ಆ್ಯಪ್ನಗರ

ನಾಟಕ ಜೀವನದ ಪಾಠ

ನಾಟಕ ಎಂದರೆ ಬರಿ ಕಲೆಯಲ್ಲ. ಅದು ಜೀವನದ ಪಾಠ ಹೇಳುತ್ತದೆ ಎಂದು ರಂಗಕರ್ಮಿ, ಶಿವಮೊಗ್ಗ ರಂಗಾಯಣದ ಮಾಜಿ ನಿರ್ದೇಶಕ ಡಾ. ಎಂ. ಗಣೇಶ್‌ ಹೇಳಿದರು.

Vijaya Karnataka 5 Oct 2019, 5:00 am
ಶಿವಮೊಗ್ಗ: ನಾಟಕ ಎಂದರೆ ಬರಿ ಕಲೆಯಲ್ಲ. ಅದು ಜೀವನದ ಪಾಠ ಹೇಳುತ್ತದೆ ಎಂದು ರಂಗಕರ್ಮಿ, ಶಿವಮೊಗ್ಗ ರಂಗಾಯಣದ ಮಾಜಿ ನಿರ್ದೇಶಕ ಡಾ. ಎಂ. ಗಣೇಶ್‌ ಹೇಳಿದರು.
Vijaya Karnataka Web drama life lessons
ನಾಟಕ ಜೀವನದ ಪಾಠ

ಶಿವಮೊಗ್ಗ ದಸರಾ ಪ್ರಯುಕ್ತ ಆಯೋಜಿಸಿದ್ದ ರಂಗ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿರಂಗ ತಂಡಗಳು ಕ್ರಿಯಾಶೀಲ ವಾಗಿವೆ. ಹೀಗಾಗಿ, ರಂಗ ಭೂಮಿ ಕ್ಷೇತ್ರದಲ್ಲಿಶಿವಮೊಗ್ಗವು ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ ಎಂದರು. ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ.ಹಿರೇಮಾಗಡಿ ಮಾತನಾಡಿ, ಶಿವಮೊಗ್ಗದ ರಂಗ ಕಲಾವಿದರು ತಾಲೀಮು ಸ್ಥಳದ ಕೊರತೆ ಎದುರಿಸುತ್ತಿದ್ದಾರೆ. ಅವರಿಗೆ ಮಹಾನಗರ ಪಾಲಿಕೆಯಿಂದ ಸೂಕ್ತ ಸೌಲಭ್ಯ ನೀಡಬೇಕೆಂದರು. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್‌ ಮಾತನಾಡಿ, ರಂಗ ದಸರಾ ಕಾರ್ಯಕ್ರಮವನ್ನು ಮುಂದಿನ ವರ್ಷ ಇನ್ನೂ ವಿಭಿನ್ನವಾಗಿ ಆಯೋಜಿಸ ಬೇಕಿದೆ. ಹಾಗಾಗಿ ಕನಿಷ್ಠ 4 ತಿಂಗಳು ಮೊದಲು ಈ ಕಾರ್ಯಕ್ರಮಕ್ಕೆ ಸಿದ್ಧರಾಗಲು

ಮಹಾನಗರ ಪಾಲಿಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಉಪ ಮೇಯರ್‌ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿದರು. ರಂಗ ದಸರಾ ಸಮಿತಿ ಅಧ್ಯಕ್ಷ ರಾಹುಲ್‌ ಬಿದರೆ, ಸಮಿತಿ ಸದಸ್ಯರಾದ ಆರ್‌.ಸಿ. ನಾಯ್‌್ಕ, ಮೀನಾ ಗೋವಿಂದರಾಜು, ಆರ್‌.ಎಸ್‌. ಸತ್ಯನಾರಾಯಣ ರಾಜು, ಆಡಳಿತ ಪಕ್ಷದ ನಾಯಕ ಎಸ್‌. ಜ್ಞಾನೇಶ್ವರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಗನ್ನಿ ಶಂಕರ್‌, ಪಾಲಿಕೆ ಸದಸ್ಯರಾದ ಎಚ್‌.ಸಿ. ಯೋಗೇಶ್‌, ನಾಗರಾಜ್‌ ಕಂಕಾರಿ, ಸುರೇಖಾ ಮುರಳೀಧರ್‌, ಆಶಾ ಚಂದ್ರಪ್ಪ, ಮಂಜುಳಾ

ಶಿವಣ್ಣ, ಸುನೀತಾ ಅಣ್ಣಪ್ಪ, ಸುವರ್ಣ ಶಂಕರ್‌, ಧೀರರಾಜ್‌ ಹೊನ್ನವಿಲೆ, ರೇಖಾ ರಂಗನಾಥ್‌, ರಂಗ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿ ವಿನಾಯಕ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ