ಆ್ಯಪ್ನಗರ

ಪಾದಯಾತ್ರೆ ನಿಮಿತ್ತ ಪ್ರಬಂಧ ಸ್ಪರ್ಧೆ

ಜ.25ರಂದು ಆನವಟ್ಟಿಯಲ್ಲಿ ಹಮ್ಮಿಕೊಂಡ 150ನೇ ಮಹಾತ್ಮಗಾಂಧಿ ಜನ್ಮ ದಿನಾಚರಣೆ ಹಾಗೂ ಕರ್ನಾಟಕದ ಗಾಂಧಿ ಸರ್ದಾರ್‌ ಮಲ್ಲಿಕಾರ್ಜುನ ಗೌಡರ ಅಖಂಡ ಕರ್ನಾಟಕ ಭೂದಾನ ಮತ್ತು ಸರ್ವೋದಯ ಪಾದಯಾತ್ರೆಯ ಸುವರ್ಣಮಹೋತ್ಸವ ನಿಮಿತ್ತ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾತಂತ್ರ್ಯ ಸರ್ವೋದಯ ಭಾರತ ಇತಿಹಾಸ, ಸಾಹಿತ್ಯ ಗೀತೆಗಳ ರಚನಾಕಾರ ಸದಾನಂದಗೌಡ ಹೇಳಿದರು.

Vijaya Karnataka 13 Jan 2019, 5:00 am
ಸೊರಬ: ಜ.25ರಂದು ಆನವಟ್ಟಿಯಲ್ಲಿ ಹಮ್ಮಿಕೊಂಡ 150ನೇ ಮಹಾತ್ಮಗಾಂಧಿ ಜನ್ಮ ದಿನಾಚರಣೆ ಹಾಗೂ ಕರ್ನಾಟಕದ ಗಾಂಧಿ ಸರ್ದಾರ್‌ ಮಲ್ಲಿಕಾರ್ಜುನ ಗೌಡರ ಅಖಂಡ ಕರ್ನಾಟಕ ಭೂದಾನ ಮತ್ತು ಸರ್ವೋದಯ ಪಾದಯಾತ್ರೆಯ ಸುವರ್ಣಮಹೋತ್ಸವ ನಿಮಿತ್ತ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾತಂತ್ರ್ಯ ಸರ್ವೋದಯ ಭಾರತ ಇತಿಹಾಸ, ಸಾಹಿತ್ಯ ಗೀತೆಗಳ ರಚನಾಕಾರ ಸದಾನಂದಗೌಡ ಹೇಳಿದರು.
Vijaya Karnataka Web essay competition for hiking
ಪಾದಯಾತ್ರೆ ನಿಮಿತ್ತ ಪ್ರಬಂಧ ಸ್ಪರ್ಧೆ


ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಎಣ್ಣೆಕೊಪ್ಪದ ಸರ್ದಾರ್‌ ಮಲ್ಲಿಕಾರ್ಜುನ ಗೌಡರು ತಮ್ಮ ಭೂಮಿ ದಾನಮಾಡುವ ಮೂಲಕ ಭೂದಾನ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರನ್ನು ವಿನೋಬಭಾವೆ ಕೂಡ ಭೇಟಿ ಮಾಡಿರುವುದು ಇತಿಹಾಸವಾಗಿದೆ. ಸುವರ್ಣ ಮಹೋತ್ಸವ ಆಚರಣೆ ನಿಮಿತ್ತ ರಾಜ್ಯದ ಪಿಯು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಕರ್ನಾಟಕ ಸರ್ವೋದಯ ಚಳವಳಿ(ಗಾಂಧೀ, ವಿನೋಬ ಭಾವೆ ಹಾಗೂ ಸರ್ದಾರ ಮಲ್ಲಿಕಾರ್ಜುನ ಗೌಡರನ್ನು ಕೇಂದ್ರಿಕರಿಸಿ ಪ್ರಬಂಧ ರಚಿಸುವುದು) ಬಗ್ಗೆ ಪ್ರಬಂಧ ಹಾಳೆಯ ಒಂದು ಭಾಗದಲ್ಲಿ ಸುಂದರ ಬರವಣಿಗೆ ಅಥವಾ ಟೈಪ್‌ ಮಾಡಿ 3 ಪುಟ ಮೀರದಂತೆ ಪ್ರಬಂಧ ಸಿದ್ಧಮಾಡಿ, ಅದರೊಂದಿಗೆ ಪ್ರತ್ಯೇಕ ಹಾಳೆಯಲ್ಲಿ ಪೂರ್ಣ ವಿಳಾಸ ಹಾಗೂ ಮೊಬೈಲ್‌ ಸಂಖ್ಯೆ ನೀಡಬೇಕು. ಜ.18ರ ಒಳಗೆ ನೀಲೇಶ್‌, ಕನ್ನಡ ಉಪನ್ಯಾಸಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ, ಶಿವಮೊಗ್ಗ ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಪ್ರಥಮ ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಸುವರ್ಣ ಮಹೋತ್ಸವದಲ್ಲಿ ಪಾರಿತೋಷಕ, ಪುಸ್ತಕ ಹಾಗೂ ಪ್ರಶಂಸಾ ಪತ್ರ ನೀಡಲಾಗುವುದು. ವಿಜೇತರಿಗೆ ಪ್ರಯಾಣ ದರವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.8660452853 ಸಂಪರ್ಕಿಸಲು ಸದಾನಂದಗೌಡ ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಶರಣ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಕೃಷ್ಣಾನಂದ್‌, ವಕೀಲ ನಾಗಪ್ಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ