ಆ್ಯಪ್ನಗರ

ಮಕ್ಕಳ ಕಲಿಕೆಗೆ ದಾನಿಗಳ ಪ್ರೋತ್ಸಾಹ ಅಗತ್ಯ

ಕ್ರಿಯಶೀಲ ಚಟುವಟಿಕೆಯಿಂದ ಶಿಕ್ಷಕರು ಶಾಲೆಯನ್ನು ಜೀವಂತವಾಗಿ ಇಡಲು ಸಾಧ್ಯ. ದಾನಿಗಳು ಪೋತ್ಸಾಹದಾಯಕ ಕೊಡುಗೆ ನೀಡಿದರೆ ಮಕ್ಕಳ ಉತ್ತಮ ಕಲಿಕೆಗೆ ನೆರವಾಗುತ್ತದೆ. ಉತ್ತಮ ಬೋಧನೆ ಮೂಲಕ ಮಕ್ಕಳ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆನಂದಕುಮಾರ್‌ ಅಭಿಪ್ರಾಯಪಟ್ಟರು.

Vijaya Karnataka 10 Jul 2019, 5:00 am
ತೀರ್ಥಹಳ್ಳಿ: ಕ್ರಿಯಶೀಲ ಚಟುವಟಿಕೆಯಿಂದ ಶಿಕ್ಷಕರು ಶಾಲೆಯನ್ನು ಜೀವಂತವಾಗಿ ಇಡಲು ಸಾಧ್ಯ. ದಾನಿಗಳು ಪೋತ್ಸಾಹದಾಯಕ ಕೊಡುಗೆ ನೀಡಿದರೆ ಮಕ್ಕಳ ಉತ್ತಮ ಕಲಿಕೆಗೆ ನೆರವಾಗುತ್ತದೆ. ಉತ್ತಮ ಬೋಧನೆ ಮೂಲಕ ಮಕ್ಕಳ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆನಂದಕುಮಾರ್‌ ಅಭಿಪ್ರಾಯಪಟ್ಟರು.
Vijaya Karnataka Web SMR-9TTH2


ತಾಲೂಕಿನ ಬಸವನಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ಉಚಿತ ನೋಟ್‌ ಪುಸ್ತಕ,ಲೇಖನಿ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಭಾಷೆ ಕಲಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಸರಕಾರಿ ಶಾಲೆಗಳನ್ನು ಉಳಿಸಲು ಸಹಕಾರಿ. ಪೋಷಕರು, ಶಿಕ್ಷಕರು ಶಾಲೆ ಪ್ರಗತಿ ಕುರಿತು ಕಾಳಜಿ ತೋರಿಸಬೇಕು. ಮಕ್ಕಳಲ್ಲಿರುವ ಕಲಿಕೆಯ ಆಸಕ್ತಿ ಗಮನಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಲಿಕೆಯ ಮಹತ್ವ ತಿಳಿಸಿಕೊಡಬೇಕು ಎಂದರು.

ಶೃಂಗೇರಿ ಜನ ಶಿಕ್ಷಣ ಸ್ನೇಹಿ ಟ್ರಸ್ಟ್‌ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ,ವಕೀಲ ಪವನ್‌ಕುಮಾರ್‌ ಲೇಖನಿ ಸಾಮಗ್ರಿ ಕೊಡುಗೆ ನೀಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಅರುಣ್‌ಕುಮಾರ್‌, ಸದಸ್ಯ ದಯಾನಂದ್‌, ವಕೀಲ ಪವನ್‌ಕುಮಾರ್‌, ಪ್ರಭಾರಿ ಮುಖ್ಯ ಶಿಕ್ಷಕ ಹೂವಪ್ಪ. ಸಹ ಶಿಕ್ಷಕಿ ಅನಿತಾ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ