ಶಿಕಾರಿಪುರ: ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಕಲುಷಿತಗೊಂಡಿರುವುದನ್ನು ಖಂಡಿಸಿ ಹೊಸಮುಗಳಗೆರೆ ಗ್ರಾಮಸ್ಥರು ಗೊದ್ದನಕೊಪ್ಪ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಯಿತು.
ಮಳೆಗಾಲ ಮುಗಿದರೂ ಗ್ರಾಮದ ನಲ್ಲಿಗೆ ಸರಬರಾಜು ಆಗುತ್ತಿರುವ ನೀರು ಕಲುಷಿತ, ಮಣ್ಣು ಮಿಶ್ರಿತವಾಗಿರುವುದನ್ನು ಗಮನಿಸಿದ ಗ್ರಾಮದ ಯುವಕರು ಮೇಲುಸ್ತರದ ನೀರಿನ ಟ್ಯಾಂಕ್ ಹತ್ತಿ ಪರಿಶೀಲನೆ ನಡೆಸಿದಾಗ ಎರಡು ಅಡಿಯಷ್ಟು ಮಣ್ಣು ಮಿಶ್ರಿತ ನೀರು ತುಂಬಿರುವುದು ಕಂಡು ಬಂದಿದೆ.
ಪ್ರತಿದಿನ ಅದೇ ನೀರು ಪೂರೈಕೆ ಆಗುತ್ತಿರುವ ಕಾರಣಕ್ಕಾಗಿ ಗ್ರಾಮದ ಯುವಕರೆಲ್ಲರೂ ಸೇರಿ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಿ ಗ್ರಾ.ಪಂ. ವಿರುದ್ಧ ಘೋಷಣೆ ಕೂಗಿದರಲ್ಲದೆ ಗೊದ್ದನಕೊಪ್ಪ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಮ್ಮ ಮಾತನಾಡಿ, ಈಗಲೇ ಮೇಲುಸ್ತರದ ಟ್ಯಾಂಕ್ ಸ್ವಚ್ಛಗೊಳಿಸುವ ಕೆಲಸ ಆರಂಭಿಸುತ್ತೇವೆ. ಮುಂದೆ ಇಂತಹ ಘಟನೆ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
-----------
ಗ್ರಾಮಕ್ಕೆ ಕಲುಷಿತ ನೀರು ಸರಬರಾಜು ಆಗುವುದು ತಪ್ಪಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿಕಳೆದ ಎರಡು ತಿಂಗಳಿನಿಂದ ಜ್ವರದ ಬಾಧೆ ಇದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸ್ವತಃ ನೀರುಗಂಟಿಯೂ ಹಲವು ದಿನದಿಂದ ಜ್ವರಕ್ಕೆ ತುತ್ತಾಗಿದ್ದಾರೆ. ಅದನ್ನು ಗಮನಿಸಿ ಯುವಕರು ಟ್ಯಾಂಕ್ ಪರಿಶೀಲಿಸಿದ್ದು, ಕಲುಷಿತ ನೀರು ಇರುವುದು ಪತ್ತೆಯಾಗಿದೆ. ಇಂತಹ ನಿರ್ಲಕ್ಷತ್ರ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ವಸಂತಕುಮಾರ್, ಗ್ರಾಮಸ್ಥ.
ಮಳೆಗಾಲ ಮುಗಿದರೂ ಗ್ರಾಮದ ನಲ್ಲಿಗೆ ಸರಬರಾಜು ಆಗುತ್ತಿರುವ ನೀರು ಕಲುಷಿತ, ಮಣ್ಣು ಮಿಶ್ರಿತವಾಗಿರುವುದನ್ನು ಗಮನಿಸಿದ ಗ್ರಾಮದ ಯುವಕರು ಮೇಲುಸ್ತರದ ನೀರಿನ ಟ್ಯಾಂಕ್ ಹತ್ತಿ ಪರಿಶೀಲನೆ ನಡೆಸಿದಾಗ ಎರಡು ಅಡಿಯಷ್ಟು ಮಣ್ಣು ಮಿಶ್ರಿತ ನೀರು ತುಂಬಿರುವುದು ಕಂಡು ಬಂದಿದೆ.
ಪ್ರತಿದಿನ ಅದೇ ನೀರು ಪೂರೈಕೆ ಆಗುತ್ತಿರುವ ಕಾರಣಕ್ಕಾಗಿ ಗ್ರಾಮದ ಯುವಕರೆಲ್ಲರೂ ಸೇರಿ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಿ ಗ್ರಾ.ಪಂ. ವಿರುದ್ಧ ಘೋಷಣೆ ಕೂಗಿದರಲ್ಲದೆ ಗೊದ್ದನಕೊಪ್ಪ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಮ್ಮ ಮಾತನಾಡಿ, ಈಗಲೇ ಮೇಲುಸ್ತರದ ಟ್ಯಾಂಕ್ ಸ್ವಚ್ಛಗೊಳಿಸುವ ಕೆಲಸ ಆರಂಭಿಸುತ್ತೇವೆ. ಮುಂದೆ ಇಂತಹ ಘಟನೆ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
-----------
ಗ್ರಾಮಕ್ಕೆ ಕಲುಷಿತ ನೀರು ಸರಬರಾಜು ಆಗುವುದು ತಪ್ಪಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿಕಳೆದ ಎರಡು ತಿಂಗಳಿನಿಂದ ಜ್ವರದ ಬಾಧೆ ಇದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸ್ವತಃ ನೀರುಗಂಟಿಯೂ ಹಲವು ದಿನದಿಂದ ಜ್ವರಕ್ಕೆ ತುತ್ತಾಗಿದ್ದಾರೆ. ಅದನ್ನು ಗಮನಿಸಿ ಯುವಕರು ಟ್ಯಾಂಕ್ ಪರಿಶೀಲಿಸಿದ್ದು, ಕಲುಷಿತ ನೀರು ಇರುವುದು ಪತ್ತೆಯಾಗಿದೆ. ಇಂತಹ ನಿರ್ಲಕ್ಷತ್ರ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ವಸಂತಕುಮಾರ್, ಗ್ರಾಮಸ್ಥ.