ಆ್ಯಪ್ನಗರ

‘ಇಚ್ಛಾಶಕ್ತಿಯಿಂದ ಪರಿಸರ ಸಂರಕ್ಷಣೆ’

ಪರಿಸರ ರಕ್ಷ ಣೆಯಲ್ಲಿ ಯುವಜನತೆಯ ಪಾತ್ರ ಹಿರಿದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕೆ.ಸಂತೋಷ್‌ ತಿಳಿಸಿದರು.

Vijaya Karnataka 16 Jun 2019, 5:00 am
ಹೊಸನಗರ: ಪರಿಸರ ರಕ್ಷ ಣೆಯಲ್ಲಿ ಯುವಜನತೆಯ ಪಾತ್ರ ಹಿರಿದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕೆ.ಸಂತೋಷ್‌ ತಿಳಿಸಿದರು.
Vijaya Karnataka Web SMR-14HOSP4


ತಾಲೂಕಿನ ಸಮಟಗಾರು ಗ್ರಾಮದಲ್ಲಿ ಶುಭೋದಯ ಜ್ಞಾನವಿಕಾಸ ಕೇಂದ್ರದ ಸದಸ್ಯರು ಗುರುವಾರ ಏರ್ಪಡಿಸಿದ್ದ ಬೀಜದುಂಡೆ ತಯಾರಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರ ನಾಶ ಇಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಶುದ್ಧ ಗಾಳಿ, ನೀರು ಸಿಗಲಾರದ ಪರಿಸ್ಥಿತಿ ಬಂದಿದೆ. ಮಾನವನ ದುರಾಸೆ ಹಾಗೂ ಅರಿವಿನ ಕೊರತೆ ಇದಕ್ಕೆ ಕಾರಣವಾಗಿದೆ. ಪರಿಸರ ನಾಶ ಇದೇ ಗತಿಯಲ್ಲಿ ಮುಂದುವರಿದಲ್ಲಿ ಭವಿಷ್ಯದಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂದರು.

ಯುವಜನತೆ ಪರಿಸರ ಸಂರಕ್ಷ ಣೆ ಮಹತ್ವ ಅರಿತಿದ್ದಾರೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಚ್ಛಾಶಕ್ತಿ ತೋರಬೇಕಿದೆ. ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬದ ದಿನ ಕನಿಷ್ಟ ಒಂದು ಗಿಡ ನೆಟ್ಟು ಪೋಷಿಸುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು. ಕಾರ‍್ಯಕ್ರಮದಲ್ಲಿ ಅರಣ್ಯ ರಕ್ಷ ಕ ಸಂದೀಪ್‌, ಶಾಲೆ ಮುಖ್ಯ ಶಿಕ್ಷ ಕಿ ರತ್ನಮ್ಮ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ, ಯೋಜನೆಯ ಸೇವಾಪ್ರತಿನಿಧಿಗಳು ಹಾಗೂ ಸದಸ್ಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ