ಆ್ಯಪ್ನಗರ

‘ಸ್ವಂತ ಊರು, ಗುರು ಮರೆಯದಿರಿ’

ಮನುಷ್ಯ ಸ್ವಾರ್ಥಿಯಾಗಬಾರದು. ನಾವು ಎಷ್ಟೇ ಆಸ್ತಿ ಸಂಪಾದಿಸಿದರೂ ಕೊನೆಗೆ ನಮಗೆ ಸಿಗುವುದು ಆರು-ಮೂರು ಅಳತೆಯ ಜಾಗ ಮಾತ್ರ. ಹೀಗಾಗಿ ಜೀವಂತವಾಗಿರುವಾಗಲೇ ಸಮಾಜದ ಋುಣ ತೀರಿಸಬೇಕೆಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

Vijaya Karnataka 6 Aug 2018, 5:00 am
ಶಿವಮೊಗ್ಗ: ಮನುಷ್ಯ ಸ್ವಾರ್ಥಿಯಾಗಬಾರದು. ನಾವು ಎಷ್ಟೇ ಆಸ್ತಿ ಸಂಪಾದಿಸಿದರೂ ಕೊನೆಗೆ ನಮಗೆ ಸಿಗುವುದು ಆರು-ಮೂರು ಅಳತೆಯ ಜಾಗ ಮಾತ್ರ. ಹೀಗಾಗಿ ಜೀವಂತವಾಗಿರುವಾಗಲೇ ಸಮಾಜದ ಋುಣ ತೀರಿಸಬೇಕೆಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.
Vijaya Karnataka Web SMR-5smg6


ನಗರದ ನೊಳಂಬ ವೀರಶೈವ ಸಮಾಜ, ನಂದಿ ವಿದ್ಯಾಸಂಸ್ಥೆಯಿಂದ ಭಾನುವಾರ ನಗರದ ನಂದಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಗುರು ವಂದನೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಯಾರು ಕಷ್ಟು ಪಟ್ಟು ದುಡಿಯುತ್ತಾರೋ ಅವರೇ ಒಡೆಯರು, ದುಡಿದು ತಿನ್ನದವರು ಬಡವರು. ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ಸ್ವಂತ ಊರು ಮತ್ತು ಕಲಿಸಿದ ಗುರುಗಳನ್ನು ಮರೆಯಬಾರದು. ವಿದ್ಯಾರ್ಥಿ ಹಂತದಲ್ಲಿ ಉತ್ತಮ ಶಿಕ್ಷಣ ಹಾಗೂ ಮೌಲ್ಯ ನೀಡಿದ ಶಿಕ್ಷಕರು ಹಾಗೂ ಸಮಾಜದ ಋುಣ ತೀರಬೇಕೆಂದರು.

ಕಸಾಪ ಜಿಲ್ಲಾದ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿ, ನೊಳಂಬ ವೀರಶೈವ ಸಮಾಜ ಎಲ್ಲ ಸಮುದಾಯದವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಸಂಸ್ಕೃತಿ ಹೊಂದಿದೆ. ಇದೇ ಸಂಸ್ಕೃತಿ ಮುಂದುವರಿಸಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಇಚ್ಛಾಶಕ್ತಿಯಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಛಲ ಇದ್ದರೆ ಮಾತ್ರ ಗೆಲುವು ಎಂದರು. ಹುತಾತ್ಮ ಎಚ್‌.ದೇವೇಂದ್ರಪ್ಪ ಅವರ ತಾಯಿ ತಿಮ್ಮಮ್ಮ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂದಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್‌.ರುದ್ರಪ್ಪ, ಸರಕಾರಿ ನೌಕರರ ಸಂಘದ ರಾಜ್ಯ ಕೋಶಾಧ್ಯಕ್ಷ ಹಾಗೂ ಜಿಲ್ಲಾದ್ಯಕ್ಷ ಸಿ.ಎಸ್‌.ಷಡಾಕ್ಷರಿ, ಕಾರ್ಯಪಾಲಕ ಅಭಿಯಂತರಾದ ರಮೇಶ್‌ ಬಾಣದ್‌, ಕೆ.ಎ. ಉಮಾಪತಿ, ಶಾಂತಲಿಂಗಪ್ಪ, ಕುಬೇರ್‌ ಬಾಣದ್‌ ಸೇರಿದಂತೆ ಮತ್ತಿತರರು ಇದ್ದರು.

ಯಾವುದೇ ಒಂದು ಸಮುದಾಯ ಶಕ್ತಿಯುತವಾಗಿದ್ದರೆ ಸಮಾಜ ಗುರುತಿಸುತ್ತದೆ. ನಮ್ಮ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆಹೆಚ್ಚಿದ್ದರೂ ರಾಜಕೀಯವಾಗಿ ಹಿಂದುಳಿದಿದ್ದು, ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಸಮಾಜ ಆರ್ಥಿಕವಾಗಿ ಮುಂದೆ ಬರಬೇಕು.

-ಡಾ.ಡಿ.ಬಿ.ಗಂಗಪ್ಪ , ಮಾಜಿ ಶಾಸಕ .




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ