ಆ್ಯಪ್ನಗರ

ತಂಬಾಕು ಸೇವೆನೆ ಗೀಳಿಗೆ ಬಿದ್ದು ಹಳಿ ತಪ್ಪದಿರಿ

ಶಿಕ್ಷಣ ಪಡೆದು ಕುಟುಂಬ ನಿರ್ವಹಣೆ ಜತೆಗೆ ಸ್ವಾಸ್ಥ್ಯ ಸಮಾಜದ ಹಳಿಯಲ್ಲಿ ಸಾಗಬೇಕಿದ್ದ ಇಂದಿನ ವಿದ್ಯಾರ್ಥಿಗಳು ತಂಬಾಕು ಸೇವೆನೆಯಂತಹ ದುಶ್ಚಟಗಳ ಗೀಳಿಗೆ ಬಿದ್ದು ಹಳಿತಪ್ಪಿ ನಡೆಯುತ್ತಿದ್ದಾರೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪಾಂಶುಪಾಲ ಪ್ರೊ.ಆರ್‌.ಶಿವೇಶಿ ವಿಷಾದಿಸಿದರು.

Vijaya Karnataka 28 Dec 2018, 5:00 am
ಶಿವಮೊಗ್ಗ: ಶಿಕ್ಷಣ ಪಡೆದು ಕುಟುಂಬ ನಿರ್ವಹಣೆ ಜತೆಗೆ ಸ್ವಾಸ್ಥ್ಯ ಸಮಾಜದ ಹಳಿಯಲ್ಲಿ ಸಾಗಬೇಕಿದ್ದ ಇಂದಿನ ವಿದ್ಯಾರ್ಥಿಗಳು ತಂಬಾಕು ಸೇವೆನೆಯಂತಹ ದುಶ್ಚಟಗಳ ಗೀಳಿಗೆ ಬಿದ್ದು ಹಳಿತಪ್ಪಿ ನಡೆಯುತ್ತಿದ್ದಾರೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪಾಂಶುಪಾಲ ಪ್ರೊ.ಆರ್‌.ಶಿವೇಶಿ ವಿಷಾದಿಸಿದರು.
Vijaya Karnataka Web 27ganesh1


ಬಾಪೂಜಿನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುವ ರೆಡ್‌ ಕ್ರಾಸ್‌ ಘಟಕ ಸಹಯೋಗದಲ್ಲಿ ಏರ್ಪಡಿಸಿದ್ದ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಹಲವು ಮಂದಿ ತಂಬಾಕಿಗೆ ದಾಸರಾಗಿರುವುದು ಆತಂಕಕಾರಿ ಬೆಳವಣಿಗೆ. ತಂಬಾಕು ಬೆಳೆಯನ್ನು ಹಂತಹಂತವಾಗಿ ಸರಕಾರ ನಿಯಂತ್ರಿಸುತ್ತಿದೆ. ಇದಕ್ಕಾಗಿ ಹಲವಾರು ಕಾರ್ಯಕ್ರಮ ರೂಪಿಸಿದೆ. ಪ್ರತಿವರ್ಷ ತಂಬಾಕಿನ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಿದೆ. ತಮ್ಮ ಉತ್ಪನ್ನದ ಮೇಲೆ ಮನುಷ್ಯನ ಆರೋಗ್ಯದ ಮೇಲೆ ಹಾನಿಕಾರಕ ಎಂದು ಮುದ್ರಿಸಲಾಗಿದೆ. ಇಷ್ಟಾದರೂ ತಂಬಾಕು ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನುಷ್ಯ ತನ್ನ ಮೇಲಿನ ಒತ್ತಡ ನಿವಾರಿಸಿಕೊಳ್ಳುವ ಸಲುವಾಗಿ ದುಶ್ಚಟಗಳಿಗೆ ಮಾರುಹೋಗುತ್ತಾನೆ. ಕೊನೆಗೆ ಇದೇ ನಮಗೆ ಅನಿವಾರ್ಯ ಎಂಬಂತೆ ಭಾವಿಸಿಕೊಳ್ಳುತ್ತಾನೆ. ಇದರಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ತಂಬಾಕು ಸೇವನೆಯಿಂದ ಹೊರಬರುವಂತೆ ಪ್ರೇರೇಪಿಸಬೇಕಿದೆ ಎಂದರು.

ಐಕ್ಯೂಎಸಿ ಸಂಚಾಲಕ ಪ್ರೊ.ಎಸ್‌.ಶಶಿಧರ್‌ ಮಾತನಾಡಿ, ಜ್ಞಾನದೇಗುಲವಾಗಿರುವ ಕಾಲೇಜುಗಳು ಇತ್ತೀಚೆಗೆ ತಂಬಾಕು ಅಡ್ಡಗಳಾಗುತ್ತಿವೆ. ಅದನ್ನು ಹೋಗಲಾಡಿಸಲು ಯುವ ಜನತೆ ಮುಂದಾಗಬೇಕು. ಇದರಿಂದ ಸಾಕಷ್ಟು ಅಪರಾಧ ತಡೆಗಟ್ಟಬಹುದು ಎಂದರು.

ತಾಲೂಕು ಆರೋಗ್ಯ ಶಿಕ್ಷ ಣ ಅಧಿಕಾರಿ ಕೆ.ಎಸ್‌ ಪ್ರತಿಮಾ, ತಂಬಾಕು ಮಂಡಳಿ ಸದಸ್ಯರಾದ ಹೇಮಂತ್‌ರಾಜ್‌ ಅರಸ್‌, ರವಿರಾಜ್‌, ರೆಡ್‌ ಕ್ರಾಸ್‌ ಸಂಚಾಲಕಿ ಡಾ. ರೇಷ್ಮ ಮಾತನಾಡಿದರು. ರೆಡ್‌ಕ್ರಾಸ್‌ ಕಾರ್ಯಕ್ರಮಾಧಿಕಾರಿ ಆರ್‌.ರವಿ ಇದ್ದರು.

--------------

ನಾವು ಡಿಸೆಂಬರ್‌ 31ರಂದು ಮಾತ್ರ ತಂಬಾಕು ರಹಿತ ದಿನಾಚರಣೆ ಮಾಡುತ್ತಿದ್ದೇವೆ. ಇದರಿಂದ ಸಮಾಜವನ್ನು ತಂಬಾಕು ಸೇವನೆಯಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ. ಪ್ರತಿ ದಿನವು ತಂಬಾಕು ರಹಿತ ದಿನವಾಗಿ ಬದಲಾಗಬೇಕು.

- ಪ್ರೊ.ಆರ್‌.ಶಿವೇಶಿ, ಪ್ರಾಂಶುಪಾಲ, ಸರಕಾರಿ ಪ್ರಥಮದರ್ಜೆ ಕಾಲೇಜು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ