ಆ್ಯಪ್ನಗರ

ಆರ್ಥಿಕ ಪ್ರಗತಿಗೆ ವೈಜ್ಞಾನಿಕ ಅರಿವು ಅಗತ್ಯ

ಸಾಮಾಜಿಕ ಅರಣ್ಯ ವಿಭಾಗ ಕೃಷಿಕರಿಗೆ ಸಹಾಯಕವಾಗಬಲ್ಲ ಹಲವು ಯೋಜನೆ ಹೊಂದಿದೆ. ಅಲ್ಲದೇ ಈ ವಿಭಾಗದಿಂದ ರೈತರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ವಾಗಿ ಆರ್ಥಿಕ ನೆರವು ಸಹ ದೊರೆಯುತ್ತದೆ ಎಂದು ಕೃಷಿ ತಜ್ಞ ಪೂರ್ಣಪ್ರಜ್ಞ ಬೇಳೂರು ಹೇಳಿದರು.

Vijaya Karnataka 17 Feb 2019, 5:00 am
ರಿಪ್ಪನ್‌ಪೇಟೆ: ಸಾಮಾಜಿಕ ಅರಣ್ಯ ವಿಭಾಗ ಕೃಷಿಕರಿಗೆ ಸಹಾಯಕವಾಗಬಲ್ಲ ಹಲವು ಯೋಜನೆ ಹೊಂದಿದೆ. ಅಲ್ಲದೇ ಈ ವಿಭಾಗದಿಂದ ರೈತರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ವಾಗಿ ಆರ್ಥಿಕ ನೆರವು ಸಹ ದೊರೆಯುತ್ತದೆ ಎಂದು ಕೃಷಿ ತಜ್ಞ ಪೂರ್ಣಪ್ರಜ್ಞ ಬೇಳೂರು ಹೇಳಿದರು.
Vijaya Karnataka Web SMR-14RPT3


ಚಿಕ್ಕಜೇನಿಯ ಗ್ರಾ.ಪಂ.ಆವರಣದಲ್ಲಿ ಸಾಮಾಜಿಕ ಅರಣ್ಯ ವಿಭಾಗ ಶಿವಮೊಗ್ಗ ಮತ್ತು ಚೈತನ್ಯ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ ಶಿವಮೊಗ್ಗ ಆಶ್ರಯದಲ್ಲಿ ಏರ್ಪಡಿಸಿದ್ದ ಎಸ್‌ಎಂಎಎಫ್‌ ಯೋಜನೆಯಡಿಯ ಗ್ರಾಮೀಣ ರೈತರಿಗಾಗಿ ಆಯೋಜಿಸಿದ್ದ ಅರಣ್ಯ ಸಂರಕ್ಷ ಣಾ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಕೇವಲ ಶ್ರಮದ ದುಡಿಮೆಯಿಂದ ರೈತರು ಆರ್ಥಿಕ ಪ್ರಗತಿ ಹೊಂದಲು ಸಾಧ್ಯವಿಲ್ಲ. ವೈಜ್ಞಾನಿಕ ಪದ್ಧತಿಯ ಅರಿವಿನ ಜತೆಗೆ ವಿವಿಧ ಯೋಜನೆ ಸದುಪಯೋಗ ಸಹ ಪಡೆಯಬೇಕೆಂದರು. ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ.ಸದಸ್ಯ ಎನ್‌.ಪಿ.ರಾಜು ಮಾತನಾಡಿ, ಇಂತಹ ತರಬೇತಿ ಹೆಚ್ಚು ರೈತರಿಗೆ ತಲುಪಬೇಕೆಂದರು.

ಗ್ರಾ.ಪಂ. ಕಾರ್ಯದರ್ಶಿ ನಾಗರಾಜ ಅಧ್ಯಕ್ಷ ತೆ ವಹಿಸಿದ್ದರು. ಉದ್ಘಾಟನಾ ಕಾರ‍್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಬೋರಯ್ಯ, ಸಾಮಾಜಿಕ ಅರಣ್ಯ ವಿಭಾಗದ ಡಿವೈಆರ್‌ ಎಫ್‌ ಓ ಪ್ರವೀಣ, ಚೈತನ್ಯ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿಯ ಮಂಜು, ರೈತ ಉತ್ಪಾದಕ ಕೇಂದ್ರದ ಸಿಇ ಪ್ರಶಾಂತ, ಕಾರೇಮಟ್ಟಿ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅರವಿಂದ ಭಟ್‌, ಪ್ರಮುಖರಾದ ಅಶೋಕಭಟ್‌, ವೆಂಕಟರಮಣ, ಅರಣ್ಯ ವೀಕ್ಷ ಕ ಭಾಸ್ಕರ, ಹಿರೇಜೇನಿ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಓಂಕೇಶಮೂರ್ತಿ, ಶಿಕ್ಷ ಕ ಎನ್‌.ಡಿ.ಹೆಗಡೆ , ದಾನೇಶ, ಚಂದ್ರಮತಿ , ಕೃಷ್ಣಪ್ಪ, ಬಂಗಾರಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ