ಆ್ಯಪ್ನಗರ

‘ರಕ್ತದಾನದಿಂದ ಮತ್ತೊಬ್ಬರ ಪ್ರಾಣ ಉಳಿವು’

ತಾಲೂಕಿನ ಕಾಗಿನಲ್ಲಿಗ್ರಾಮದಲ್ಲಿಇತ್ತೀಚೆಗೆ ನಡೆದ ರಕ್ತದಾನ ಶಿಬಿರದಲ್ಲಿ323 ಯೂನಿಟ್‌ ರಕ್ತ ಸಂಗ್ರಹಿಸುವ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿರಾಜ್ಯದಲ್ಲೇ ಅತಿಹೆಚ್ಚು ರಕ್ತ ಸಂಗ್ರಹಿಸಿದ ದಾಖಲೆ ಸೃಷ್ಟಿಸಿದೆ.

Vijaya Karnataka 8 Nov 2019, 5:00 am
ಶಿಕಾರಿಪುರ: ತಾಲೂಕಿನ ಕಾಗಿನಲ್ಲಿಗ್ರಾಮದಲ್ಲಿಇತ್ತೀಚೆಗೆ ನಡೆದ ರಕ್ತದಾನ ಶಿಬಿರದಲ್ಲಿ323 ಯೂನಿಟ್‌ ರಕ್ತ ಸಂಗ್ರಹಿಸುವ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿರಾಜ್ಯದಲ್ಲೇ ಅತಿಹೆಚ್ಚು ರಕ್ತ ಸಂಗ್ರಹಿಸಿದ ದಾಖಲೆ ಸೃಷ್ಟಿಸಿದೆ.
Vijaya Karnataka Web donation is the survival of the peoples lives
‘ರಕ್ತದಾನದಿಂದ ಮತ್ತೊಬ್ಬರ ಪ್ರಾಣ ಉಳಿವು’


ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಯೋಧ ಶಾಂತಮೂರ್ತಿ ಮಾತನಾಡಿ, ವ್ಯಕ್ತಿಯ ಆರೋಗ್ಯ ಕಾಪಾಡುವುದಕ್ಕೆ ತುರ್ತು ಸಂದರ್ಭ ರಕ್ತದ ಅವಶ್ಯಕತೆ ಇದೆ, ಅದು ಕೃತಕ ಉತ್ಪಾದನೆ ಸಾಧ್ಯವಿಲ್ಲದ ಕಾರಣಕ್ಕೆ ರಕ್ತದಾನಿಗಳಿಂದಲೇ ಸಂಗ್ರಹಿಸಬೇಕು. ಇದಕ್ಕಾಗಿ ಪ್ರತಿಯೊಬ್ಬ ಆರೋಗ್ಯವಂತ ಪುರುಷ, ಮಹಿಳೆಯರು ರಕ್ತದಾನ ಮಾಡುವುದಕ್ಕೆ ಮುಂದಾಗಬೇಕೆಂದರು.

ವೈದ್ಯ ಅಶೋಕ ಮಾತನಾಡಿ, ರಕ್ತದ ಕೊರತೆಯಿಂದ ಯಾರೊಬ್ಬರೂ ಸಾವಿಗೀಡಾಗಬಾರದು ಎನ್ನುವ ಕಳಕಳಿಯಿಂದಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ, ಶಿಬಿರದಲ್ಲಿಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿರಕ್ತದಾನ ಮಾಡಿರುವುದು ಶ್ಲಾಘನೀಯ. ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲಗ್ರಾಮಸ್ಥರು, ರಕ್ತದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ನಾನೊಬ್ಬ ರಕ್ತದಾನಿ ಎಂಬ ಟೀಶರ್ಟ್‌ ವಿತರಣೆ, ಬಲೂನ್‌ನಿಂದ ಶೃಂಗಾರಗೊಂಡಿದ್ದ ಆಸ್ಪತ್ರೆ, ಅಚ್ಚುಕಟ್ಟು ಪಾರ್ಕಿಂಗ್‌, ಊಟದ ವ್ಯವಸ್ಥೆ ಕಲ್ಪಿಸಿದ್ದು ಗಮನ ಸೆಳೆಯುವಂತಿತ್ತು. ಗ್ರಾ.ಪಂ.ಅಧ್ಯಕ್ಷೆ ಸರೋಜಮ್ಮ, ಜಿ.ಪಂ.ಸದಸ್ಯೆ ಮಮತಾಸಾಲಿ, ತಾ.ಪಂ.ಸದಸ್ಯೆ ಗೀತಾ ರಾಜಪ್ಪ ಮಹಿಳಾ ರಕ್ತದಾನ ವಿಭಾಗಕ್ಕೆ ಚಾಲನೆ ನೀಡಿದರು. ಶಿಬಿರದ ಸಂಘಟಕ ವೈ.ಎಂ.ಪೂಜಾರ್‌, ಜಿಲ್ಲಾಡ್ಯಾಪ್ರೋ ಅಧಿಕಾರಿ ನಟರಾಜ, ತಾಲೂಕು ವೈದ್ಯಾಧಿಕಾರಿ ಚಂದ್ರಪ್ಪ, ಡಾ.ರಾಮಕುಮಾರ್‌, ಡಾ.ಶಮಂತ್‌, ಡಾ. ಚಂದ್ರಕಾಂತ, ಡಾ.ಮಂಜುನಾಥ, ಆಶಾ ಕಾರ‍್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ, ಮಂಜುನಾಥ್‌, ಸಲ್ಮಾನ್‌ಖಾನ್‌, ಕವಿತಾ, ಎ.ಎಚ್‌.ಮೀನಾಕ್ಷಮ್ಮ, ಕವಿತಾ, ಕರಿಗೌಡರ್‌, ಮಲ್ಲಿಕಾರ್ಜುನ್‌, ಜಗದೀಶ್‌, ಯಶವಂತ ಪಾಟೀಲ್‌ ಮತ್ತಿತರರು ಇದ್ದರು.

---------
ದೇಶದ ಗಡಿಯಲ್ಲಿಯೋಧರು ರಕ್ಷಣೆ ಮಾಡುವುದು ಮಾತ್ರ ದೇಶಪ್ರೇಮವಲ್ಲ, ದೇಶದ ಒಳಗೂ ಉತ್ತಮ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಬೇಕು. ಆಗ ಸುಂದರ ಸಮಾಜ ನಿರ್ಮಾಣ ಸಾಧ್ಯ.
-ಶಾಂತಮೂರ್ತಿ, ಯೋಧ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ