ಆ್ಯಪ್ನಗರ

ಡಿಕೆ ಶಿವಕುಮಾರ್ ಖಂಡಿತವಾಗಿಯೂ ಜೈಲಿಗೆ ಹೋಗ್ತಾರೆ: ಈಶ್ವರಪ್ಪ

ಉಪ ಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್ ಅವರು ಖಂಡಿತವಾಗಿಯೂ ಜೈಲಿಗೆ ಹೋಗುತ್ತಾರೆ. ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಕೇಸ್ ನಲ್ಲಿ ಈ ಹಿಂದೆ ಅವರು ಜೈಲಿಗೆ ಹೋಗಿದ್ದರು. ಈ ಬಾರಿ ಪುನಃ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಅಕ್ರಮ ಆಸ್ತಿ ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಅಸ್ತು ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ ಹೀಗೆ ಹೇಳಿದ್ದಾರೆ.

Reported byಉದಯ ಸಾಗರ್ | Edited byಚೇತನ್ ಓ.ಆರ್. | Vijaya Karnataka Web 19 Oct 2023, 7:42 pm

ಹೈಲೈಟ್ಸ್‌:

  • ಉಪ ಮುಖ್ಯಮಂತ್ರಿ ಡಿಕೆಶಿ ಪುನಃ ಜೈಲಿಗೆ ಹೋಗ್ತಾರೆ ಎಂದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ.
  • ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ.
  • ಈಗಾಗಲೇ ಬೇಲ್ ಮೇಲಿರುವ ಡಿಕೆಶಿ, ಪುನಃ ಜೈಲಿಗೆ ಹೋಗ್ತಾರೆ ಎಂದು ಹೇಳಿದ್ದಾರೆ.
  • ಜನಕ್ಕೆ ಬೇಡವಾದ ಸರ್ಕಾರವನ್ನು ಯಾಕೆ ಸರಕಾರ ಬೀಳಿಸಬಾರದು? ಈಶ್ವರಪ್ಪ ಪ್ರಶ್ನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ks eshwarappa
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೆಎಸ್ ಈಶ್ವರಪ್ಪ.
ಶಿವಮೊಗ್ಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಜನವಿರೋಧಿ ಸರ್ಕಾರವಾಗಿದೆ. ಹಾಗಾಗಿ, ಆ ಸರ್ಕಾರವನ್ನು ಬೇಗನೇ ಉರುಳಿಸಬೇಕಿದೆ ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ವಿರುದ್ಧವೂ ಹರಿಹಾಯ್ದು, ಡಿಕೆಶಿಯವರ ಅಕ್ರಮ ಆಸ್ತಿ ವಿಚಾರದಲ್ಲಿ ಸಿಬಿಐ ತನಿಖೆ ಆರಂಭಿಸಲು ರಾಜ್ಯ ಹೈಕೋರ್ಟ್ ಆದೇಶಿಸಿದೆ. ಇನ್ನು ಅವರು ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಹೇಳಿದರು.
ರಾಜ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, “ಯಾಕೆ ಕಾಂಗ್ರೆಸ್ ಸರ್ಕಾರ ಬೀಳಿಸಬಾರದು.!? ಬಿಜೆಪಿ ಸರ್ಕಾರ ಯಾಕೆ ಬರಬಾರದು.!? ಎಂದು ಮರುಪ್ರಶ್ನೆ ಹಾಕಿದರು. “ಡಿಕೆ ಶಿವಕುಮಾರ್ ಬೆಳಗಾವಿಗೆ ಹೋದರೆ ಒಬ್ಬ ಶಾಸಕನೂ ಅಲ್ಲಿಲ್ಲ ಎಂದಾದರೆ ಏನು ಮೆಸೇಜ್ ಹೋಗುತ್ತೆ ಎಂದು ಅವರು ಕೇಳಿದರು.


“ಕಾಂಗ್ರೆಸ್ ಸರ್ಕಾರ ಬೇಡ ಎಂದು ಅವರ ಶಾಸಕರೇ ತೀರ್ಮಾನ ಮಾಡಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸತೀಶ್ ಜಾರಕಿಹೊಳಿ ಶಾಸಕರನ್ನು ಫಾರೀನ್ ಗಾದರೂ ಕರೆದುಕೊಂಡು ಹೋಗಲಿ, ಎಲ್ಲಿಗಾದರೂ ಕರೆದುಕೊಂಡು ಹೋಗಲಿ. ಒಟ್ಟಾರೆ ಅವರೆಲ್ಲರೂ ಈ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವುದು ನಿಜ’’ ಎಂದರು.

“ಇವರದ್ದೇ ಪಕ್ಷದ ನಾಯಕರು 20 ಜನ ಕರೆದುಕೊಂಡು ಬೇರೆ ಕಡೆಗೆ ವಲಸೆ ಹೋಗ್ತಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಸಚಿವ ಅಸಮಾಧಾನ ವ್ಯಕ್ತಪಡಿಸುತ್ತಾರೆ.‌ ಉಪಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್ ಅವರು ಬಂಡಾಯ ಶಮನಕ್ಕಾಗಿ ಬೆಳಗಾವಿಗೆ ಹೋದಾಗ ಕಾಂಗ್ರೆಸ್ಸಿನ ಒಬ್ಬೇ ಒಬ್ಬ ಶಾಸಕರೂ ಅಲ್ಲಿರಲಿಲ್ಲ. ಇನ್ನುಳಿದಂತೆ, ರಾಜ್ಯದಲ್ಲಿ ವಿದ್ಯುತ್ ಕೊರತೆ ಜಾಸ್ತಿ ಆಗಿದೆ.‌ ರಾಜ್ಯದ ಅಭಿವೃದ್ಧಿ ಬಗ್ಗೆ ಸರ್ಕಾರಕ್ಕೆ ಗಮನ ಇಲ್ಲ.‌ಕಾಂಗ್ರೆಸ್ ಶಾಸಕರಿಗೆ ಈ ಸರಕಾರ ಬೇಡ ಆಗಿದೆ.‌ ಅವರೇ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಪಕ್ಷವು ಸರ್ಕಾರ ಬೀಳಿಸುತ್ತದೆ’’ ಎಂದು ಅವರು ಹೇಳಿದರು.

ತೀರ್ಥಹಳ್ಳಿ ತಾಲೂಕಿನ 18 ಕಡೆ ಸಮಸ್ಯೆ ಉಲ್ಬಣ: ದಲಿತ ಕುಟುಂಬಗಳಿಗೆ ಪ್ಲೋರೈಡ್‌ ನೀರೇ ಗತಿ


ಡಿಕೆಶಿ ಜೈಲಿಗೆ ಹೋಗೋದು ಗ್ಯಾರಂಟಿ

ಇದೇ ವೇಳೆ, ಉಪ ಮುಖ್ಯಮಂತ್ರಿ ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಕೇಸ್ ತನಿಖೆಯನ್ನು ಸಿಬಿಐ ಮುಂದುವರಿಸಲು ರಾಜ್ಯ ಹೈಕೋರ್ಟ್ ನೀಡಿರುವ ಆದೇಶದ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಈಶ್ವರಪ್ಪ, “ಡಿಕೆಶಿಯವರ ಮನೆಯ ಮೇಲೆ ರೈಡ್ ಆಗಿದ್ದ ಸಂದರ್ಭದಲ್ಲಿ ಅವರ ಮನೆಯಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಅವರು ಜೈಲಿಗೆ ಹೋಗಿದ್ದರು. ಡಿಕೆಶಿ ಅವರು ಜೈಲಿಗೆ ಹೋಗಿ ಬೇಲ್ ನಲ್ಲಿದ್ದಾರೆ. ಅದು ಬಹಿರಂಗವಾಗಿ ಹೇಳುವುದು ತಪ್ಪಾ.? ಡಿಕೆಶಿ ಅಕ್ರಮ ಸಂಪಾದನೆ ಪ್ರಕರಣ ಸಿಬಿಐ ತನಿಖೆ ಮಾಡುತ್ತಿದೆ. ಬರೆದಿಟ್ಟುಕೊಳ್ಳಿ ಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೆ’’ ಎಂದು ಹೇಳಿದರು.

ಇದೇ ವೇಳೆ, ಡಿಕೆಶಿ ಭಂಡತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಈಶ್ವರಪ್ಪ, “ಡಿಕೆಶಿ ಅವರಿಗೆ ಸಂಬಂಧಿಸಿದ ನೂರಾರು ಕೋಟಿ ಹಣ ಸಿಕ್ಕಿದೆ. ಡಿಕೆಶಿ ಉತ್ತರದಲ್ಲೂ ಗೂಂಡಾಗಿರಿ ಮಾಡುತ್ತಿರುವುದು ಕಂಡು ಬರುತ್ತದೆ. ಸಿಬಿಐ ತನಿಖೆ ಮಾಡಲಿ. 100 ಕೋಟಿ ಅಕ್ರಮ ಹಣ ಬೆಂಗಳೂರಿನಲ್ಲಿ ಮೊನ್ನೆ ಪತ್ತೆಯಾಗಿದೆ. ಅದರ ತನಿಖೆ ಮಾಡಿ ಅಂತಾ ಬಿಜೆಪಿ ಕೇಳುವುದು ತಪ್ಪಾ. ನೀವು ಕಳ್ಳರು ಅಂತಾ ನಾವು ನೇರವಾಗಿ ಹೇಳಿಲ್ಲ ಎಂದು ಹೇಳಿದರು.

ಆನೆ ಬಾಲ ಅರ್ಧ ಕಟ್ ಮಾಡಿದ ಕಿಡಿಗೇಡಿಗಳು ಯಾರು‌? ಸಕ್ರೆಬೈಲಿನಲ್ಲಿ ಹೀನ ಘಟ‌ನೆ

ಆಯನೂರು ವಿರುದ್ಧ ಗುಡುಗು

ಆಯನೂರು ಮಂಜುನಾಥ್ ಅವರು ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಉತ್ತರಿಸಿದ ಅವರು, ಆಯನೂರು ಅವರಂಥ ತಲೆಕೆಟ್ಟವರ ಬಗ್ಗೆ ಮಾತನಾಡುವುದಿಲ್ಲ ಎಂದು ಗುಡುಗಿದರು. ಅವರು ಎಷ್ಟು ಪಕ್ಷ ಹೋಗಿ ಬಂದಿದ್ದಾರೆ ಅಂತ ಅವರಿಗೇ ಚೆನ್ನಾಗಿ ಗೊತ್ತಿದೆ. ಅವರಿಗೆ ಬಿಜೆಪಿ ವಿರುದ್ಧ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ರಾಮಾಯಣ, ಮಹಾಭಾರತದಂತೆ ಕಾಂಗ್ರೆಸ್ ಬಗ್ಗೆ ಬರೆಯಬಹುದು. ಅಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ ಅಲ್ಲಿ. ಮೊದಲು ಅದರ ಬಗ್ಗೆ ಹೇಳಲಿ ಎಂದು ಅವರು ತಿಳಿಸಿದರು.

ಅರಿಶಿನ - ಕುಂಕುಮ ಸುತ್ತೋಲೆ ವಿರುದ್ಧ ಕಿಡಿ

"ಪಾರಂಪರಿಕ ಕಟ್ಟಡಗಳಲ್ಲಿ ಆಯುಧ ಪೂಜೆ ಸಂದರ್ಭ ಅರಿಶಿಣ- ಕುಂಕುಮ ಬಳಸಬಾರದು'' ಎಂದು ರಾಜ್ಯ ಸರ್ಕಾರ ಸುತ್ತೋಲೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ರಾಸಾಯನಿಕ ಪದಾರ್ಥ ಇರುವ ಅರಿಶಿಣ - ಕುಂಕುಮ ಬಳಸಬಾರದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರ ಹಿಂದೆ ಜಾಣತನವಿದೆ. ಹಿಂದೂಗಳ ವಿರುದ್ಧ ಏನೇನು ಮಾಡಬೇಕೋ ಅವೆಲ್ಲವೂ ರಾಜ್ಯ ಸರ್ಕಾರ ಮಾಡುತ್ತಿದೆ'' ಎಂದು ಈಶ್ವರಪ್ಪ ಅವರು ಆಪಾದಿಸಿದ್ದಾರೆ.
ಲೇಖಕರ ಬಗ್ಗೆ
ಉದಯ ಸಾಗರ್
2012ರಲ್ಲಿ ಟಿವಿ ವಾಹಿನಿ ಮೂಲಕ ಪತ್ರಕರ್ತ ವೃತ್ತಿಗೆ ಪಾದಾರ್ಪಣೆ. ಶಿವಮೊಗ್ಗ - ಚಿಕ್ಕಮಗಳೂರು ಅರೆಕಾಲಿಕ ವರದಿಗಾರನಾಗಿ ಹಲವು ಪತ್ರಿಕೆಗಳಿಗೆ ಕಾರ್ಯ ನಿರ್ವಹಣೆ. ಮಲೆನಾಡು ವಿಭಾಗದಲ್ಲಿ ಸುದ್ದಿಸಂಸ್ಥೆಯ ಪೂರ್ಣ ಪ್ರಮಾಣದ ವರದಿಗಾರನಾಗಿ 2018ರಲ್ಲಿ ನಿಯೋಜನೆ. ವಿಕೆ ಡಿಜಿಟಲ್‌ಗೆ 2020ರಿಂದ ಶಿವಮೊಗ್ಗ ಜಿಲ್ಲೆ ಸ್ಟ್ರಿಂಜರ್‌ ಆಗಿ ಕಾರ್ಯ ನಿರ್ವಹಣೆ. ವನ್ಯಜೀವಿ - ಪರಿಸರ ಜಾಗೃತಿ, ತಿರುಗಾಟ, ಮಲೆನಾಡಿನ ಜನ ಸಂಪರ್ಕ ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ