ಆ್ಯಪ್ನಗರ

‘ಗಾಳಿ ಚೀಲ ಒಯ್ಯುವ ಸ್ಥಿತಿಗೆ ತಲುಪಬೇಡಿ’

ಶಾಲಾ ಮಕ್ಕಳು ತಮ್ಮ ಪಠ್ಯಪುಸ್ತಕದೊಂದಿಗೆ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಅವರು ಮುಂದೆ ಗಾಳಿ ಚೀಲವನ್ನೂ ತೆಗೆದುಕೊಂಡು ಹೋಗುವ ಸ್ಥಿತಿ ಬಾರದಂತೆ ಈಗಲೇ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ನ್ಯಾಯಾಧೀಶ ಟಿ.ಎಲ್‌.ಸಂದೀಪ್‌ ಹೇಳಿದರು.

Vijaya Karnataka 20 Jul 2019, 5:00 am
ಶಿಕಾರಿಪುರ: ಶಾಲಾ ಮಕ್ಕಳು ತಮ್ಮ ಪಠ್ಯಪುಸ್ತಕದೊಂದಿಗೆ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಅವರು ಮುಂದೆ ಗಾಳಿ ಚೀಲವನ್ನೂ ತೆಗೆದುಕೊಂಡು ಹೋಗುವ ಸ್ಥಿತಿ ಬಾರದಂತೆ ಈಗಲೇ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ನ್ಯಾಯಾಧೀಶ ಟಿ.ಎಲ್‌.ಸಂದೀಪ್‌ ಹೇಳಿದರು.
Vijaya Karnataka Web SMR-18SKP4


ಪಟ್ಟಣದಲ್ಲಿ ಗುರುವಾರ ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಸಂಸ್ಥೆ, ಸಾರ್ವಜನಿಕ ಶಿಕ್ಷ ಣ ಇಲಾಖೆ, ಸಿಹಿಮೊಗ್ಗೆ ಕ್ರಿಕೇಟರ್ಸ್‌, ಬಾಪೂಜಿ ಪ್ರೌಢಶಾಲೆ ವತಿಯಿಂದ ಆಯೋಜಿಸಿದ್ದ ಪರಿಸರ ಮಿತ್ರ ಶಾಲಾ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶುದ್ಧ ನೀರು, ಗಾಳಿ, ಮಣ್ಣು, ಆಹಾರ ಇದ್ದಲ್ಲಿ ಉತ್ತಮ ಆರೋಗ್ಯವೂ ಸಿಗುತ್ತದೆ. ಆದರೆ ಇಂದು ಶುದ್ಧ ನೀರು ಸಿಗದೆ ಮಕ್ಕಳು ಪರಿತಪಿಸುತ್ತಿದ್ದಾರೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಪ್ರತಿ ಶಾಲೆಯಲ್ಲೂ ಇಂತಹ ಕಾರ‍್ಯಕ್ರಮ ನಡೆಯಬೇಕು. ಸಸಿ ನೆಟ್ಟು ಬೆಳೆಸುವ ಕೆಲಸ ಹೆಚ್ಚಾಗಬೇಕು, ಉತ್ತಮ ಗಾಳಿಗೂ ಪರದಾಡುವ ಸ್ಥಿತಿ ಉಂಟಾದಲ್ಲಿ ಮನುಕುಲವೇ ನಾಶವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಪ್ರಕೃತಿ ರಕ್ಷಿಸುವ ಕೆಲಸ ಆಗಬೇಕಿದೆ. ಶಾಲೆಯಲ್ಲಿ ಮಳೆಕೊಯ್ಲು ಪದ್ಧತಿ ಅಳವಡಿಸಬೇಕಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಪಾಪಯ್ಯ ಮಾತನಾಡಿ, ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕೆಂದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಸಿದ್ದಪ್ಪ ಅಧ್ಯಕ್ಷ ತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಕೊಡಪ್ಪ, ಪರಿಸರ ಮಿತ್ರ ಶಾಲಾ ಕಾರ‍್ಯಕ್ರಮ ನಿರ್ದೇಶಕ ಜನಾರ್ಧನ್‌, ವಕೀಲರ ಸಂಘದ ಉಪಾಧ್ಯಕ್ಷ ಎಸ್‌.ಎಂ. ಶಶಿಧರ, ಸರಕಾರಿ ಸಹಾಯಕ ಅಭಿಯೋಜಕ ದಾದಾಪೀರ್‌, ಮುಖ್ಯಶಿಕ್ಷ ಕ ರಾಘವೇಂದ್ರ, ಮುರುಳೀಧರ್‌, ದಿನೇಶ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ