ಆ್ಯಪ್ನಗರ

ರೇಷ್ಮೆ ಕೃಷಿಯಿಂದ ಆರ್ಥಿಕ ಸ್ವಾವಲಂಬನೆ

ಸಂಪ್ರದಾಯ ಕೃಷಿ ಪದ್ಧತಿ ಜತೆಗೆ ರೇಷ್ಮೆಯನ್ನು ಉಪ ಕೃಷಿಯಾಗಿ ಅಳವಡಿಸಿಕೊಂಡರೆ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ರೇಷ್ಮೆ ಅಧಿಕಾರಿ ಬಿ.ಟಿ.ನಾಯಕ್‌ ಹೇಳಿದರು.

Vijaya Karnataka 20 Jun 2019, 5:00 am
ಸೊರಬ : ಸಂಪ್ರದಾಯ ಕೃಷಿ ಪದ್ಧತಿ ಜತೆಗೆ ರೇಷ್ಮೆಯನ್ನು ಉಪ ಕೃಷಿಯಾಗಿ ಅಳವಡಿಸಿಕೊಂಡರೆ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ರೇಷ್ಮೆ ಅಧಿಕಾರಿ ಬಿ.ಟಿ.ನಾಯಕ್‌ ಹೇಳಿದರು.
Vijaya Karnataka Web SMR-19SRBP1


ತಾಲೂಕಿನ ಚಂದ್ರಗುತ್ತಿಯಲ್ಲಿ ಬುಧವಾರ ಕೃಷಿ ಇಲಾಖೆ ಸಹಯೋಗದಲ್ಲಿ ವಿವಿಧ ಇಲಾಖೆಗಳ ಉಪಯುಕ್ತ ಮಾಹಿತಿಗಾಗಿ ಹಮ್ಮಿಕೊಂಡಿದ್ದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರು ನಿರಂತರವಾಗಿ ಜಮೀನಿನಲ್ಲಿ ದುಡಿಯಲು ಇಷ್ಟಪಡುವುದಿಲ್ಲ. ರೇಷ್ಮೆ ಹುಳುಗಳನ್ನು ಸಾಕಣೆ ಮಾಡಲು ಅಲ್ಪ ಸಮಯ ಹಾಗೂ ಬಿಡುವು ದೊರೆಯುವುದರಿಂದ ಯುವಕರಿಗೆ ಆಸಕ್ತಿ ಬೆಳೆಯುತ್ತದೆ. ಜತೆಗೆ ರೇಷ್ಮೆ ಗೂಡು ಮಾರಾಟ ಮಾಡಲು ರಾಮನಗರ, ಬೆಂಗಳೂರಿಗೆ ಹೋಗಬೇಕಾಗಿರುವುದರಿಂದ ಸಹಜವಾಗಿ ಯುವಕರಿಗೆ ಆಸಕ್ತಿ ಹುಟ್ಟಬಹುದು. ಈ ಹಿನ್ನೆಲೆಯಲ್ಲಿ ನಿರುದ್ಯೋಗಿ ಯುವಕರಿಗೆ ರೈತ ದಂಪತಿ ರೇಷ್ಮೆ ಬೆಳೆ ಬೆಳೆಯಲು ಉತ್ತೇಜನ ನೀಡಬೇಕು ಎಂದರು.

ಹಿಪ್ಪು ನೇರಳೆ ಬೆಳೆಯಲು ರೇಷ್ಮೆ ಇಲಾಖೆಯಿಂದ 1ಎಕರೆ ಜಮೀನಿಗೆ 10ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹುಳು ಸಾಕಣೆಗೆ 2ರಿಂದ 3ಲಕ್ಷ ರೂ.ಗಳ ವರೆಗೆ ಶೇ. 75ರಷ್ಟು ಪ್ರೋತ್ಸಾಹ ಧನ ಹಾಗೂ ಹನಿ ನೀರಾವರಿಗಾಗಿ ಶೇ. 35ರಷ್ಟು ಜಿಲ್ಲಾಡಳಿತದಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯ ಸಂಶೋಧಕ ಡಾ.ಉಲ್ಲಾಸ್‌ ಮಾತನಾಡಿ, ಮಣ್ಣಿನಲ್ಲಿನ ಪೋಷಕಾಂಶ ಗುಣಗಳನ್ನು ಕಾಯ್ದುಕೊಳ್ಳಲು ರೈತರು ಮಾಗಿ ಉಳುಮೆ ಮಾಡಬೇಕು. ಇದರಿಂದ ಭೂಮಿಯಲ್ಲಿನ ಕೀಟಗಳು ನಾಶ ಹೊಂದುವ ಜತೆಗೆ ಫಲವತ್ತತೆ ಹೆಚ್ಚಾಗಲಿದೆ ಎಂದ ಅವರು, ಒಂದೇ ಬೆಳೆ ಬೆಳೆಯುವ ಬದಲು ವೈವಿಧ್ಯ ಬೆಳೆ ಬೆಳೆಯಲು ಮುಂದಾಗಬೇಕು. ಇದರಿಂದ ಆರ್ಥಿಕ ಸಬಲತೆ ಸಾಧಿಸಬಹುದು ಎಂದರು.

ತೋಟಗಾರಿಕೆ ಸಹಾಯಕ ಅಧಿಕಾರಿ ಬಿ.ಎಲ್‌.ನವೀನ್‌ ಮಾತನಾಡಿ, ರೈತರು ವೈಜ್ಞಾನಿಕ ಕೃಷಿ ಹಾಗೂ ಪರ್ಯಾಯ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕ ಬಲವರ್ದನೆ ಹೊಂದಬೇಕು. ಅಡಕೆ, ಕಾಳು ಮೆಣಸು, ಕೋಕೋ, ತೆಂಗು, ಮಾವು, ಗೇರು ಬೆಳೆಗಳಿಗೆ ಒತ್ತು ನೀಡಬೇಕು. ಬರಗಾಲ ಎದುರಾಗುತ್ತಿರುವುದರಿಂದ ಹನಿನೀರಾವರಿ ಪದ್ದತಿಯನ್ನು ಬೆಳೆಗಳಿಗೆ ಅಳವಡಿಸಿಕೊಳ್ಳಬೇಕು ಎಂದರು.

ಗ್ರಾ.ಪಂ. ಉಪಾಧ್ಯಕ್ಷ ಪ್ರದೀಪಕುಮಾರ್‌ ಮಾತನಾಡಿದರು. ಜಿ.ಪಂ. ಸದಸ್ಯೆ ರಾಜೇಶ್ವರಿ ಗಣಪತಿ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿ ಸಹಾಯಕ ನಿರ್ದೇಶಕ ಶಿವಕುಮಾರ್‌ ಪ್ರಾಸ್ತಾವಿಕ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ನಾಗರಾಜ್‌ ಚಂದ್ರಗುತ್ತಿ, ಎಪಿಎಂಸಿ ಸದಸ್ಯ ಜಯಶೀಲಗೌಡ, ಗ್ರಾ.ಪಂ. ಸದಸ್ಯರಾದ ಲಕ್ಷ್ಮೀ ಚಂದ್ರಪ್ಪ, ನಾರಾಯಣಪ್ಪ, ದೇವೇಂದ್ರಪ್ಪ, ತಾಂತ್ರಿಕ ಕೃಷಿ ಅಧಿಕಾರಿ ಕಾಂತರಾಜ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ