ಆ್ಯಪ್ನಗರ

ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ

ರಕ್ತದಾನ ಕುರಿತು ವಿದ್ಯಾವಂತರಲ್ಲೂ ತಪ್ಪು ಗ್ರಹಿಕೆ ಇದೆ. ರಕ್ತದಾನದ ಮಹತ್ವವನ್ನು ಯುವಜನತೆಗೆ ಸಾರುವ ಕಾರ‍್ಯ ಆಗಬೇಕೆಂದು ಆರೋಗ್ಯ ಭಾರತಿ ಸಂಸ್ಥೆಯ ವಿಭಾಗೀಯ ಸಂಚಾಲಕ ಶ್ರೀಧರ ಹೇಳಿದರು.

Vijaya Karnataka 29 Jun 2019, 5:00 am
ಹೊಸನಗರ: ರಕ್ತದಾನ ಕುರಿತು ವಿದ್ಯಾವಂತರಲ್ಲೂ ತಪ್ಪು ಗ್ರಹಿಕೆ ಇದೆ. ರಕ್ತದಾನದ ಮಹತ್ವವನ್ನು ಯುವಜನತೆಗೆ ಸಾರುವ ಕಾರ‍್ಯ ಆಗಬೇಕೆಂದು ಆರೋಗ್ಯ ಭಾರತಿ ಸಂಸ್ಥೆಯ ವಿಭಾಗೀಯ ಸಂಚಾಲಕ ಶ್ರೀಧರ ಹೇಳಿದರು.
Vijaya Karnataka Web donate blood voluntarily
ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ


ಕಾರಣಗಿರಿಯಲ್ಲಿ ಗ್ರಾಮ ಭಾರತಿ ಟ್ರಸ್ಟ್‌, ರಾಷ್ಟ್ರೋತ್ಥಾನ ಬಳಗ, ಗ್ರಾಮೋತ್ಥಾನ ಸೇವಾಕೇಂದ್ರ ಹಾಗೂ ಭಜರಂಗದಳದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಕ್ತದ ಅವಶ್ಯಕತೆ ಯಾರಿಗೆ ಯಾವ ಕ್ಷ ಣದಲ್ಲಾದರೂ ಬರಬಹುದು. ರಕ್ತದಾನ ಶ್ರೇಷ್ಠ ಕೆಲಸ. ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಆರೋಗ್ಯವಂತ ವ್ಯಕ್ತಿ ಮುಂದಾಗಬೇಕೆಂದರು. ಶಿವಮೊಗ್ಗ ರೋಟರಿ ರಕ್ತ ನಿಧಿ ಮುಖ್ಯಸ್ಥ ಸತೀಶ್‌ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಂಡವರು ಮಾತ್ರ ರಕ್ತದಾನ ಮಾಡಬಹುದು. ಈ ನಿಟ್ಟಿನಲ್ಲಿ ಪೌಷ್ಟಿಕಾಂಶ ಯುಕ್ತ ಆಹಾರ ಸೇವನೆ ಹಾಗೂ ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳಬೇಕು ಎಂದರು.

ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಎನ್‌.ಡಿ.ನಾಗೇಂದ್ರರಾವ್‌, ಗ್ರಾಮ ಭಾರತಿ ಟ್ರಸ್ಟ್‌ ಕಾರ‍್ಯದರ್ಶಿ ಹನಿಯ ರವಿ, ಪ್ರಮುಖರಾದ ರಾಜಶ್ರೀ ಎಸ್‌.ರಾವ್‌, ದಿನಕರ್‌ ಜಾಧವ್‌, ಗ್ರಾಪಂ ಅಧ್ಯಕ್ಷ ಜಯರಾಂ, ಸದಸ್ಯ ಕಣಿವೆಬಾಗಿಲು ಸುಬ್ರಮಣ್ಯ, ಹನಿಯ ಗುರುಮೂರ್ತಿ, ಕೆ.ಎನ್‌.ಕೃಷ್ಣಮೂರ್ತಿ, ಮಧು ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ