ಆ್ಯಪ್ನಗರ

ಮಕ್ಕಳ ಆಸಕ್ತಿಗನುಸಾರ ಶಿಕ್ಷಣ ನೀಡಿ

ಪೋಷಕರು ಮಕ್ಕಳಿಗೆ ಅಂಕಗಳಿಸುವ ಉದ್ದೇಶದಿಂದ ವಿದ್ಯಾಭ್ಯಾಸ ಮಾಡಿಸುವ ಬದಲು ಅವರಿಗೆ ಆಸಕ್ತಿ ಇರುವ ಶಿಕ್ಷ ಣ ನೀಡಬೇಕೆಂದು ಜೋಶಿ ಫೌಂಡೇಶನ್‌ ಮುಖ್ಯಸ್ಥ ದಿನೇಶ್‌ಕುಮಾರ್‌ ಜೋಶಿ ಹೇಳಿದರು.

Vijaya Karnataka 4 Jul 2019, 5:00 am
ತ್ಯಾಗರ್ತಿ: ಪೋಷಕರು ಮಕ್ಕಳಿಗೆ ಅಂಕಗಳಿಸುವ ಉದ್ದೇಶದಿಂದ ವಿದ್ಯಾಭ್ಯಾಸ ಮಾಡಿಸುವ ಬದಲು ಅವರಿಗೆ ಆಸಕ್ತಿ ಇರುವ ಶಿಕ್ಷ ಣ ನೀಡಬೇಕೆಂದು ಜೋಶಿ ಫೌಂಡೇಶನ್‌ ಮುಖ್ಯಸ್ಥ ದಿನೇಶ್‌ಕುಮಾರ್‌ ಜೋಶಿ ಹೇಳಿದರು.
Vijaya Karnataka Web SMR-03sgr10


ಗ್ರಾಮದ ಲಿಟ್ಲ್‌ ಫ್ಲವರ್‌ ವಿದ್ಯಾಸಂಸ್ಥೆಯ ಮಕ್ಕಳಿಗೆ ಜೋಶಿ ಫೌಂಡೇಶನ್‌ನಿಂದ ಉಚಿತ ನೋಟ್‌ಬುಕ್‌ ವಿತರಿಸಿ ಮಾತನಾಡಿದ ಅವರು, ಮಕ್ಕಳು ತಮ್ಮ ಆಸಕ್ತಿ ಹಾಗೂ ಚಿಂತನೆಗೆ ಪೂರಕ ಶಿಕ್ಷಣ ಪಡೆಯಲು ಪೋಷಕರು ಸಹಕರಿಸಿದರೆ ಏಕಾಗ್ರತೆ ಹಾಗೂ ಶ್ರದ್ಧೆಯಿಂದ ಕಲಿಯುತ್ತಾರೆ ಎಂದರು.

ವಿದ್ಯಾಸಂಸ್ಥೆ ಮಾರ್ಗದರ್ಶಕ ನಾರಾಯಣಮೂರ್ತಿ ಕಾನುಗೋಡು ಮಾತನಾಡಿ, ಜೋಶಿಯವರು ಬಾಲ್ಯದಲ್ಲಿ ಅನುಭವಿಸಿದ ಬಡತನದಿಂದ ಶಿಕ್ಷಣವನ್ನು ಮೊಟಕುಗೊಳಿಸದೇ ಜನರ ಸಹಕಾರದೊಂದಿಗೆ ಕಲಿತು ಸಿಎ ಪರೀಕ್ಷೆಯಲ್ಲಿ ದೇಶಕ್ಕೆ 41ನೇ ರಾರ‍ಯಂಕ್‌ ಹಾಗೂ ರಾಜ್ಯಕ್ಕೆ 4ನೇ ರಾರ‍ಯಂಕ್‌ ಗಳಿಸಿದ್ದಾರೆ. ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಪುಸ್ತಕ ವಿತರಣೆ, ಬಡ ರೋಗಿಗಳಿಗೆ ಧನ ಸಹಾಯ ಹಾಗೂ ಬಡ ಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದರು.

ತ್ಯಾಗರ್ತಿ ಗ್ರಾ.ಪಂ. ಸದಸ್ಯ ಗಿರೀಶ್‌ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆ ನಿರ್ದೇಶಕರಾದ ಇಸಾಕ್‌, ಲಿಂಗೋಜಿರಾವ್‌, ರಾಘವೇಂದ್ರ, ಕಾರ‍್ಯದರ್ಶಿ ಜೈಕುಮಾರ್‌, ಮುಖ್ಯ ಶಿಕ್ಷ ಕಿ ಅಂಬಿಕಾ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ