ಆ್ಯಪ್ನಗರ

ಅಧ್ಯಾತ್ಮ ಜ್ಞಾನದಿಂದ ಶಾಶ್ವತ ಸುಖ

ಅಧ್ಯಾತ್ಮ ಜ್ಞಾನದಿಂದ ಮಾತ್ರ ಶಾಶ್ವತ ಸುಖ, ಶಾಂತಿ, ನೆಮ್ಮದಿ ಸಾಧ್ಯ. ಧಾರ್ಮಿಕ ಸೇವೆಯ ಜತೆಗೆ ಸಮಾಜ ಸೇವೆಯು ಶಾಶ್ವತ ಸುಖ ನೀಡುತ್ತದೆ ಎಂದು ಹೊಂಬುಜ ಜೈನಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹೇಳಿದರು.

Vijaya Karnataka 27 Dec 2018, 5:00 am
ರಿಪ್ಪನ್‌ಪೇಟೆ: ಅಧ್ಯಾತ್ಮ ಜ್ಞಾನದಿಂದ ಮಾತ್ರ ಶಾಶ್ವತ ಸುಖ, ಶಾಂತಿ, ನೆಮ್ಮದಿ ಸಾಧ್ಯ. ಧಾರ್ಮಿಕ ಸೇವೆಯ ಜತೆಗೆ ಸಮಾಜ ಸೇವೆಯು ಶಾಶ್ವತ ಸುಖ ನೀಡುತ್ತದೆ ಎಂದು ಹೊಂಬುಜ ಜೈನಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹೇಳಿದರು.
Vijaya Karnataka Web SMR-26rpt2


ಬಿಲ್ಲೇಶ್ವರ ಗ್ರಾಮದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುಂಚ ವಲಯವು ಆಯೋಜಿಸಿದ್ದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ಹೊರರಾಜ್ಯದಲ್ಲೂ ವಿಸ್ತಾರಗೊಂಡಿದೆ. ಇದು ಜನರಿಗೆ ಆರ್ಥಿಕ ಸೌಲಭ್ಯ ನೀಡಿ, ಅವರ ಕುಟುಂಬದ ಪ್ರಗತಿಗೆ ಮಾರ್ಗದರ್ಶಿಯಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ ಡಿ.ಸುರೇಂದ್ರಕುಮಾರ್‌ ಹೆಗ್ಗಡೆ ಮಾತನಾಡಿ, ಸ್ವಸಹಾಯ ಸಂಘಗಳು ಪರೋಪಕಾರದಿಂದ ಸಾರ್ಥಕತೆ ಹೊಂದಲು ಸಾಧ್ಯ. ಸ್ವಸಹಾಯ ಸಂಘಟನೆ ಮೂಲಕ ಉಳಿತಾಯ ಮಾಡಿದ ಹಣವನ್ನು ಕಷ್ಟಕಾಲದಲ್ಲಿ ಬಳಸಿಕೊಂಡರೆ ಉನ್ನತಿ ಹೊಂದಬಹುದು ಎಂದರು. ತಾಲೂಕು ಪಂಚಾಯಿತಿ ಅಧ್ಯಕ್ಷ ತೊರೆಗದ್ದೆ ವಾಸಪ್ಪಗೌಡ ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯೆ ಶ್ವೇತಾ ಆರ್‌.ಬಂಡಿ, ತಾ.ಪಂ.ಸದಸ್ಯ ವೀರೇಶ್‌ ಅಲುವಳ್ಳಿ, ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ, ಎಪಿಎಂಸಿ ನಿರ್ದೇಶಕ ಬಿ.ಪಿ.ರಾಮಚಂದ್ರ, ಕಲ್ಲೂರು ತೇಜ್‌ಮೂರ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಮಪ್ರಭು,

ಗ್ರಾ.ಪಂ. ಉಪಾಧ್ಯಕ್ಷ ದೇವೇಂದ್ರಪ್ಪ ಮಾತನಾಡಿದರು. ಹೊಸನಗರ ಯೋಜನಾಧಿಕಾರಿ ಸಂತೋಷ ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ನಿರೂಪಿಸಿದರು. ಒಕ್ಕೂಟದ ಮುಖ್ಯಸ್ಥ ಭಾಸ್ಕರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ