ನಾಟಕಗಳು ಬದುಕಿಗೆ ಸ್ಪೂರ್ತಿ: ಸ್ವಾಮೀಜಿ
ನಾಟಕಗಳು ನಮ್ಮ ಬದುಕಿಗೆ ಮೌಲ್ಯ ಕಲಿಸುವ ಜತೆಗೆ ಸ್ಪೂರ್ತಿಯನ್ನೂ ನೀಡುತ್ತವೆ ಎಂದು ವಿರಕ್ತಮಠದ ಶ್ರೀಚನ್ನಬಸವ ಸ್ವಾಮೀಜಿ ಹೇಳಿದರು.
Vijaya Karnataka 19 Jun 2019, 5:00 am
ಶಿಕಾರಿಪುರ: ನಾಟಕಗಳು ನಮ್ಮ ಬದುಕಿಗೆ ಮೌಲ್ಯ ಕಲಿಸುವ ಜತೆಗೆ ಸ್ಪೂರ್ತಿಯನ್ನೂ ನೀಡುತ್ತವೆ ಎಂದು ವಿರಕ್ತಮಠದ ಶ್ರೀಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸೋಮವಾರ ರಂಗಾಯಣದ ರಂಗತೇರು ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾಟಕ ಕೇವಲ ಮನರಂಜನೆಯಲ್ಲ ಅದು ಮನುಷ್ಯನ ಬದುಕಿಗೊಂದು ಅರ್ಥ ನೀಡುತ್ತದೆ. ಇಂದು ಪ್ರತಿಯೊಬ್ಬರೂ ಒತ್ತಡದ ಜೀವನ ನಡೆಸುತ್ತಿದ್ದಾರೆ ಅದು ಕಡಿಮೆ ಆಗಬೇಕು ಎಂದರೆ ಪ್ರತಿಯೊಬ್ಬರೂ ನಾಟಕ ವೀಕ್ಷ ಣೆ ಮಾಡಬೇಕು ಎಂದರು.
ಕುಮದ್ವತಿ ವಸತಿಯುತ ಕೇಂದ್ರೀಯ ಶಾಲೆ ಪ್ರಾಂಶುಪಾಲ ಕೆ.ಎಸ್.ದತ್ತಾತ್ರಿ ಮಾತನಾಡಿ, ಸಿನಿಮಾ ಕನಸಿನ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲದೆ ಅಸಾಧ್ಯವಾದುದನ್ನು ಆದರ್ಶವಾಗಿ ತೋರಿಸುತ್ತಿರುವ ಚಿತ್ರಗಳೆ ಇಂದು ಹೆಚ್ಚಾಗಿವೆ. ನಾಟಕ ವಾಸ್ತವ ಹೇಳುವ ಜತೆಗೆ ಆದರ್ಶವನ್ನೂ ತುಂಬುತ್ತವೆ ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಡಾ.ಎಂ.ಗಣೇಶ್ ಪ್ರಾಸ್ತಾವಿಕ ಮಾತನಾಡಿದರು. ಸ್ವಾಮಿ ವಿವೇಕಾನಂದ ವೇದಿಕೆ ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ, ನಾಟಕೋತ್ಸವ ಸಂಯೋಜಕ ಕೆ.ಎಸ್.ಹುಚ್ರಾಯಪ್ಪ ಇದ್ದರು. ಸಭೆ ನಂತರ ಗೌರ್ನಮೆಂಟ್ ಬ್ರಾಹ್ಮಣ ನಾಟಕ ಪ್ರದರ್ಶನ ಮಾಡಲಾಯಿತು.
ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸೋಮವಾರ ರಂಗಾಯಣದ ರಂಗತೇರು ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾಟಕ ಕೇವಲ ಮನರಂಜನೆಯಲ್ಲ ಅದು ಮನುಷ್ಯನ ಬದುಕಿಗೊಂದು ಅರ್ಥ ನೀಡುತ್ತದೆ. ಇಂದು ಪ್ರತಿಯೊಬ್ಬರೂ ಒತ್ತಡದ ಜೀವನ ನಡೆಸುತ್ತಿದ್ದಾರೆ ಅದು ಕಡಿಮೆ ಆಗಬೇಕು ಎಂದರೆ ಪ್ರತಿಯೊಬ್ಬರೂ ನಾಟಕ ವೀಕ್ಷ ಣೆ ಮಾಡಬೇಕು ಎಂದರು.
ಕುಮದ್ವತಿ ವಸತಿಯುತ ಕೇಂದ್ರೀಯ ಶಾಲೆ ಪ್ರಾಂಶುಪಾಲ ಕೆ.ಎಸ್.ದತ್ತಾತ್ರಿ ಮಾತನಾಡಿ, ಸಿನಿಮಾ ಕನಸಿನ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲದೆ ಅಸಾಧ್ಯವಾದುದನ್ನು ಆದರ್ಶವಾಗಿ ತೋರಿಸುತ್ತಿರುವ ಚಿತ್ರಗಳೆ ಇಂದು ಹೆಚ್ಚಾಗಿವೆ. ನಾಟಕ ವಾಸ್ತವ ಹೇಳುವ ಜತೆಗೆ ಆದರ್ಶವನ್ನೂ ತುಂಬುತ್ತವೆ ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಡಾ.ಎಂ.ಗಣೇಶ್ ಪ್ರಾಸ್ತಾವಿಕ ಮಾತನಾಡಿದರು. ಸ್ವಾಮಿ ವಿವೇಕಾನಂದ ವೇದಿಕೆ ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ, ನಾಟಕೋತ್ಸವ ಸಂಯೋಜಕ ಕೆ.ಎಸ್.ಹುಚ್ರಾಯಪ್ಪ ಇದ್ದರು. ಸಭೆ ನಂತರ ಗೌರ್ನಮೆಂಟ್ ಬ್ರಾಹ್ಮಣ ನಾಟಕ ಪ್ರದರ್ಶನ ಮಾಡಲಾಯಿತು.