ಆ್ಯಪ್ನಗರ

ಥಿಯರಿಗಿಂತ ಪ್ರ್ಯಾಕ್ಟಿಕಲ್‌ಗೆ ಒತ್ತು ಕೊಡಿ

ವಿಜ್ಞಾನವನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡುವುದರಿಂದ ಕಲಿಕೆಯನ್ನು ಹೆಚ್ಚು ಪ್ರಭಾವಶಾಲಿಯಾಗಿಸಬಹುದು. ಅದಕ್ಕಾಗಿ, ಶಿಕ್ಷಕರು ಸಾಧ್ಯವಾದಷ್ಟು ಪ್ರಯೋಗಗಳಿಗೆ ಆದ್ಯತೆ ನೀಡಬೇಕು ಎಂದು ಬೆಂಗಳೂರು ಸಂತ ಜೋಸೆಫ್‌ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಪ್ರೊ.ಸ್ಟೀಫನ್‌ ಟೈಟಸ್‌ ಸಲಹೆ ನೀಡಿದರು.

Vijaya Karnataka 4 Jun 2019, 5:00 am
ಶಿವಮೊಗ್ಗ: ವಿಜ್ಞಾನವನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡುವುದರಿಂದ ಕಲಿಕೆಯನ್ನು ಹೆಚ್ಚು ಪ್ರಭಾವಶಾಲಿಯಾಗಿಸಬಹುದು. ಅದಕ್ಕಾಗಿ, ಶಿಕ್ಷಕರು ಸಾಧ್ಯವಾದಷ್ಟು ಪ್ರಯೋಗಗಳಿಗೆ ಆದ್ಯತೆ ನೀಡಬೇಕು ಎಂದು ಬೆಂಗಳೂರು ಸಂತ ಜೋಸೆಫ್‌ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಪ್ರೊ.ಸ್ಟೀಫನ್‌ ಟೈಟಸ್‌ ಸಲಹೆ ನೀಡಿದರು.
Vijaya Karnataka Web SMG-0306-2-15-3SMG3


ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಮಾನವ ಸಂಪನ್ಮೂಲ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಪುಣೆಯ ಭಾರತೀಯ ವಿಜ್ಞಾನ ಶಿಕ್ಷ ಣ ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ ನಗರದ ಜವಾಹರ್‌ಲಾಲ್‌ ನೆಹರೂ ತಾಂತ್ರಿಕ ವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 'ಪ್ರಾಂತೀಯ ಸಂಶೋಧನೆ ಆಧಾರಿತ ಶಿಕ್ಷ ಣ ವಿಧಾನಗಳು' ಕುರಿತು ಮೂರು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿಜ್ಞಾನವನ್ನು ಕೇವಲ ಒಂದು ವಿಷಯವಾಗಿ ಹಾಗೂ ಸಾಂಪ್ರದಾಯಿಕ ವಿಧಾನಗಳಿಂದ ಕೇವಲ ಪಠ್ಯಪುಸ್ತಕಕ್ಕೆ ಜೋತುಬಿದ್ದು ಕಲಿಯದೇ ಅದರೊಂದಿಗೆ ಪ್ರಯೋಗಗಳನ್ನು ಮಾಡಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಅದಕ್ಕೆ ಇನ್ನಷ್ಟು ಸುಧಾರಿಸಲು ಸಾಧ್ಯವೇ ಎಂದು ಮಾರ್ಗದರ್ಶಿಸಬೇಕು. ಇವೆಲ್ಲವುಗಳು ಮಕ್ಕಳ ಮಾನಸಿಕ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದರು.

ಸಂಶೋಧನೆ ಆಧಾರಿತ ಶಿಕ್ಷ ಣ ವಿಧಾನಗಳು(ಆರ್‌ಬಿಪಿಟಿ) ಕುರಿತು ಮಾಹಿತಿ ನೀಡಿದ ಅವರು, ವಿಜ್ಞಾನ ಶಿಕ್ಞಕರಿಗೆ ಈ ಕಾರ್ಯಾಗಾರದಿಂದಾಗುವ ಉಪಯೋಗಗಳನ್ನು ವಿವರಿಸಿದರು. ಕಾರ್ಯಾಗಾರದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ಜ್ಞಾನ ಸೃಷ್ಟಿಯ ಕ್ರಮದ ಅರಿವು ತಿಳಿಸುವುದಾಗಿದೆ ಹೊರತು ವಿಷಯದ ಬೋಧನೆಯಲ್ಲ ಎಂದರು.

ಪಠ್ಯಕ್ರಮ ಬದಲಾವಣೆ ಅಗತ್ಯ:
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪ್ರಾದೇಶಿಕ ಶಿಕ್ಷ ಣ ಕಚೇರಿಯ ಜಂಟಿ ನಿರ್ದೇಶಕ ಪ್ರೊ.ಕೆ. ಪ್ರಸಾದ್‌, ಪ್ರಸಕ್ತ ಬೋಧಿಸಲಾಗುತ್ತಿವ ಪಠ್ಯಕ್ರಮ ಹಳೆಯದಾಗಿದೆ. ಅದನ್ನು ಸುಧಾರಿಸುವ ಅಗತ್ಯವಿದೆ. ಒಂದುವೇಳೆ, ಹೊಸ ವಿಷಯಗಳನ್ನು ಸೇರಿಸುವ ಕೆಲಸವಾದ್ದಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಮನೋವಿಕಾಸ ಹೊಂದಲು ಸಹಕಾರಿಯಾಗುತ್ತದೆ. ಇಂತಹ ಕಾರ್ಯಾಗಾಗಳು ವಿಜ್ಞಾನ ಪಠ್ಯಕ್ರಮದ ಸುಧಾರಣೆಗೆ ನೆರವಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷ ತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹಾದೇವಸ್ವಾಮಿ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್‌.ಎನ್‌.ನಾಗರಾಜ್‌ ಇತರರಿದ್ದರು. ಡಾ.ಎಚ್‌.ಬಿ ಸುರೇಶ್‌, ಅಶ್ವಿನಿ ನಿರೂಪಿಸಿದರು. ಕಾರ್ಯಾಗಾರ ಸಂಚಾಲಕ ಹಾಗೂ ಕಾಲೇಜು ಉಪ ಪ್ರಾಚಾರ್ಯ ಡಾ.ಎಲ್‌.ಕೆ. ಶ್ರೀಪತಿ ಸ್ವಾಗತಿಸಿದರು. ಪ್ರಾಧ್ಯಾಪಕ ಗಿರೀಶ್‌ ಮಂತ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ