ರಾಘವೇಂದ್ರ ಮೇಗರವಳ್ಳಿ
ತೀರ್ಥಹಳ್ಳಿ: ಮಲೆನಾಡಿನ ಪ್ರಮುಖ ನದಿಗಳಲ್ಲಿ ಮೀನು ಶಿಕಾರಿಗಾಗಿ ಡೈನಾಮೈಟ್ ಮದ್ದಿನ ಸ್ಫೋಟ, ಗೇರೆಣ್ಣೆ ಕರಡುವ ಕೃತ್ಯ ಹೆಚ್ಚಾಗಿದೆ. ತಾಲೂಕಿನ ತುಂಗೆ, ಮಾಲತಿ, ಕುಶಾವತಿ ನದಿ ನೀರಿನ ಹೊಂಡಗಳು ಕುಕೃತ್ಯದ ಸುಳಿಗೆ ಸಿಲುದ್ದು, ಸಾವಿರಾರು ಜಲಚರಗಳ ಜೀವಸಂತತಿ ನಾಶವಾಗುತ್ತಿದೆ.
ಡೈನಾಮೈಟ್, ಗೇರೆಣ್ಣೆ ಕರಡುವ ಕೃತ್ಯ ಜಲಚರ ಜೀವಕ್ಕೆ ಮಾತ್ರ ಅಪಾಯ ತರದೆ ಮಾನವ ಜೀವಕ್ಕೂ ಕುತ್ತು ತಂದಿದೆ. ಅಪಾಯ ಕಾರಿ ಡೈನಾಮೈಟ್, ಗೇರಣ್ಣೆ ನಿರಂತರ ಬಳಕೆಯಿಂದಾಗಿ ನದಿಗಳ ಒಡಲು ವಿಷಕಾರಿಯಾಗುತ್ತಿದೆ. ಪಟ್ಟಣದ ತುಂಗಾನದಿ ತೀರ ಡೈನಾಮೈಟ್ ಸ್ಫೋಟದಿಂದ ತತ್ತರಿಸಿದರೆ ಮಾಲತಿ ನದಿಯ ಕುಡಿಯುವ ನೀರಿನ ಹೊಂಡ ಗಳಿಗೆ ಗೇರೆಣ್ಣೆ ಕರಡಲಾಗುತ್ತಿದೆ. ಮೀನು ಶಿಕಾರಿಗೆ ಅತೀ ಸುಲಭವಾಗಿ ಡೈನಾಮೈಟ್, ಗೇರೆಣ್ಣೆ ಬಳಸಿ ವಿಧ್ವಂಸಕ ಕೃತ್ಯನಡೆಸಲಾಗುತ್ತಿದೆ.
ತುಂಗಾನದಿಯ ಬಾಳಗಾರು, ಬುಕ್ಲಾಪುರ, ಬಾಳೇಬೈಲು, ದೂರ್ವಾ ಸಪುರ ಭಾಗದಲ್ಲಿ ಡೈನಾಮೈಟ್ ಸ್ಫೋಟಿಸಲಾಗು ತ್ತದೆ. ಮಾಲತಿ ನದಿಯ ಮೇಗರವಳ್ಳಿ, ನಾಲೂರು, ಶೀರೂರು, ಚಂಗಾರು, ಅರೇ ಹಳ್ಳಿ ಭಾಗದಲ್ಲಿಗೇರಣ್ಣೆ ಕರಡಲಾಗುತ್ತಿದೆ.
ಗಾಳಿಪಟ ಹಾರಿಸುವ ಕೋತಿ..., ಪ್ರಾಣಿಗಳಿಂದ ಕಲಿಯಬೇಕು ಈ ಬುದ್ಧಿ...
ನದಿ ಜೀವಕ್ಕೆ ಕುತ್ತು: ಡೈನಾಮೈಟ್ ಮದ್ದು ಸಾಮಗ್ರಿ ದುಬಾರಿ ದರಕ್ಕೆ ಸುಲಭವಾಗಿ ಕೈಗೆ ಸಿಗುತ್ತದೆ. ಎನ್ಆರ್ಪುರ, ಕೊಪ್ಪ, ತಾಲೂಕಿನ ಮೇಲಿನ ಕುರುವಳ್ಳಿ, ಕಮ್ಮರಡಿ, ಪಟ್ಟಣದ ಕೆಲಪ್ರದೇಶದಲ್ಲಿ ಮದ್ದು ದೊರೆಯುತ್ತದೆ. ಗೇರುಹಣ್ಣಿನ ಬೀಜದ ಸಿಪ್ಟೆ ಎಣ್ಣೆಗೆ ವಿಷಕಾರಿ ಎಂಡೋಸಲ್ಪಾನ್ ಬೆರೆಸಿ ಗೇರೆಣ್ಣೆ ಸಿದ್ಧಪಡಿಸಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಖರೀದಿಸಿ ಮೀನು ಶಿಕಾರಿಗೆ ಬಳಸಲಾ ಗುತ್ತಿದೆ. ನದಿ ಪಾತ್ರದ ಜೀವಸಂತತಿ ಜತೆಗೆ ನದಿ ಜೀವಕ್ಕೂ ಕುತ್ತು ತಂದಿದೆ. ಸಂಬಂಧಪಟ್ಟ ಆಡಳಿತ ಮಾತ್ರ ಜಾಣ ಕುರುಡತನಕ್ಕೆ ಜಾರಿದಂತಿದೆ.
ತೀರ್ಥಹಳ್ಳಿ: ಮಲೆನಾಡಿನ ಪ್ರಮುಖ ನದಿಗಳಲ್ಲಿ ಮೀನು ಶಿಕಾರಿಗಾಗಿ ಡೈನಾಮೈಟ್ ಮದ್ದಿನ ಸ್ಫೋಟ, ಗೇರೆಣ್ಣೆ ಕರಡುವ ಕೃತ್ಯ ಹೆಚ್ಚಾಗಿದೆ. ತಾಲೂಕಿನ ತುಂಗೆ, ಮಾಲತಿ, ಕುಶಾವತಿ ನದಿ ನೀರಿನ ಹೊಂಡಗಳು ಕುಕೃತ್ಯದ ಸುಳಿಗೆ ಸಿಲುದ್ದು, ಸಾವಿರಾರು ಜಲಚರಗಳ ಜೀವಸಂತತಿ ನಾಶವಾಗುತ್ತಿದೆ.
ಡೈನಾಮೈಟ್, ಗೇರೆಣ್ಣೆ ಕರಡುವ ಕೃತ್ಯ ಜಲಚರ ಜೀವಕ್ಕೆ ಮಾತ್ರ ಅಪಾಯ ತರದೆ ಮಾನವ ಜೀವಕ್ಕೂ ಕುತ್ತು ತಂದಿದೆ. ಅಪಾಯ ಕಾರಿ ಡೈನಾಮೈಟ್, ಗೇರಣ್ಣೆ ನಿರಂತರ ಬಳಕೆಯಿಂದಾಗಿ ನದಿಗಳ ಒಡಲು ವಿಷಕಾರಿಯಾಗುತ್ತಿದೆ. ಪಟ್ಟಣದ ತುಂಗಾನದಿ ತೀರ ಡೈನಾಮೈಟ್ ಸ್ಫೋಟದಿಂದ ತತ್ತರಿಸಿದರೆ ಮಾಲತಿ ನದಿಯ ಕುಡಿಯುವ ನೀರಿನ ಹೊಂಡ ಗಳಿಗೆ ಗೇರೆಣ್ಣೆ ಕರಡಲಾಗುತ್ತಿದೆ. ಮೀನು ಶಿಕಾರಿಗೆ ಅತೀ ಸುಲಭವಾಗಿ ಡೈನಾಮೈಟ್, ಗೇರೆಣ್ಣೆ ಬಳಸಿ ವಿಧ್ವಂಸಕ ಕೃತ್ಯನಡೆಸಲಾಗುತ್ತಿದೆ.
ತುಂಗಾನದಿಯ ಬಾಳಗಾರು, ಬುಕ್ಲಾಪುರ, ಬಾಳೇಬೈಲು, ದೂರ್ವಾ ಸಪುರ ಭಾಗದಲ್ಲಿ ಡೈನಾಮೈಟ್ ಸ್ಫೋಟಿಸಲಾಗು ತ್ತದೆ. ಮಾಲತಿ ನದಿಯ ಮೇಗರವಳ್ಳಿ, ನಾಲೂರು, ಶೀರೂರು, ಚಂಗಾರು, ಅರೇ ಹಳ್ಳಿ ಭಾಗದಲ್ಲಿಗೇರಣ್ಣೆ ಕರಡಲಾಗುತ್ತಿದೆ.
ಗಾಳಿಪಟ ಹಾರಿಸುವ ಕೋತಿ..., ಪ್ರಾಣಿಗಳಿಂದ ಕಲಿಯಬೇಕು ಈ ಬುದ್ಧಿ...
ನದಿ ಜೀವಕ್ಕೆ ಕುತ್ತು: ಡೈನಾಮೈಟ್ ಮದ್ದು ಸಾಮಗ್ರಿ ದುಬಾರಿ ದರಕ್ಕೆ ಸುಲಭವಾಗಿ ಕೈಗೆ ಸಿಗುತ್ತದೆ. ಎನ್ಆರ್ಪುರ, ಕೊಪ್ಪ, ತಾಲೂಕಿನ ಮೇಲಿನ ಕುರುವಳ್ಳಿ, ಕಮ್ಮರಡಿ, ಪಟ್ಟಣದ ಕೆಲಪ್ರದೇಶದಲ್ಲಿ ಮದ್ದು ದೊರೆಯುತ್ತದೆ. ಗೇರುಹಣ್ಣಿನ ಬೀಜದ ಸಿಪ್ಟೆ ಎಣ್ಣೆಗೆ ವಿಷಕಾರಿ ಎಂಡೋಸಲ್ಪಾನ್ ಬೆರೆಸಿ ಗೇರೆಣ್ಣೆ ಸಿದ್ಧಪಡಿಸಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಖರೀದಿಸಿ ಮೀನು ಶಿಕಾರಿಗೆ ಬಳಸಲಾ ಗುತ್ತಿದೆ. ನದಿ ಪಾತ್ರದ ಜೀವಸಂತತಿ ಜತೆಗೆ ನದಿ ಜೀವಕ್ಕೂ ಕುತ್ತು ತಂದಿದೆ. ಸಂಬಂಧಪಟ್ಟ ಆಡಳಿತ ಮಾತ್ರ ಜಾಣ ಕುರುಡತನಕ್ಕೆ ಜಾರಿದಂತಿದೆ.