ಆ್ಯಪ್ನಗರ

ಅಪರೂಪದ ಬಾಂಬೆ ಬ್ಲಡ್‌ ಗ್ರೂಪ್‌ ದಾನ

ಅತ್ಯಂತ ವಿರಳಾತಿ ವಿರಳವಾದ ಬಾಂಬೆ ಬ್ಲಡ್‌ ಗ್ರೂಪ್‌ ಹೊಂದಿರುವ ಇಲ್ಲಿನ ಎಲ್‌.ಬಿ.ಕಾಲೇಜಿನ ಪ್ರಥಮ ಬಿಎಸ್‌ಸಿ ವಿದ್ಯಾರ್ಥಿ, ಎನ್‌ಸಿಸಿ ಕೆಡೆಟ್‌ ಉದಯಕುಮಾರ್‌ ಅವರು ಅಗತ್ಯವಿರುವ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ರಕ್ತದಾನ ಮಾಡಿದ ಮಾನವೀಯ ಘಟನೆ ಸೋಮವಾರ ನಡೆದಿದೆ.

Vijaya Karnataka 22 Oct 2019, 5:00 am
ಸಾಗರ: ಅತ್ಯಂತ ವಿರಳಾತಿ ವಿರಳವಾದ ಬಾಂಬೆ ಬ್ಲಡ್‌ ಗ್ರೂಪ್‌ ಹೊಂದಿರುವ ಇಲ್ಲಿನ ಎಲ್‌.ಬಿ.ಕಾಲೇಜಿನ ಪ್ರಥಮ ಬಿಎಸ್‌ಸಿ ವಿದ್ಯಾರ್ಥಿ, ಎನ್‌ಸಿಸಿ ಕೆಡೆಟ್‌ ಉದಯಕುಮಾರ್‌ ಅವರು ಅಗತ್ಯವಿರುವ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ರಕ್ತದಾನ ಮಾಡಿದ ಮಾನವೀಯ ಘಟನೆ ಸೋಮವಾರ ನಡೆದಿದೆ.
Vijaya Karnataka Web 21SGR10_46


ಈಚೆಗೆ ಎಲ್‌ಬಿ ಕಾಲೇಜಿನಲ್ಲಿರಕ್ತದಾನ ಶಿಬಿರ ನಡೆದ ಸಂದರ್ಭ ವಿದ್ಯಾರ್ಥಿ ಉದಯಕುಮಾರ ಅವರ ರಕ್ತದ ಗುಂಪು ಬಹಳ ಅಪರೂಪದ್ದು ಎಂಬ ಮಾಹಿತಿ ಇಲ್ಲಿನ ರಕ್ತನಿಧಿ ಕೇಂದ್ರಕ್ಕೆ ಲಭ್ಯವಾಗಿದೆ. ಉದಯಕುಮಾರ ಮೂಲತಃ ಸಿದ್ದಾಪುರ ತಾಲೂಕಿನ ಆಡುಕಟ್ಟಾ ಸಮೀಪದ ಕೊರ್ಲಕೈ ಗ್ರಾಮದವರು. ಎಲ್‌ಬಿ.ಕಾಲೇಜಿನಲ್ಲಿಬಿಎಸ್‌ಸಿ ವ್ಯಾಸಾಂಗ ಮಾಡುತ್ತಿದ್ದಾರೆ.

ಇಲ್ಲಿನ ರಕ್ತನಿಧಿ ಕೇಂದ್ರದಲ್ಲಿಬಾಂಬೆ ಬ್ಲಡ್‌ ಗ್ರೂಪ್‌ನ ರಕ್ತ ಲಭ್ಯವಿದೆ ಎಂಬ ಮಾಹಿತಿಯನ್ನು ಕೇಂದ್ರದವರು ಸಂಕಲ್ಪ ಇಂಡಿಯನ್‌ ಎಂಬ ಆನ್‌ಲೈನ್‌ ಮಾಹಿತಿ ಮೂಲಕ ಪೋಸ್ಟ್‌ ಮಾಡಿದ್ದರು.

ಬಾಂಬೆ ಬ್ಲಡ್‌ ಗ್ರೂಪ್‌ ಅಗತ್ಯವಿರುವ ಬೆಂಗಳೂರು ಮೂಲದ ವ್ಯಕ್ತಿ ಮತ್ತವರ ಕುಟುಂಬದವರು ರಕ್ತನಿಧಿ ಕೇಂದ್ರ ಸಂಪರ್ಕಿಸಿ ಸೋಮವಾರ ಇಲ್ಲಿಗೆ ಬಂದಿದ್ದಾರೆ. ಇಲ್ಲಿನ ಸುಮುಖ ಆಸ್ಪತ್ರೆಯಲ್ಲಿಸೂಕ್ತ ಪರಿಶೀಲನೆ ನಂತರ ರಕ್ತ ನೀಡಲಾಗಿದೆ. ರಕ್ತ ಪಡೆದುಕೊಂಡವರಿಂದ ಯಾವುದೇ ವೆಚ್ಚ, ಶುಲ್ಕ ಪಡೆದುಕೊಳ್ಳದೇ ಉಚಿತವಾಗಿ ಬಾಂಬೆ ಬ್ಲಡ್‌ ಗ್ರೂಪ್‌ ನೀಡುವ ಮೂಲಕ ರೋಟರಿ ರಕ್ತ ನಿಧಿ ಕೇಂದ್ರ ಮಾನವೀಯತೆ ಮೆರೆದಿದೆ. ಕೇಂದ್ರದ ಡಾ.ಎಚ್‌.ಎಂ.ಶಿವಕುಮಾರ, ಡಾ.ಬಿ.ಜಿ.ಸಂಗಂ, ಡಾ.ಅರುಣ್‌ಕುಮಾರ್‌, ಟೆಕ್ನಿಶಿಯನ್‌ ಹರೀಶ್‌, ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ