ಆ್ಯಪ್ನಗರ

‘ಕೌಶಲ ಅಭಿವೃದ್ಧಿಯಿಂದ ಉದ್ಯೋಗ’

ಇಲ್ಲಿನ ಪದವಿಪೂರ್ವ ಕಾಲೇಜಿಗೆ ರೂ.3.25 ಕೋಟಿ ಅನುದಾನದಲ್ಲಿ ಹಾಗೂ ರೂ.1.65 ಕೋಟಿ ಅನುದಾನದಲ್ಲಿ ರಿಪ್ಪನ್‌ಪೇಟೆ ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸಲಾಗುವುದು. ಕ್ಷೇತ್ರದ ಶೈಕ್ಷ ಣಿಕ ಸಂಸ್ಥೆಗಳ ಸರ್ವತೋಮುಖ ಪ್ರಗತಿಗಾಗಿ ಶ್ರಮ ವಹಿಸಲು ಬದ್ಧ ಎಂದು ಶಾಸಕ ಎಚ್‌. ಹಾಲಪ್ಪ ತಿಳಿಸಿದರು.

Vijaya Karnataka 30 Dec 2018, 5:00 am
ಹೊಸನಗರ: ಇಲ್ಲಿನ ಪದವಿಪೂರ್ವ ಕಾಲೇಜಿಗೆ ರೂ.3.25 ಕೋಟಿ ಅನುದಾನದಲ್ಲಿ ಹಾಗೂ ರೂ.1.65 ಕೋಟಿ ಅನುದಾನದಲ್ಲಿ ರಿಪ್ಪನ್‌ಪೇಟೆ ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸಲಾಗುವುದು. ಕ್ಷೇತ್ರದ ಶೈಕ್ಷ ಣಿಕ ಸಂಸ್ಥೆಗಳ ಸರ್ವತೋಮುಖ ಪ್ರಗತಿಗಾಗಿ ಶ್ರಮ ವಹಿಸಲು ಬದ್ಧ ಎಂದು ಶಾಸಕ ಎಚ್‌. ಹಾಲಪ್ಪ ತಿಳಿಸಿದರು.
Vijaya Karnataka Web SMR-29HOSP1


ಪಟ್ಟಣದ ಗಾಯತ್ರಿ ಮಂದಿರದಲ್ಲಿ ಶನಿವಾರ ಇಲ್ಲಿನ ಪದವಿಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರೋಪಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಔದ್ಯೋಗಿಕ ಕ್ಷೇತ್ರದಲ್ಲಿ ಇಂದು ಗಣನೀಯ ಬದಲಾವಣೆಗಳಾಗಿವೆ. ಜಾಗತಿಕವಾಗಿ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಕೌಶಲ್ಯಾಭಿವೃದ್ಧಿಯಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಆಂಗ್ಲ ಭಾಷಾ ಪ್ರಾವೀಣ್ಯತೆ ಮತ್ತು ಕಂಪ್ಯೂಟರ್‌ ಜ್ಞಾನ ಇಂದು ಅತ್ಯಂತ ಅಗತ್ಯ. ಬಹುಭಾಷೆ ಪರಿಣತಿ ಪಡೆದರೂ ಮಲೆನಾಡಿಗರಿಗೆ ಕನ್ನಡದ ಅಭಿಮಾನ ಎಂದಿಗೂ ಕಡಿಮೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹದಿವಯಸ್ಸಿನ ಮಕ್ಕಳು ದಾರಿತಪ್ಪಿದಲ್ಲಿ ಮುಂದೇನು ಎಂಬ ಆತಂಕ ಪೋಷಕರಿಗೆ ಸದಾ ಇರುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಯ ಪ್ರೌಢಾವಸ್ಥೆಯಲ್ಲಿ ವಿದ್ಯಾರ್ಥಿಗಳು ಚಂಚಲತೆಗೆ ಒಳಗಾಗಬಾರದು. ಈ ಸಮಯದಲ್ಲಿ ದಾರಿತಪ್ಪಿದರೆ ಇಡೀ ಜೀವನವನ್ನೇ ಕಳೆದುಕೊಳ್ಳಬೇಕಾದೀತು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರಾಚಾರ‍್ಯ ಎಚ್‌.ಎ.ಮ್ಯಾಗೇರಿ ಅಧ್ಯಕ್ಷ ತೆ ವಹಿಸಿದ್ದರು. ಜಿಪಂ ಸದಸ್ಯ ಎಸ್‌.ಸುರೇಶ್‌, ಕಾಲೇಜು ಸಮಿತಿ ಪದಾಧಿಕಾರಿಗಳಾದ ಹನಿಯರವಿ, ಮಲ್ಲಿಕಾರ್ಜುನ್‌, ಸುಂದರ್‌, ರಾಮಪ್ಪ, ಶ್ಯಾಮಲ ಸುಧಾಕರ, ಡಾ.ರಾಮಚಂದ್ರರಾವ್‌ ಮತ್ತಿತರರು ಇದ್ದರು. ಶೈಕ್ಷ ಣಿಕ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಗಣಪತಿ ವರದಿ ವಾಚಿಸಿ, ಸ್ವಾಮಿ ನಿರೂಪಿಸಿದರು.

-------------

ಆತ್ಮಹತ್ಯೆ ಹೀನಕೃತ್ಯ

ಜಿಲ್ಲೆಯ ಅಂಕಿ ಅಂಶ ಗಮನಿಸಿದಾಗ ಹೊಸನಗರ ತಾಲೂಕಲ್ಲೇ ಅತಿ ಹೆಚ್ಚು ಆತ್ಮಹತ್ಯೆಗಳಾಗುತ್ತಿರುವುದು ಆತಂಕದ ಸಂಗತಿ. ರೈತರು, ಹದಿವಯಸ್ಸಿನವರು ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸುಖ, ಕಷ್ಟಗಳು ಜೀವನದಲ್ಲಿ ಸಹಜ. ಇಂತಹ ಹೀನ ಕೃತ್ಯಕ್ಕೆ ಎಂದೂ ಕೈಹಾಕಬಾರದು. ಪ್ರತಿಯೊಬ್ಬರಿಗೂ ಸಾಮಾಜಿಕ ಜವಾಬ್ದಾರಿಗಳಿವೆ. ಸಮಸ್ಯೆ ಎದುರಿಸುವ ಛಲವಿರಬೇಕೇ ಹೊರತು ಬೆನ್ನು ತೋರಿಸಿ ಹೋಗುವುದು ಸಾಧನೆಯಲ್ಲ.

-ಎಚ್‌.ಹಾಲಪ್ಪ , ಶಾಸಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ