ಆ್ಯಪ್ನಗರ

ಮಂಗನಕಾಯಿಲೆ ಲಸಿಕೆ ಹಾಕಿಸಿಕೊಳ್ಳಲು ನಿರ್ಲಕ್ಷ ಬೇಡ

ಮಂಗನ ಕಾಯಿಲೆ ಹರಡದಂತೆ ಮುಂಜಾಗ್ರತೆ ವಹಿಸಲು ಜನರು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ನಿರ್ಲಕ್ಷ ್ಯ ಮಾಡಬಾರದು ಎಂದು ನಿಸರಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಅಕ್ಷ ತಾ ಖಾನಾಪುರ ಹೇಳಿದರು.

Vijaya Karnataka 3 Jul 2019, 5:00 am
ಸೊರಬ: ಮಂಗನ ಕಾಯಿಲೆ ಹರಡದಂತೆ ಮುಂಜಾಗ್ರತೆ ವಹಿಸಲು ಜನರು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ನಿರ್ಲಕ್ಷ ್ಯ ಮಾಡಬಾರದು ಎಂದು ನಿಸರಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಅಕ್ಷ ತಾ ಖಾನಾಪುರ ಹೇಳಿದರು.
Vijaya Karnataka Web SMR-02SRBP3


ಪಟ್ಟಣದ ಲಯನ್ಸ್‌ ಕಲ್ಯಾಣ ಮಂದಿರದಲ್ಲಿ ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾ.ಪಂ., ಪಟ್ಟಣ ಪಂಚಾಯಿತಿ ಹಾಗೂ ನಿಸರಾಣಿ ಪ್ರಾಥಮಿಕ ಆರೋಗ್ಯ ಕೇಂದ್ರ, ಲಯನ್ಸ್‌ ಕ್ಲಬ್‌ ಹಾಗೂ ರೋಟರಿ ಕ್ಲಬ್‌ನಿಂದ ಮಂಗಳವಾರ ಹಮ್ಮಿಕೊಂಡ ಮಂಗನ ಕಾಯಿಲೆ ವಿರುದ್ಧ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಜನವರಿ ತಿಂಗಳಿಂದ ಇಲ್ಲಿಯ ವರೆಗೆ 42 ಮಂಗಗಳು ಸತ್ತಿದ್ದು, ಹಿರೇಶಕುನ, ಯಲಸಿ ಸೇರಿದಂತೆ ಕೆಲವು ಕಡೆ ಸತ್ತ ಮಂಗಗಳಲ್ಲಿ ಕಾಯಿಲೆ ಇರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಕಾಯಿಲೆಯಿಂದ ಮಂಗಗಳು ಸತ್ತ ಪ್ರದೇಶದ ಜನ ಮುಂಜಾಗ್ರತೆಯಿಂದ ಲಸಿಕೆ ಹಾಕಿಸಿಕೊಳ್ಳಬೇಕು. ಪಟ್ಟಣದ ಸಮೀಪ ಹೀರೇಶಕುನದಲ್ಲಿ ಸತ್ತ ಮಂಗದಲ್ಲಿ ಕಾಯಿಲೆ ಕಂಡುಬಂದಿದ್ದರಿಂದ ಪಟ್ಟಣದ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಬೇಕು. ಹಿಂದೆ ಪ್ರಥಮ, ದ್ವಿತೀಯ ವರಸೆ ತೆಗೆದುಕೊಂಡವರು, ವರ್ಧಕ ವರಸೆ ಪಡೆಯಬೇಕು. ಒಂದು ಬಾರಿ ಲಸಿಕೆ ಪಡೆದವರು ಹಾಗೂ ಒಮ್ಮೆಯೂ ಪಡೆಯದವರು ಪ್ರಥಮ ಸುತ್ತಿನ ಲಸಿಕೆ ಪಡೆಯಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ರೋಗ ಹರಡದಂತೆ ತಡೆಗಟ್ಟಬಹುದು ಎಂದರು.

ಲಸಿಕೆ ಹಾಕಿಸಿಕೊಳ್ಳಲು ನೂಕುನುಗ್ಗಲು ಆಗದಂತೆ ವಾರ್ಡ್‌ವಾರು ಕೌಂಟರ್‌ಗಳನ್ನು ನಿರ್ಮಿಸಲಾಗಿದೆ ಎಂದರು.

ಓಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಅಪೂರ್ವ, ಇಂಧುದರ ಪಾಟೀಲ್‌, ಜಿಲ್ಲಾ ಲಯನ್ಸ್‌ ಕ್ಲಬ್‌ ಮಾಜಿ ಗೌರ್ನರ್‌ ಎಚ್‌.ಎಸ್‌.ಮಂಜಪ್ಪ,ಕ್ಲಬ್‌ ಅಧ್ಯಕ್ಷ ರಾಜಶೇಖರಗೌಡ, ರೋಟರಿ ಕ್ಲಬ್‌ ಅಧ್ಯಕ್ಷ ಡಿ.ಎಸ್‌.ಶೇಂಕರ್‌, ಸಂಸ್ಥಾಪಕ ಅಧ್ಯಕ್ಷ ಡಾ.ಜ್ಞಾನೇಶ್‌, ನಿಕಟಪೂರ್ವ ಅಧ್ಯಕ್ಷ ನಾಗರಾಜ್‌ ಗುತ್ತಿ, ರಾಜು ಹಿರಿಯಾವಲಿ, ಜಾವಿದ್‌ ಅಹ್ಮದ್‌ ಸೇರಿದಂತೆ ಶುಶ್ರೂಕಿಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಇಂದೂ ಕೆಎಫ್‌ಡಿ ಲಸಿಕೆ ಹಾಕಿಸಿಕೊಳ್ಳಿ : ಸೊರಬದ ಹಿರೇಶಕುನದಲ್ಲಿ ಸತ್ತ ಮಂಗದಲ್ಲಿ ಕೆಎಫ್‌ಡಿ ಕಂಡುಬಂದಿದ್ದರಿಂದ ತಾಲೂಕು ಆರೋಗ್ಯ ಇಲಾಖೆಯು ಪಟ್ಟಣದ ಜನರಿಗಾಗಿಯೇ 2 ದಿನ ಮಂಗನ ಕಾಯಿಲೆ ವಿರುದ್ಧ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, 7 ಸಾವಿರ ಜನರಿಗೆ ಲಸಿಕೆ ತರಿಸಿದೆ. ಆದರೆ, ಮೊದಲ ದಿನ ಕೇವಲ 486 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಜನರು ತಪ್ಪುಕಲ್ಪನೆ ಹಾಗೂ ನಿರ್ಲಕ್ಷ ್ಯ ತೋರದೆ ಮುಂಜಾಗ್ರತೆಯಿಂದ ಬುಧವಾರ ಲಯನ್ಸ್‌ ಕಲ್ಯಾಣ ಮಂದಿರದಲ್ಲಿ ಲಸಿಕೆ ಪಡೆಯಲು ಅಧಿಕಾರಿಗಳು ಹಾಗೂ ವೈದ್ಯರು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ