ಆ್ಯಪ್ನಗರ

ಪ್ಲಾಸ್ಟಿಕ್‌ ರಾಷ್ಟ್ರಧ್ವಜ ಉತ್ಪಾದನೆ, ಮಾರಾಟಕ್ಕೆ ಅವಕಾಶ ಬೇಡ

ಪ್ಲಾಸ್ಟಿಕ್‌ ರಾಷ್ಟ್ರಧ್ವಜ ಉತ್ಪಾದನೆ, ಮಾರಾಟಕ್ಕೆ ಅವಕಾಶ ನೀಡಬಾರದು. ರಾಷ್ಟ್ರಧ್ವಜಕ್ಕೆ ಅವಮಾನವಾಗದಂತೆ ಆಡಳಿತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಹಿಂದೂ ಜನ ಜಾಗೃತಿ ಸಮಿತಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು.

Vijaya Karnataka 3 Aug 2019, 6:45 pm
ತೀರ್ಥಹಳ್ಳಿ: ಪ್ಲಾಸ್ಟಿಕ್‌ ರಾಷ್ಟ್ರಧ್ವಜ ಉತ್ಪಾದನೆ, ಮಾರಾಟಕ್ಕೆ ಅವಕಾಶ ನೀಡಬಾರದು. ರಾಷ್ಟ್ರಧ್ವಜಕ್ಕೆ ಅವಮಾನವಾಗದಂತೆ ಆಡಳಿತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಹಿಂದೂ ಜನ ಜಾಗೃತಿ ಸಮಿತಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು.
Vijaya Karnataka Web SMR-2TTH3


ಆಗಸ್ಟ್‌ 15ರಂದು ಬೆಳಗ್ಗೆ ರಾಷ್ಟ್ರಧ್ವಜವನ್ನು ಅತ್ಯಂತ ಗೌರವದಿಂದ ಹಾರಿಸಲಾಗುತ್ತಿದ್ದು ಸಂಜೆ ಆಗುತ್ತಿದ್ದಂತೆ ರಸ್ತೆ, ಚರಂಡಿ, ಕಸದ ಬುಟ್ಟಿ ಸೇರಿದಂತೆ ಅನೇಕ ಸ್ಥಳದಲ್ಲಿ ಬೀಳುತ್ತದೆ. ರಾಷ್ಟ್ರಧ್ವಜಕ್ಕೆ ಅಗೌರವವಾಗುವ ದಿನಗಳನ್ನು ಕಾಣುವಂತಾಗಿದ್ದು ಇಂತಹ ಅವಮಾನಕರ ಘಟನೆ ನಡೆಯದಂತೆ ಆಡಳಿತ ಗಮನ ಹರಿಸಬೇಕು ಎಂದು ಸಮಿತಿ ಒತ್ತಾಯಿಸಿತು.

ಮುಂಬೈ ಹೈಕೋರ್ಟ್‌ ರಾಷ್ಟ್ರಧ್ವಜಕ್ಕೆ ಅವಮಾನವಾಗದಂತೆ ಕ್ರಮವಹಿಸುವ ಕುರಿತು ಆದೇಶ ನೀಡಿದೆ. ಪ್ಲಾಸ್ಟಿಕ್‌ ಸಾಮಗ್ರಿಗಳ ತಯಾರಿಕೆ ಕುರಿತಂತೆ ರಾಜ್ಯ ಸರಕಾರ ನಿರ್ಬಂಧ ಹೇರಿದೆ. ಕಾನೂನು ಕ್ರಮಕ್ಕೆ ಅವಕಾಶ ಇದ್ದಾಗ್ಯೂ ಅಗೌರವವಾಗುವಂತೆ ಪ್ಲಾಸ್ಟಿಕ್‌ನಲ್ಲಿ ರಾಷ್ಟ್ರಧ್ವಜ ತಯಾರಿಸಲಾಗುತ್ತಿದೆ. ರಾಷ್ಟ್ರಧ್ವಜಕ್ಕೆ ಅಗೌರವ ಆಗದಂತೆ ತಡೆಯಲು ಸ್ಥಳೀಯ ಸ್ವಯಂ ಸೇವಾ ಸಮಿತಿ ರಚಿಸಿ ನಿಯಂತ್ರಣಕ್ಕೆ ಸೂಕ್ತ ತೆಗೆದುಕೊಳ್ಳಬೇಕು ಎಂದು ಸಮಿತಿ ಆಗ್ರಹಿಸಿತು.

ಹಿಂದೂ ಜನಜಾಗೃತಿ ಸಮಿತಿಯ ನರೇಂದ್ರಗೌಡ, ವಿನಯಗೌಡ, ಮಮತ ಇದ್ದರು. ಶಿರಸ್ತೇದಾರ್‌ ಜಯಪ್ರಕಾಶ್‌ ಮನವಿ ಸ್ವೀಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ