ಆ್ಯಪ್ನಗರ

ಕುಡಿವ ನೀರಿನ ಟ್ಯಾಂಕ್‌ ಕಲುಷಿತ ಆರೋಪ

ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ ಕಲುಷಿತಗೊಂಡಿರುವುದನ್ನು ಖಂಡಿಸಿ ಹೊಸಮುಗಳಗೆರೆ ಗ್ರಾಮಸ್ಥರು ಗೊದ್ದನಕೊಪ್ಪ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಯಿತು.

Vijaya Karnataka 13 Oct 2019, 5:00 am
ಶಿಕಾರಿಪುರ: ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ ಕಲುಷಿತಗೊಂಡಿರುವುದನ್ನು ಖಂಡಿಸಿ ಹೊಸಮುಗಳಗೆರೆ ಗ್ರಾಮಸ್ಥರು ಗೊದ್ದನಕೊಪ್ಪ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಯಿತು.
Vijaya Karnataka Web IMG-20191012-WA0027090540


ಮಳೆಗಾಲ ಮುಗಿದರೂ ಗ್ರಾಮದ ನಲ್ಲಿಗೆ ಸರಬರಾಜು ಆಗುತ್ತಿರುವ ನೀರು ಕಲುಷಿತ, ಮಣ್ಣು ಮಿಶ್ರಿತವಾಗಿರುವುದನ್ನು ಗಮನಿಸಿದ ಗ್ರಾಮದ ಯುವಕರು ಮೇಲುಸ್ತರದ ನೀರಿನ ಟ್ಯಾಂಕ್‌ ಹತ್ತಿ ಪರಿಶೀಲನೆ ನಡೆಸಿದಾಗ ಎರಡು ಅಡಿಯಷ್ಟು ಮಣ್ಣು ಮಿಶ್ರಿತ ನೀರು ತುಂಬಿರುವುದು ಕಂಡು ಬಂದಿದೆ.

ಪ್ರತಿದಿನ ಅದೇ ನೀರು ಪೂರೈಕೆ ಆಗುತ್ತಿರುವ ಕಾರಣಕ್ಕಾಗಿ ಗ್ರಾಮದ ಯುವಕರೆಲ್ಲರೂ ಸೇರಿ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಿ ಗ್ರಾ.ಪಂ. ವಿರುದ್ಧ ಘೋಷಣೆ ಕೂಗಿದರಲ್ಲದೆ ಗೊದ್ದನಕೊಪ್ಪ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಮ್ಮ ಮಾತನಾಡಿ, ಈಗಲೇ ಮೇಲುಸ್ತರದ ಟ್ಯಾಂಕ್‌ ಸ್ವಚ್ಛಗೊಳಿಸುವ ಕೆಲಸ ಆರಂಭಿಸುತ್ತೇವೆ. ಮುಂದೆ ಇಂತಹ ಘಟನೆ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

-----------
ಗ್ರಾಮಕ್ಕೆ ಕಲುಷಿತ ನೀರು ಸರಬರಾಜು ಆಗುವುದು ತಪ್ಪಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿಕಳೆದ ಎರಡು ತಿಂಗಳಿನಿಂದ ಜ್ವರದ ಬಾಧೆ ಇದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸ್ವತಃ ನೀರುಗಂಟಿಯೂ ಹಲವು ದಿನದಿಂದ ಜ್ವರಕ್ಕೆ ತುತ್ತಾಗಿದ್ದಾರೆ. ಅದನ್ನು ಗಮನಿಸಿ ಯುವಕರು ಟ್ಯಾಂಕ್‌ ಪರಿಶೀಲಿಸಿದ್ದು, ಕಲುಷಿತ ನೀರು ಇರುವುದು ಪತ್ತೆಯಾಗಿದೆ. ಇಂತಹ ನಿರ್ಲಕ್ಷತ್ರ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು.

-ವಸಂತಕುಮಾರ್‌, ಗ್ರಾಮಸ್ಥ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ