ಆ್ಯಪ್ನಗರ

‘ರಕ್ತದಾನಕ್ಕೆ ಹಿಂಜರಿಕೆ ಸಲ್ಲದು’

ವಿಜ್ಞಾನ ಎಷ್ಟೇ ಮುಂದುವರಿದರೂ ಕೃತಕವಾಗಿ ರಕ್ತ ಸೃಷ್ಟಿಸಲು ಸಾಧ್ಯವಾಗಿಲ್ಲ. ಹಾಗಾಗಿ ರಕ್ತದಾನದ ಮೂಲಕವೇ ಇನ್ನೊಬ್ಬರ ಜೀವ ಉಳಿಸಲು ಸಾಧ್ಯ ಎಂದು ಸಿಮ್ಸ್‌ ಆಸ್ಪತ್ರೆ ವೈದ್ಯ ಡಾ.ಕಾರ್ತಿಕ್‌ ಹೇಳಿದರು.

Vijaya Karnataka 31 Jan 2019, 5:00 am
ರಿಪ್ಪನ್‌ಪೇಟೆ: ವಿಜ್ಞಾನ ಎಷ್ಟೇ ಮುಂದುವರಿದರೂ ಕೃತಕವಾಗಿ ರಕ್ತ ಸೃಷ್ಟಿಸಲು ಸಾಧ್ಯವಾಗಿಲ್ಲ. ಹಾಗಾಗಿ ರಕ್ತದಾನದ ಮೂಲಕವೇ ಇನ್ನೊಬ್ಬರ ಜೀವ ಉಳಿಸಲು ಸಾಧ್ಯ ಎಂದು ಸಿಮ್ಸ್‌ ಆಸ್ಪತ್ರೆ ವೈದ್ಯ ಡಾ.ಕಾರ್ತಿಕ್‌ ಹೇಳಿದರು.
Vijaya Karnataka Web SMR-28RPT4


ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವ ರೆಡ್‌ ಕ್ರಾಸ್‌, ರೆಡ್‌ ರಿಬ್ಬನ್‌ ಕ್ಲಬ್‌ ಹಾಗೂ ಸಿಮ್ಸ್‌ ಆಸ್ಪತ್ರೆ ಶಿವಮೊಗ್ಗ ಆಶ್ರಯದಲ್ಲಿ ಸೋಮವಾರ ರಕ್ತದಾನ ಹಾಗೂ ರಕ್ತದ ಗುಂಪು ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ರಕ್ತದಾನವು ಸರ್ವ ಶ್ರೇಷ್ಠ. ಯುವ ಸಮೂಹ ರಕ್ತದಾನ ಮಾಡಿದರೆ ಇನ್ನೊಂದು ಜೀವದ ಉಳಿವಿಗೆ ಸಹಕರಿಸಿದಂತಾಗುತ್ತದೆ. ಆರೋಗ್ಯವಂತರು 4ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ. ಒಂದು ಯುನಿಟ್‌ ರಕ್ತದಿಂದ 4 ಜನರ ಜೀವ ಉಳಿಸಲು ಸಾಧ್ಯ. ವಿದ್ಯಾರ್ಥಿಗಳು ಯಾವುದೇ ಭಯ ಮತ್ತು ಮುಜಗರವಿಲ್ಲದೆ ರಕ್ತದಾನಕ್ಕೆ ಮುಂದಾಗಬೇಕೆಂದರು. ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯ ರಕ್ತನಿಧಿ ಘಟಕದ ಆಪ್ತ ಸಮಾಲೋಚಕ ಹನುಮಂತಪ್ಪ ಅವರು ರಕ್ತದಾನದ ಮಹತ್ವ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಎಸ್‌.ನಳಿನಚಂದ್ರ ಅಧ್ಯಕ್ಷ ತೆ ವಹಿಸಿದ್ದರು. ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಪ್ರೊ.ಚಂದ್ರಶೇಖರ್‌, ರಶ್ಮಿ, ಯುವ ರೆಡ್‌ ಕ್ರಾಸ್‌ ಘಟಕದ ಸಂಯೋಜಕ ಎಂ.ಆರ್‌.ಆನಂದ ಇದ್ದರು. ದೇವಿಕಾ ಪ್ರಾರ್ಥಿಸಿ, ಶ್ವೇತಾ ಸ್ವಾಗತಿಸಿದರು. ಸುಮಾ ನಿರೂಪಿಸಿದರು. ನಿರ್ಮಲ್‌ ವಂದಿಸಿದರು. ಶಿಬಿರದಲ್ಲಿ ವಿದ್ಯಾರ್ಥಿಗಳು 50 ಯೂನಿಟ್‌ ರಕ್ತದಾನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ