಅವಧೂತ ವಿನಯ ಗುರೂಜಿಯವರ ಗೌರಿಗದ್ದೆ ಮಹಾತ್ಮಗಾಧಿ ಟ್ರಸ್ಟ್ ವತಿಯಿಂದ 400ಕ್ಕೂ ನೆರೆ ಸಂತ್ರಸ್ತರಿಗೆ ಸ್ವಚ್ಛತಾ ಸಾಮಗ್ರಿ, ಬಟ್ಟೆ, ದಿನನಿತ್ಯ ಬಳಸುವ ವಸ್ತುಗಳನ್ನು ಹೊಂದಿದ್ದ ಕಿಟ್ ವಿತರಣೆ ಮಾಡಲಾಯಿತು.
ಸರ್ಜಿ ಆಸ್ಪತ್ರೆ ಹಾಗೂ ರೌಂಡ್ ಟೇಬಲ್ ವತಿಯಿಂದ ಒಂದು ಸಾವಿರ ಮಕ್ಕಳಿಗೆ ಉಚಿತ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಾಸವಿ ಸಮುದಾಯ ಭವನದಲ್ಲಿ 350 ಟೈಫಾಯಿಡ್ ಲಸಿಕೆಯನ್ನು ಕುಂಬಾರ ಬೀದಿ, ಗುಂಡಪ್ಪ ಶೆಡ್ ಮತ್ತು ರಾಮಣ್ಣ ಶ್ರೇಷ್ಠಿ ಪಾರ್ಕ್ ಸುತ್ತಲಿನ ಮಕ್ಕಳಿಗೆ ಹಾಕಲಾಯಿತು.
ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ಪಾದಯಾತ್ರೆಯ ಮೂಲಕ ವಿವಿಧ ಬಡಾವಣೆಗಳಿಗೆ ತೆರಳಿ ಪ್ರವಾಹದಿಂದ ಬಿದ್ದ ಮನೆಗಳಿಗೆ ಭೇಟಿನೀಡಿ ನೊಂದವರಿಗೆ ಸಂತೈಸಿದರು.
ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಟ್ರಸ್ಟ್ ಸದಸ್ಯ, ರೌಂಡ್ ಟೇಬಲ್ನ ಸದಸ್ಯರು ಹಾಗೂ ಸರ್ಜಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.
ಸರ್ಜಿ ಆಸ್ಪತ್ರೆ ಹಾಗೂ ರೌಂಡ್ ಟೇಬಲ್ ವತಿಯಿಂದ ಒಂದು ಸಾವಿರ ಮಕ್ಕಳಿಗೆ ಉಚಿತ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಾಸವಿ ಸಮುದಾಯ ಭವನದಲ್ಲಿ 350 ಟೈಫಾಯಿಡ್ ಲಸಿಕೆಯನ್ನು ಕುಂಬಾರ ಬೀದಿ, ಗುಂಡಪ್ಪ ಶೆಡ್ ಮತ್ತು ರಾಮಣ್ಣ ಶ್ರೇಷ್ಠಿ ಪಾರ್ಕ್ ಸುತ್ತಲಿನ ಮಕ್ಕಳಿಗೆ ಹಾಕಲಾಯಿತು.
ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ಪಾದಯಾತ್ರೆಯ ಮೂಲಕ ವಿವಿಧ ಬಡಾವಣೆಗಳಿಗೆ ತೆರಳಿ ಪ್ರವಾಹದಿಂದ ಬಿದ್ದ ಮನೆಗಳಿಗೆ ಭೇಟಿನೀಡಿ ನೊಂದವರಿಗೆ ಸಂತೈಸಿದರು.
ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಟ್ರಸ್ಟ್ ಸದಸ್ಯ, ರೌಂಡ್ ಟೇಬಲ್ನ ಸದಸ್ಯರು ಹಾಗೂ ಸರ್ಜಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.