ಆ್ಯಪ್ನಗರ

ಆರ್ಥಿಕ, ಸಾಮಾಜಿಕ ಸಬಲತೆ ಮುಖ್ಯ

ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಯಾವುದೇ ತಾರತಮ್ಯವಿಲ್ಲದೆ ಆರ್ಥಿಕವಾಗಿ ಸಬಲನಾಗಬೇಕು ಹಾಗೂ ಆತನಿಗೆ ಸಾಮಾಜಿಕವಾಗಿಯೂ ಸಮಾನತೆ ಸಿಗಬೇಕೆಂಬುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರಿ ಎಂದು ಜಡೆ ಹಿರೇಮಠದ ಶ್ರೀಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 25 Oct 2019, 5:00 am
ಸೊರಬ: ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಯಾವುದೇ ತಾರತಮ್ಯವಿಲ್ಲದೆ ಆರ್ಥಿಕವಾಗಿ ಸಬಲನಾಗಬೇಕು ಹಾಗೂ ಆತನಿಗೆ ಸಾಮಾಜಿಕವಾಗಿಯೂ ಸಮಾನತೆ ಸಿಗಬೇಕೆಂಬುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರಿ ಎಂದು ಜಡೆ ಹಿರೇಮಠದ ಶ್ರೀಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web economic and social empowerment is important
ಆರ್ಥಿಕ, ಸಾಮಾಜಿಕ ಸಬಲತೆ ಮುಖ್ಯ


ಜಡೆ ಗ್ರಾಮದ ಬಸವೇಶ್ವರ ದೇವಾಲಯ ಆವರಣದಲ್ಲಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರ ಏರ್ಪಡಿಸಿದ್ದ ಜಡೆ ವಲಯ ಮಟ್ಟದ ಯೋಜನೆ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹತ್ತು ಸಾವಿರ ಸಾಲಕ್ಕಾಗಿ ಹತ್ತು ತಿಂಗಳು ಬ್ಯಾಂಕ್‌ಗಳ ಮುಂದೆ ರೆಕಾರ್ಡ್‌ ಹಿಡಿದುಕೊಂಡು ಪರೇಡ್‌ ಮಾಡಬೇಕಾಗಿದ್ದ ಕಾಲದಲ್ಲಿಸಂಘದ ಹತ್ತು ಜನ ಸದಸ್ಯರು ಹೂಂ ಅಂದರೆ ಒಂದೇ ತಿಂಗಳಲ್ಲಿಯೋಜನೆಯಿಂದ ಸಾಲ ಸಿಗುತ್ತದೆ ಎಂದರು.

ಶಿರಸಿ ಜಿಲ್ಲಾವಲಯ ನಿರ್ದೇಶಕ ಶೇಖರ ಗೌಡ, ತಾಲೂಕು ಯೋಜನಾಧಿಕಾರಿ ಪಿ.ಕೆ.ರಮೇಶ್‌, ವಲಯ ಮೇಲ್ವಿಚಾರಕ ಭಾಸ್ಕರ್‌ ಸೇರಿದಂತೆ ವಲಯದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಜರಿದ್ದರು.

------
ದೇಶದಲ್ಲಿಧರ್ಮಸ್ಥಳಕ್ಕಿಂತಲೂ ಹೆಚ್ಚು ಆದಾಯ ಹೊಂದಿರುವ ಅನೇಕ ದೇವಾಲಯಗಳಿವೆ. ಧಾರ್ಮಿಕ ಸಂಸ್ಥೆಗಳಿವೆ. ಆದರೆ ಅವುಗಳಾವವೂ ಈ ರೀತಿಯಾಗಿ ಬಡವರಿಗಾಗಿ ಯೋಜನೆ ರೂಪಿಸಿ ಬಡವರ ಏಳಿಗೆಗಾಗಿ ವ್ಯವಸ್ಥಿತವಾಗಿ ಹಣ ವಿನಿಯೋಗಿಸುತ್ತಿಲ್ಲ.

- ಶ್ರೀಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ