ಆ್ಯಪ್ನಗರ

ಜ್ಞಾನಾರ್ಜನೆಗೆ ಅಹಂಕಾರ ಅಡ್ಡಿಯಾಗದಿರಲಿ: ಸ್ವಾಮೀಜಿ

ಗುರುಮುಖೇನ ಅಭ್ಯಾಸ ಮಾಡಿದಾಗ ಮಾತ್ರ ಜ್ಞಾನ ಯಶಸ್ವಿಯಾಗುತ್ತದೆ. ವಿನಯ ವಿಲ್ಲದ ವಿದ್ಯೆ ಪ್ರಕಾಶಿಸುವುದಿಲ್ಲ ಎಂದು ಭೀಮನಕಟ್ಟೆ ಶ್ರೀ ಭೀಮಸೇತು ಮುನಿವೃಂದ ಮಠದ ಶ್ರೀರಘುವರೇಂದ್ರತೀರ್ಥ ಶ್ರೀಪಾದರು ಹೇಳಿದರು.

Vijaya Karnataka 2 Jun 2019, 5:00 am
ಸಾಗರ: ಗುರುಮುಖೇನ ಅಭ್ಯಾಸ ಮಾಡಿದಾಗ ಮಾತ್ರ ಜ್ಞಾನ ಯಶಸ್ವಿಯಾಗುತ್ತದೆ. ವಿನಯ ವಿಲ್ಲದ ವಿದ್ಯೆ ಪ್ರಕಾಶಿಸುವುದಿಲ್ಲ ಎಂದು ಭೀಮನಕಟ್ಟೆ ಶ್ರೀ ಭೀಮಸೇತು ಮುನಿವೃಂದ ಮಠದ ಶ್ರೀರಘುವರೇಂದ್ರತೀರ್ಥ ಶ್ರೀಪಾದರು ಹೇಳಿದರು.
Vijaya Karnataka Web SMR-01SGR10


ಇಲ್ಲಿನ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆಯ ಮಾಧ್ವಮಂದಿರದಲ್ಲಿ ಮಾಧ್ವಸಂಘ ಆಯೋಜಿಸಿದ್ದ ಜಗನ್ನಾಥದಾಸರ ಹರಿಕಥಾಮೃತಸಾರ ಸಮಾರೋಪದಲ್ಲಿ ಅವರು ಶನಿವಾರ ಉಪನ್ಯಾಸ ನೀಡಿದರು.

ಜ್ಞಾನಾರ್ಜನೆಗೆ ಅಹಂಕಾರ ಅಡ್ಡಿಯಾಗುತ್ತದೆ. ಅಹಂಕಾರ ಬಿಟ್ಟು ವಿನೀತಭಾವದಿಂದ ಜ್ಞಾನಾರ್ಜನೆ ಮಾಡಬೇಕು. ಅಹಂಕಾರ ಬಿಟ್ಟು ಹರಿಕಥಾಮೃತಸಾರದ ಸಾರ ತಿಳಿದುಕೊಳ್ಳಬೇಕು ಎಂದು ಹರಿಕಥಾಮೃತಸಾರದ ಆರಂಭದಲ್ಲಿಯೇ ಜಗನ್ನಾಥದಾಸರು ಹೇಳುತ್ತಾರೆ ಎಂದರು.

ಹರಿಕಥಾಮೃತಸಾರವು ಕನ್ನಡದಲ್ಲಿರುವುದರಿಂದ ಬಹಳ ಸುಲಭವಾಗಿ ತಿಳಿದುಬಿಡುತ್ತದೆ ಎನ್ನುವ ಭ್ರಮೆಗೂ ನಾವು ಒಳಗಾಗಿಬಿಡುತ್ತೇವೆ. ಹರಿಕಥಾಮೃತ ಸಾರದ ಶ್ರವಣ ಮತ್ತು ಮನನ ನಮ್ಮ ಶಾಸ್ತ್ರದ ತತ್ವವನ್ನು ಪರಿಚಯಿಸುತ್ತದೆ. ಸಾಗರದ ಮಾಧ್ವಸಂಘ ನಿರಂತರವಾಗಿ ಅಂಥ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವುದು ಮತ್ತು ಒಂದು ವರ್ಷದಿಂದ ಎಡೆಬಿಡದೇ ಹರಿಕಥಾಮೃತಸಾರದ ಪ್ರವಚನವನ್ನು ಶಿವಮೊಗ್ಗದ ಸುಧಾ ಕುಷ್ಠಗಿಯವರು ನಡೆಸಿಕೊಟ್ಟಿರುವುದು ಮಾರ್ಗಸೂಚಿಯಾಗಿದೆ. ಜ್ಞಾನಸತ್ರಗಳು ನಿರಂತರವಾಗಿ ನಡೆಯಬೇಕು, ಧರ್ಮದ ಮಹತ್ವವನ್ನು ತಿಳಿಸುವ ಕೆಲಸ ಆಗಬೇಕು ಎಂದರು.

ಮಾಧ್ವಸಂಘದ ಅಧ್ಯಕ್ಷ ಡಾ. ಗುರುರಾಜ ಕಲ್ಲಾಪುರ ಮಾತನಾಡಿ, ಮನುಷ್ಯ ನಾನು ಎನ್ನುವ ಅಹಂಕಾರದಿಂದ ಹೊರಬರಬೇಕು. ಇದಕ್ಕೆ ಅಧ್ಯಾತ್ಮದ ಚಿಂತನೆಯಿಂದ ಮಾತ್ರ ಅಥೈರ್‍ಸಿಕೊಳ್ಳಲು ಸಾಧ್ಯ. ಹರಿಯ ಶ್ರೇಷ್ಠತೆಯನ್ನು ದಾಸವೇಣ್ಯರು ತಮ್ಮ ಕೀರ್ತನೆಗಳಲ್ಲಿ ತಿಳಿಸಿದ್ದಾರೆ. 32 ಸಂಧಿಗಳಿರುವ ಹರಿಕಥಾಮೃತಸಾರದ ಉಪನ್ಯಾಸ ಒಂದೂವರೆ ವರ್ಷಗಳ ಕಾಲ ನಿರಂತರವಾಗಿ ಮಾಧ್ವಸಂಘದಲ್ಲಿ ನಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಸುಧಾ ಕುಷ್ಠಗಿ ಅವರನ್ನು ಗೌರವಿಸಲಾಯಿತು.

ಮಾಧ್ವಸಂಘದ ಶ್ರೀಪಾದಾಚಾರ್‌ ಹಾವನೂರು, ವೇದವ್ಯಾಸಾಚಾರ್‌, ವೆಂಕಟೇಶ ಕಟ್ಟಿ, ಕಲ್ಯಾಣಿ ರಾಜಗೋಪಾಲ್‌, ಬದರೀಶ್‌, ರಘುನಂದನ ಪುರೋಹಿತ್‌, ಎಚ್‌.ಆರ್‌. ನಾಗಭೂಷಣ, ವಾದಿರಾಜ, ವೆಂಕಣ್ಣಾಚಾರ್‌, ಆನಂದ ಕಲ್ಯಾಣಿ, ರಮಾದೇವಿ, ವಿದ್ವಾನ್‌ ಪಿ.ಎಲ್‌.ಗಜಾನನ ಭಟ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ