ಆ್ಯಪ್ನಗರ

‘ಪ್ರಯತ್ನವೇ ಸಾಧಕನಿಗೆ ಶಕ್ತಿ’

‘ಪ್ರಯತ್ನವೇ ಸಾಧಕನಿಗೆ ಶಕ್ತಿ’​ಸಮಾಜದಲ್ಲಿ ಸೇವಾಮನೋಭಾವದಿಂದ ಗುರುತಿಸಿಕೊಳ್ಳಲು ಹಾಗೂ ಉದ್ಯೋಗ ಪಡೆಯಲು ಬಡತನ, ಸಿರಿತನವೆಂಬುದು ಪ್ರಮುಖವಾಗುವುದಿಲ್ಲ ಎಂದು ಆನವಟ್ಟಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಯಪ್ಪ ಹೇಳಿದರು.

Vijaya Karnataka 31 Jan 2019, 5:00 am
ಸೊರಬ: ‘ಪ್ರಯತ್ನವೇ ಸಾಧಕನಿಗೆ ಶಕ್ತಿ’ಸಮಾಜದಲ್ಲಿ ಸೇವಾಮನೋಭಾವದಿಂದ ಗುರುತಿಸಿಕೊಳ್ಳಲು ಹಾಗೂ ಉದ್ಯೋಗ ಪಡೆಯಲು ಬಡತನ, ಸಿರಿತನವೆಂಬುದು ಪ್ರಮುಖವಾಗುವುದಿಲ್ಲ ಎಂದು ಆನವಟ್ಟಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಯಪ್ಪ ಹೇಳಿದರು.
Vijaya Karnataka Web SMR-30SRBP1


ಪಟ್ಟಣದ ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯ ತಾವೇ ರೂಪಿಸಿಕೊಳ್ಳಬೇಕು. ಉಪನ್ಯಾಸಕರು ಕೇವಲ ಮಾರ್ಗದರ್ಶಕರು. ಸಮಗ್ರ ಜ್ಞಾನ ಪಡೆಯುವ ಮೂಲಕ ವಿದ್ಯಾರ್ಥಿಗಳು ನಾಡಿನ ಸತ್‌ಪ್ರಜೆಗಳಾಗಿ ಹೊರ ಹೊಮ್ಮಬೇಕು. ಮನೆಯಲ್ಲಿ ಸೌಲತ್ತುಗಳು ಅಟ್ಯಾಚ್‌ ಆಗಿದ್ದು, ಮನುಷ್ಯ ಸಂಬಂಧಗಳು ಡಿಟ್ಯಾಚ್‌ ಆಗಿದೆ. ಇದಕ್ಕೆ ಮೊಬೈಲ್‌ ಹಾಗೂ ಟಿವಿ ಕಾರಣವಾಗಿದೆ. ಸಮಸ್ಯೆ ಬದಿಗಿಟ್ಟು ಶ್ರಮಿಸಿದರೆ ಸಾಧನೆ ಸಾಧ್ಯ ಎಂದರು.

ಬಿಸಿಎಂ ಅಧಿಕಾರಿ ಮಂಜುನಾಥ್‌ ಮಾತನಾಡಿ, ಈ ನಿಲಯ ಎ ಶ್ರೇಣಿಯಲ್ಲಿದ್ದು, ಓದು, ಪರಿಸರ, ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿರುವುದು ಶ್ಲಾಘನೀಯ. ಒಳ್ಳೆಯ ನಿಲಯ ಪಾಲಕರಿದ್ದು, ಅವರ ಪ್ರೋತ್ಸಾಹದಿಂದ ವಿದ್ಯಾರ್ಥಿನಿಯರು ಉತ್ತಮ ಗುರಿ ಸಾಧಿಸಬೇಕೆಂದರು. ನಿಲಯ ಪಾಲಕಿ ಪುಷ್ಪಲತಾ ಬಾವಿಮಠ್‌ ಮಾತನಾಡಿ, ವಿದ್ಯಾರ್ಥಿ ನಿಲಯಗಳು ದೇಗುಲಕ್ಕೆ ಸಮಾನ. ಪೂಜ್ಯನೀಯ ಮನೋಭಾವನೆ ಇದ್ದರೆ ಶಾಂತಿ, ನೆಮ್ಮದಿ, ಓದು, ಸ್ವಚ್ಛತೆæಗೆ ಆದ್ಯತೆ ನೀಡಲು ಸಾಧ್ಯವಾಗುತ್ತದೆ. ಸರಕಾರಿ ಉದ್ಯೋಗ ಪಡೆಯುವುದೇ ಮುಖ್ಯ ಗುರಿ ಎನ್ನದೆ ವಿವಿಧ ಖಾಸಗಿ, ಸಹಕಾರಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಎತ್ತರಕ್ಕೆ ಬೆಳೆಯಬಹುದು ಎಂದರು. ಸಾಧನಾ ಅಕಾಡೆಮಿಯ ಮಂಜುನಾಥ್‌ ಪರೀಕ್ಷಾ ತಯಾರಿ ಕುರಿತು ಮಾಹಿತಿ ನೀಡಿದರು. ನಿಲಯ ಪಾಲಕ ಮಂಜುನಾಥ್‌, ಮುಖ್ಯ ಶಿಕ್ಷ ಕ ಎಸ್‌.ಕೃಷ್ಣಾನಂದ್‌, ಹುಚ್ಚರಾಯಪ್ಪ ಶಿಕಾರಿಪುರ, ಭೂಮಿಕ, ರೇವಣಪ್ಪ ಇತರರಿದ್ದರು. ಓದು, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ