ಆ್ಯಪ್ನಗರ

ಮಹಿಷಿ ದೇಗುಲಕ್ಕೆ ಈಶ್ವರಪ್ಪ ಭೇಟಿ

ವಿಧಾನಸಭಾ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಶಾಸಕ ಕೆ.ಎಸ್‌.ಈಶ್ವರಪ್ಪ ಶುಕ್ರವಾರ ತಾಲೂಕಿನ ಮಹಿಷಿ ಗ್ರಾಮದ ಶ್ರೀ ಅಶ್ವಥ ನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Vijaya Karnataka 19 May 2018, 5:00 am
ತೀರ್ಥಹಳ್ಳಿ: ವಿಧಾನಸಭಾ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಶಾಸಕ ಕೆ.ಎಸ್‌.ಈಶ್ವರಪ್ಪ ಶುಕ್ರವಾರ ತಾಲೂಕಿನ ಮಹಿಷಿ ಗ್ರಾಮದ ಶ್ರೀ ಅಶ್ವಥ ನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
Vijaya Karnataka Web eshwarappa visit to mahishi temple
ಮಹಿಷಿ ದೇಗುಲಕ್ಕೆ ಈಶ್ವರಪ್ಪ ಭೇಟಿ


ಅಶ್ವಥನಾರಾಯಣಸ್ವಾಮಿ ದೇವಸ್ಥಾನದ ಅಪಾರ ಭಕ್ತರಾಗಿರುವ ಈಶ್ವರಪ್ಪ ಬಿರುಸಿನ ರಾಜಕೀಯ ಚಟುವಟಿಕೆ ನಡುವೆಯೂ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವಸ್ಥಾನ ಭೇಟಿ ಕಾರ‍್ಯಕ್ರಮ ಮುಗಿಸಿದ ನಂತರ 10 ಕೋಟಿ ರೂ. ವೆಚ್ಚದಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ವೀಕ್ಷಿಸಿದರು. ದೇವಸ್ಥಾನ, ನದಿಗೆ ತೊಂದರೆ ಆಗದಂತೆ ಕಾಮಗಾರಿ ನಿರ್ವಹಿಸಬೇಕೆಂದು ಸೇತುವೆ ಗುತ್ತಿಗೆ ಕಂಪನಿ ಸಿಬ್ಬಂದಿಗೆ ಸೂಚಿಸಿದರು.

ಆರಗರಿಗೆ ಸಚಿವ ಸ್ಥಾನಕ್ಕೆ ಮನವಿ: ಈ ಸಂದರ್ಭ ಶಾಸಕ ಆರಗಜ್ಞಾನೇಂದ್ರ ಅವರಿಗೆ ರಾಜ್ಯ ಸರಕಾರದ ಸಚಿವ ಸ್ಥಾನ ನೀಡುವಂತೆ ಬಿಜೆಪಿ ಮುಖಂಡರಾದ ಬೆಜ್ಜವಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಿಷಿ ಜಯಂತ್‌, ಮಾಜಿ ಸದಸ್ಯ ಮೋಹನ್‌ಭಟ್‌, ಸ್ಥಳೀಯ ಪ್ರಮುಖರಾದ ದಬ್ಬಣಗದ್ದೆ ಶ್ರೀನಂದಾ, ಗ್ರಾಮಸ್ಥರು ಮನವಿ ಸಲ್ಲಿಸಿದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ