ಆ್ಯಪ್ನಗರ

ಕುರುಬ ಸಂಘದ ಬಯೋಮೆಟ್ರಿಕ್‌ ಕಾರ್ಡ್‌ ವಿತರಣೆ

ಕರ್ನಾಟಕ ಪ್ರದೇಶ ಕುರುಬರ ಸಂಘದ ಹಾಲಿ ಪದಾಧಿಕಾರಿಗಳ ಅವಧಿ ಮುಗಿದಿದ್ದು, ಆಗಸ್ಟ್‌ನಲ್ಲಿ ಸಂಘದ ಚುನಾವಣೆ ನಡೆಯಲಿದೆ ಎಂದು ಸಂಘದ ಸಂಘಟನಾ ಕಾರ್ಯದರ್ಶಿ ಕೆ.ರಂಗನಾಥ್‌ ಹೇಳಿದರು.

Vijaya Karnataka 5 Jul 2019, 5:00 am
ಶಿವಮೊಗ್ಗ : ಕರ್ನಾಟಕ ಪ್ರದೇಶ ಕುರುಬರ ಸಂಘದ ಹಾಲಿ ಪದಾಧಿಕಾರಿಗಳ ಅವಧಿ ಮುಗಿದಿದ್ದು, ಆಗಸ್ಟ್‌ನಲ್ಲಿ ಸಂಘದ ಚುನಾವಣೆ ನಡೆಯಲಿದೆ ಎಂದು ಸಂಘದ ಸಂಘಟನಾ ಕಾರ್ಯದರ್ಶಿ ಕೆ.ರಂಗನಾಥ್‌ ಹೇಳಿದರು.
Vijaya Karnataka Web distribution of shepherds association biometric card
ಕುರುಬ ಸಂಘದ ಬಯೋಮೆಟ್ರಿಕ್‌ ಕಾರ್ಡ್‌ ವಿತರಣೆ


ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿ, ಕುರುಬ ಸಮಾಜದ ಏಳಿಗೆಗಾಗಿ 1924ರಲ್ಲಿ ಸ್ಥಾಪನೆಗೊಂಡ ಸಂಘವನ್ನು ಇಲ್ಲಿಯವರೆಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಬೆಳೆಸುವಲ್ಲಿ ಆಜೀವ ಸದಸ್ಯರು ಹಾಗೂ ಸಂಘದ ಪದಾಧಿಕಾರಿಗಳ ಸೇವೆ ಸ್ಮರಣೀಯ ಎಂದರು.

ಬಯೋಮೆಟ್ರಿಕ್‌ ಕಾರ್ಡ್‌ ವಿತರಣೆ: ಆಗಸ್ಟ್‌ ನಲ್ಲಿ ನಡೆಯಲಿರುವ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಆಜೀವ ಸದಸ್ಯತ್ವದ ಬಯೋಮೆಟ್ರಿಕ್‌ ಕಾರ್ಡ್‌ ವಿತರಿಸಲಾಗುತ್ತಿದ್ದು, ಜು.8ರಿಂದ 14ರವರೆಗೆ ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ನಗರದ ಕುರುಬರ ವಿದ್ಯಾರ್ಥಿ ನಿಲಯದಲ್ಲಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಭಾಗದ ಸದಸ್ಯರಿಗೆ ಕಾರ್ಡ್‌ ವಿತರಣೆ ಮಾಡಲಾಗುವುದು ಎಂದರು.

ಹಾಗೆಯೇ, ಭದ್ರಾವತಿ, ಶಿಕಾರಿಪುರ ತಾಲೂಕು ಕುರುಬರ ಸಂಘದಲ್ಲಿ ಆಯಾ ತಾಲೂಕಿನ ಸದಸ್ಯರ ಕಾರ್ಡ್‌ ವಿತರಣೆ ಮಾಡಲಾಗುವುದು. ಈ ಬಾರಿ ಜಿಲ್ಲೆಯಲ್ಲಿ 6400 ಬಯೋಮೆಟ್ರಿಕ್‌ ಕಾರ್ಡ್‌ ಸದಸ್ಯತ್ವ ಮಾಡಲಾಗಿದ್ದು, ಚುನಾವಣೆಯಲ್ಲಿ ಮತ ನೀಡಲು ಅರ್ಹರಾಗಿರುವ ಮತದಾರರಿಗೆ ಮಾತ್ರ ಕಾರ್ಡ್‌ ವಿತರಿಸಲಾಗುತ್ತಿದೆ ಎಂದರು.

2013ರ ಚುನಾವಣೆಯಲ್ಲಿ ಜಿಲ್ಲೆಯೊಂದರಲ್ಲಿ ನಕಲಿ ಮತದಾನ ಆಗಿದೆ ಎಂಬ ಕಾರಣಕ್ಕಾಗಿ ಸಂಘದ ಸರ್ವಸದಸ್ಯರ ಸಭೆಯಲ್ಲಿ ಆಜೀವ ಸದಸ್ಯತ್ವದ ಕಾರ್ಡ್‌ಗಳನ್ನು ರದ್ದುಪಡಿಸಿ ಹೊಸದಾಗಿ ಬಯೋಮೆಟ್ರಿಕ್‌ ಕಾರ್ಡ್‌ ಮಾಡಿಸಿ ಮತದಾನ ಪ್ರಕ್ರಿಯೆ ನಡೆಯಲೆಂದು ತೀರ್ಮಾನಿಸಲಾಯಿತು. ಅದರಂತೆಯೇ ರಾಜ್ಯಾದ್ಯಂತ ಬಯೋಮೆಟ್ರಿಕ್‌ ಆಜೀವ ಸದಸ್ಯತ್ವ ಅಭಿಯಾನ ನಡೆಯುತ್ತಿದೆ ಎಂದರು.

ಸಂಘದ ನಿರ್ದೇಶಕ ಎಸ್‌.ಪಿ.ಶೇಷಾದ್ರಿ ಮಾತನಾಡಿ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಂಘ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅವರ ಶ್ರಮದ ಪ್ರತಿಫಲವಾಗಿ ಇಂದು ಎಲ್ಲ ತಾಲೂಕಿನಲ್ಲೂ ಸಮಾಜದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ ನಿರ್ಮಾಣವಾಗಿವೆ. ಅಲ್ಲದೇ ಪ್ರತಿವರ್ಷವೂ ಸಂಘದಿಂದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೆ, ಸಮಾಜದ ಅಭಿವೃದ್ಧಿಗೆ ಸಂಘ ಹೆಚ್ಚಿನ ಶ್ರಮ ಹಾಕಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ರಾಜ್ಯ ನಿರ್ದೇಶಕರಾದ ಸಾಗರದ ಮಂಜುನಾಥ್‌ ಹೇಮಾವತಿ, ಶಿಕಾರಿಪುರ ತಾಲೂಕು ಅಧ್ಯಕ್ಷ ಕಬಡ್ಡಿ ರಾಜಣ್ಣ, ಭದ್ರಾವತಿ ತಾಲೂಕು ಅಧ್ಯಕ್ಷ ಬಿ.ಎಂ. ಸಂತೋಷ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ