ಆ್ಯಪ್ನಗರ

‘ಡಾ.ರಾಜ್‌ ಜನಮಾನಸದಲ್ಲಿ ಶಾಶ್ವತ’

ಚಲನಚಿತ್ರ ಕಲಾವಿದರು ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಲೇಖಕ ಡಾ. ಸಫ್ರ್ರಾಜ್‌ ಚಂದ್ರಗುತ್ತಿ ಹೇಳಿದರು.

Vijaya Karnataka 17 Feb 2019, 5:00 am
ಸಾಗರ: ಚಲನಚಿತ್ರ ಕಲಾವಿದರು ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಲೇಖಕ ಡಾ. ಸಫ್ರ್ರಾಜ್‌ ಚಂದ್ರಗುತ್ತಿ ಹೇಳಿದರು.
Vijaya Karnataka Web SMR-15SGR2


ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಗುತ್ತನಹಳ್ಳಿಯಲ್ಲಿ ಡಾ. ರಾಜಕುಮಾರ್‌ ಅಭಿಮಾನಿ ಬಳಗ ಆಯೋಜಿಸಿದ್ದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲಾವಿದರು ನಟನೆ ಹಾಗೂ ಬದುಕು ಎರಡನ್ನೂ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು. ಅಂಥ ಎಚ್ಚರ ಇಟ್ಟುಕೊಂಡು ನಟನೆ ಹಾಗೂ ಬದುಕು ಎರಡನ್ನೂ ಅತ್ಯಂತ ಜವಾಬ್ದಾರಿಯಿಂದ ಮಹಾನ್‌ ನಟ ಡಾ.ರಾಜಕುಮಾರ್‌ ನಿರ್ವಹಿಸಿದ್ದಾರೆ. ಧೂಮಪಾನ, ಮದ್ಯಪಾನ ವಿರೋಧಿ ನಿಲುವು, ಸ್ತ್ರೀಯರಿಗೆ ನೀಡುತ್ತಿದ್ದ ಗೌರವ, ಶೂಟಿಂಗ್‌ ವೇಳೆ ಅವರು ಅನುಸರಿಸುತ್ತಿದ್ದ ಸಹಪಂಕ್ತಿ ಭೋಜನ, ಕುಟುಂಬ ಮೌಲ್ಯಗಳ ಅನುಸರಣೆಯಿಂದಾಗಿ ರಾಜಕುಮಾರ್‌ ಕನ್ನಡಿಗರ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರು ಕನ್ನಡ ಸಂಸ್ಕೃತಿಯ ಸಾಕ್ಷೀಪ್ರಜ್ಞೆ ಎಂದರು. ಡಿ.ಎಚ್‌. ಮಂಜುನಾಥ ಅಧ್ಯಕ್ಷ ತೆ ವಹಿಸಿದ್ದರು. ಜಿ.ಪಂ.ಸದಸ್ಯ ಭೀಮನೇರಿ ಶಿವಪ್ಪ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಪಂ ಸದಸ್ಯ ಕಲಸೆ ಚಂದ್ರಪ್ಪ, ವೀರಪ್ಪಗೌಡ, ಕುಸುಮ ಪಕೀರಪ್ಪ, ಜಿ.ಎಸ್‌.ಬಸಪ್ಪ, ನಾಗರಾಜ ಆಚಾರ್‌, ಭೋಜರಾಜ ನಾಯ್ಕ್‌ ಜಿ. ಬಸವಣ್ಯಪ್ಪ, ನಾಗರಾಜ ಕಪ್ಪನಹಳ್ಳಿ, ರಮೇಶಪ್ಪ, ಚಂದ್ರಕಲಾ ಗುರುಮೂರ್ತಿ ಇದ್ದರು. ನವ್ಯ, ಕಲ್ಪನಾ ಪ್ರಾರ್ಥಿಸಿ, ಡಿ.ಪಿ.ಅಶೋಕ್‌ ಸ್ವಾಗತಿಸಿದರು. ಎನ್‌.ಡಿ. ಶಿವಕುಮಾರ್‌ ಪ್ರಾಸ್ತಾವಿಕ ಮಾತನಾಡಿದರು. ಜಿ.ಬಿ.ಗುರುಮೂರ್ತಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ