ಆ್ಯಪ್ನಗರ

‘ವಚನಕಾರರಿಂದ ಸಮಾನತೆ ಪ್ರತಿಪಾದನೆ’

ಸಮಾಜದಲ್ಲಿನ ಅಂಕುಡೊಂಕು ತಿದ್ದಲು ಬದುಕಲ್ಲಿ ವಚನಸಾಹಿತ್ಯ ಅಳವಡಿಸಿಕೊಳ್ಳುವ ಅವಶ್ಯವಿದೆ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಮಂಜುನಾಥ್‌ ಹೇಳಿದರು.

Vijaya Karnataka 8 Sep 2018, 5:00 am
ಸೊರಬ: ಸಮಾಜದಲ್ಲಿನ ಅಂಕುಡೊಂಕು ತಿದ್ದಲು ಬದುಕಲ್ಲಿ ವಚನಸಾಹಿತ್ಯ ಅಳವಡಿಸಿಕೊಳ್ಳುವ ಅವಶ್ಯವಿದೆ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಮಂಜುನಾಥ್‌ ಹೇಳಿದರು.
Vijaya Karnataka Web SMR-07SRBP2


ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹಾಗೂ ಶರಣ ಸಾಹಿತ್ಯ ಪರಿಷತ್‌ ತಾಲೂಕು ಘಟಕ ವತಿಯಿಂದ ಅ.ಭಾ.ಶ.ಸಾ.ಪ. ನ ಸಂಸ್ಥಾಪನ ದಿನ ಹಾಗೂ ಸಂಸ್ಥಾಪಕ ಡಾ.ರಾಜೇಂದ್ರ ಮಹಾಸ್ವಾಮಿಗಳ ಜನ್ಮ ದಿನದ ಅಂಗವಾಗಿ ಗುರುವಾರ ಸಂಜೆ ಏರ್ಪಡಿಸಿದ್ದ ವಚನದಿನ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣ ಎಲ್ಲ ಜಾತಿ-ಧರ್ಮದವರನ್ನು ಒಗ್ಗೂಡಿಸಿಕೊಂಡು ಸಮಾಜ ಸುಧಾರಣೆಗೆ, ಸಮಾನತೆಗೆ ಮುನ್ನುಡಿ ಬರೆದಿದ್ದಾರೆ. ಕಾಯಕವೇ ಕೈಲಾಸ ನುಡಿಯನ್ನು ಇಂದಿನ ಸಮಾಜ ಅಳವಡಿಸಿಕೊಳ್ಳಬೇಕೆಂದರು.

ಭರತ್‌ ಕಾರೇಕೊಪ್ಪ ಉಪನ್ಯಾಸ ನೀಡಿ, ಈ ನೆಲದಲ್ಲಿ ಮೊದಲು ಸಮಾನತೆ ಪ್ರತಿಪಾದಿಸಿದವರು ವಚನಕಾರರು. ಮನೋಬಲ ಗಟ್ಟಿಗೊಳಿಸುವ ಜತೆಗೆ ಶಿಕ್ಷ ಣ ಪಡೆದಲ್ಲಿ ಸಮಾಜವನ್ನು ಸದೃಢವಾಗಿ ಕಟ್ಟಬಹುದು ಎಂದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಾಲೇಶ್‌ ನವುಲೆ ಅವರು ಡಾ.ವಿ.ಎಸ್‌.ಮಾಳಿ ಅವರ ವಚನ ಸಂಪತ್ತನ್ನು ಉಳಿಸಿ ಕೊಟ್ಟವರು ಎಂಬ ಮುದ್ರಿತ ಭಾಷಣವನ್ನು ವಾಚಿಸಿದರು. ಬಸವ ಬಳಗದ ಅಧ್ಯಕ್ಷ ಮಹಾಂತೇಶ ಕಳ್ಳಿಕೊನೆ ಅವರು ವಚನ ವಾಚನ ಮತ್ತು ವಿಶ್ಲೇಷಣೆ ಮಾಡಿದರು. ಶರಣ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಎಸ್‌.ಕೃಷ್ಣಾನಂದ್‌ ಅಧ್ಯಕ್ಷ ತೆ ವಹಿಸಿದ್ದರು. ಕಾರ‍್ಯದರ್ಶಿ ಕೆ.ಇ.ಸುನಂದ ನಿರೂಪಿಸಿದರು. ನಿಲಯ ಪಾಲಕ ಉಮೇಶ್‌, ವಕೀಲ ಎಂ.ಆರ್‌.ಪಾಟೀಲ್‌, ರೇಣುಕಮ್ಮ ಗೌಳಿ, ಪಾರ್ವತಮ್ಮ, ಚಂದ್ರಪ್ಪ ಅತ್ತಿಕಟ್ಟೆ, ಶಿವಕುಮಾರ್‌, ಶಿವಪ್ಪ, ಪುಟ್ಟಸ್ವಾಮಿಗೌಡ, ವಿನಾಯಕ ಅಂಕೋಟಿಕರ್‌ ಇತರರಿದ್ದರು. ವಚನಗಾಯನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ