ಆ್ಯಪ್ನಗರ

ಹುತ್ತಕ್ಕೆ ಹಾಲೆರೆಯದೆ ಮಕ್ಕಳಿಗೆ ಕುಡಿಸಿ

ಹುತ್ತಕ್ಕೆ ಹಾಲೆರೆಯುವ ಬದಲು ಮಕ್ಕಳಿಗೆ ನೀಡಿ ಎಂದು ಬಸವ ಕೇಂದ್ರದ ಶ್ರೀ ಬಸವ ಮುರುಳಸಿದ್ದ ಸ್ವಾಮೀಜಿ ಹೇಳಿದರು.

Vijaya Karnataka 4 Aug 2019, 5:00 am
ಶಿವಮೊಗ್ಗ : ಹುತ್ತಕ್ಕೆ ಹಾಲೆರೆಯುವ ಬದಲು ಮಕ್ಕಳಿಗೆ ನೀಡಿ ಎಂದು ಬಸವ ಕೇಂದ್ರದ ಶ್ರೀ ಬಸವ ಮುರುಳಸಿದ್ದ ಸ್ವಾಮೀಜಿ ಹೇಳಿದರು.
Vijaya Karnataka Web 3SMG4


ವೆಂಕಟೇಶನಗರದ ಬಸವ ಕೇಂದ್ರದಲ್ಲಿ ಶನಿವಾರ ಶ್ರಾವಣ ಮಾಸದ ನಾಗರಪಂಚಮಿ ಹಿನ್ನೆಲೆಯಲ್ಲಿ ಜಾಗೃತಿ ಕಾರ್ಯಕ್ರಮ ಮಕ್ಕಳಿಗೆ ಹಾಲು ಕುಡಿಸುವ ಹಬ್ಬದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಶ್ರಾವಣ ಮಾಸದಲ್ಲಿ ಹಾವಿಗೆ ಅಥವಾ ಹುತ್ತಕ್ಕೆ ಹಾಲೆರೆಯುವ ಪದ್ಧತಿ ಬೆಳೆದು ಬಂದಿದೆ. ಹಾವು ಹಾಲು ಕುಡಿಯುವುದಿಲ್ಲ, ಹುತ್ತಕ್ಕೆ ಹಾಲೆರೆದಲ್ಲಿ ಹಾವು ಸಾಯುತ್ತದೆ. ಹೀಗಾಗಿ ಹುತ್ತಕ್ಕೆ ಹಾಲೆರೆಯುವುದು ಬಿಟ್ಟು ಹಸಿದ ಮಕ್ಕಳಿಗೆ ಹಾಲು ಕೊಡಿ. ಅದರಿಂದ ಪುಣ್ಯ ಬರುತ್ತದೆ ಎಂದರು.

ಹಾವಿನ ಸಂತತಿ ಕಡಿಮೆಯಾದರೆ ರೈತನಿಗೆ ತೊಂದರೆಯಾಗುತ್ತದೆ. ಬೆಳೆ ನಾಶ ಮಾಡುವ ಇಲಿಯನ್ನು ಹಾವುಗಳು ತಿನ್ನುವುದರಿಂದ ಅದು ರೈತನ ಮಿತ್ರ ಎನಿಸಿಕೊಂಡಿದೆ. ಹುತ್ತಕ್ಕೆ ಹಾಲು ಬಿಟ್ಟು ಅದನ್ನು ಕೊಂದರೆ ಸಂತತಿ ಕಡಿಮೆಯಾಗಿ ಇಲಿಗಳ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ಪ್ರಕೃತಿಯ ಕೊಂಡಿಯನ್ನು ಮೌಢ್ಯತೆಯ ಮೂಲಕ ತಪ್ಪಿಸಬಾರದು ಎಂದರು.

ನಮ್ಮ ಸಮಾಜದಲ್ಲಿ ಹಾಲೇ ಸಿಗದ ನೂರಾರು ಬಡ ಮಕ್ಕಳಿದ್ದಾರೆ. ಹಬ್ಬದ ಹೆಸರಿನಲ್ಲಿ ಮಣ್ಣಿಗೆ ಹಾಲು ಸೇರಿಸುವ ಬದಲು ಅವರ ಬಾಯಿಗೆ ಬಿಡಿ. ಆ ಮೂಲಕ ಹಬ್ಬದ ಆಚರಣೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿ. ಸಮಾಜಕ್ಕೆ ತೊಂದರೆಯಾಗುವ ಯಾವ ಆಚರಣೆಗಳು ನಮಗೆ ಬೇಡ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಚಂದ್ರಪ್ಪ, ಬೆನಕಪ್ಪ, ಪಿ.ರುದ್ರೇಶ್‌, ಕತ್ತಿಗೆ ಚನ್ನಪ್ಪ, ದಿನೇಶ್‌, ಸುಂದರಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ