ಆ್ಯಪ್ನಗರ

ಅರಣ್ಯ ಪಟ್ಟಿಯಿಂದ ಶೆಟ್ಟಿಹಳ್ಳಿ ಕೈಬಿಡಿ

ತಾಲೂಕಿನ ಶೆಟ್ಟಿಹಳ್ಳಿ ಮತ್ತು ಚಿತ್ರ ಶೆಟ್ಟಿಹಳ್ಳಿ ಗ್ರಾಮಗಳನ್ನು ಅಭಯಾರಣ್ಯ ಪಟ್ಟಿಯಿಂದ ಕೈಬಿಟ್ಟು, ಕೂಡಲೇ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Vijaya Karnataka 21 Nov 2019, 5:00 am
ಶಿವಮೊಗ್ಗ: ತಾಲೂಕಿನ ಶೆಟ್ಟಿಹಳ್ಳಿ ಮತ್ತು ಚಿತ್ರ ಶೆಟ್ಟಿಹಳ್ಳಿ ಗ್ರಾಮಗಳನ್ನು ಅಭಯಾರಣ್ಯ ಪಟ್ಟಿಯಿಂದ ಕೈಬಿಟ್ಟು, ಕೂಡಲೇ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Vijaya Karnataka Web drop the shettihalli from the forest list
ಅರಣ್ಯ ಪಟ್ಟಿಯಿಂದ ಶೆಟ್ಟಿಹಳ್ಳಿ ಕೈಬಿಡಿ

ಶೆಟ್ಟಿಹಳ್ಳಿ ಗ್ರಾಮದಲ್ಲಿಶರಾವತಿ ಸಂತ್ರಸ್ತರಿಗೆ ವಾಸಿಸಲು ಅವಕಾಶ ನೀಡಲಾಗಿದೆ. ಬಹಳ ವರ್ಷದಿಂದ ಇಲ್ಲಿಹಲವು ಸಂತ್ರಸ್ತರು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಸರಕಾರ ಈ ಜಾಗವನ್ನು ಅಭಯಾರಣ್ಯ ಎಂದು ಘೋಷಣೆ ಮಾಡಿರುವುದರಿಂದ ಇಲ್ಲಿಯ ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಈ ಸಮಸ್ಯೆಯಿಂದಾಗಿ ಗ್ರಾಮಕ್ಕೆ ಇನ್ನೂ ಕೂಡ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. ಅಷ್ಟೆ ಅಲ್ಲಇಲ್ಲಿಯ ನಿವಾಸಿಗಳು ಸುಸಜ್ಜಿತವಾಗಿ ಸೂರು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಕುಡಿಯುವ ನೀರಿಗೂ ಕೊಳವೆ ಬಾವಿ ಕೊರೆಯಲು ಆಗಿಲ್ಲ. ವಿದ್ಯುತ್‌ ಸೌಲಭ್ಯದ ಮಾತೇ ಇಲ್ಲ. ಹೀಗೆ ಪ್ರತಿಯೊಂದು ವಿಷಯಕ್ಕೂ ಅರಣ್ಯ ಅಧಿಕಾರಿಗಳ ಕಿರಿಕಿರಿ ತಪ್ಪಿಲ್ಲ. ಹೀಗಾಗಿ ಇನ್ನೂ ಈ ಗ್ರಾಮಗಳ ಜನರು ಕಗ್ಗತ್ತಲಲ್ಲಿಬದುಕುತ್ತಿದ್ದಾರೆ ಎಂದು ದೂರಿದರು. ನೂರಾರು ಕುಟುಂಬಗಳು ವಾಸಿಸುತ್ತಿರುವ ಈ ಗ್ರಾಮ ಅಭಯಾರಣ್ಯ ಎಂದು ಮುಂದುವರಿದುಕೊಂಡು ಹೋದರೆ ಇಲ್ಲಿಯ ಗ್ರಾಮಸ್ಥರಿಗೆ ಯಾವುದೇ ನಾಗರಿಕ ಸೌಲಭ್ಯ ಸಿಗುವುದಿಲ್ಲ.
ಹೀಗಾಗಿ ಅರಣ್ಯ ಪಟ್ಟಿಯಿಂದ ಈ ಗ್ರಾಮಗಳನ್ನು ಕೈಬಿಟ್ಟು ಗ್ರಾಮದ ಜನರು ಸರಳವಾಗಿ ಬದುಕಲು ಅವಕಾಶ ಕೊಡಬೇಕು. ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭ ಪ್ರಮುಖರಾದ ಸಿ.ರಾಜಪ್ಪ , ಎಸ್‌.ಜಿ.ಮಂಜಪ್ಪ, ಎಂ.ಜೆ.ರಾಜಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ