ಆ್ಯಪ್ನಗರ

ವಿಜಯದ ನಿರೀಕ್ಷೆ: ಮಧು

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ವಿಜಯದ ನಿರೀಕ್ಷೆಯಲ್ಲಿದ್ದು, ಅಭೂತಪೂರ್ವ ಜಯ ಗಳಿಸಿ, ಕ್ಷೇತ್ರದ ಜನರ ಧ್ವನಿಯಾಗುತ್ತೇನೆ ಎನ್ನುವ ವಿಶ್ವಾಸ ಇದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

Vijaya Karnataka 12 May 2019, 5:00 am
ಸಾಗರ : ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ವಿಜಯದ ನಿರೀಕ್ಷೆಯಲ್ಲಿದ್ದು, ಅಭೂತಪೂರ್ವ ಜಯ ಗಳಿಸಿ, ಕ್ಷೇತ್ರದ ಜನರ ಧ್ವನಿಯಾಗುತ್ತೇನೆ ಎನ್ನುವ ವಿಶ್ವಾಸ ಇದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
Vijaya Karnataka Web SMR-10sgr8


ಇಲ್ಲಿನ ಬನ್ನಿಕಟ್ಟೆ ರಸ್ತೆಯಲ್ಲಿನ ಶ್ರೀ ರಾಘವೇಶ್ವರ ಸಭಾಭವನದಲ್ಲಿ ಶುಕ್ರವಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಏರ್ಪಡಿಸಿದ್ದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಡಿ.ಕೆ.ಶಿವಕುಮಾರ್‌ ಸಾರಥ್ಯದಲ್ಲಿ ಭದ್ರಾವತಿಯಲ್ಲಿ ಅಪ್ಪಾಜಿ ಗೌಡ ಮತ್ತು ಸಂಗಮೇಶ್‌ ಒಂದಾಗಿ ಚುನಾವಣೆ ನಡೆಸಿದ್ದರಿಂದ ಸೊರಬಕ್ಕಿಂತ ಹೆಚ್ಚು ಮತ ಭದ್ರಾವತಿಯಲ್ಲಿ ಬರಲಿದೆ, ನೀರಾವರಿಗಾಗಿ ಪಾದಯಾತ್ರೆ ಮಾಡಿದ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲೂ ನನಗೆ ಹೆಚ್ಚು ಮತ ನೀಡಿ ಬೆಂಬಲಿಸಿದ್ದಾರೆ ಎಂದರು.

ಸುಮಾರು 50 ದಿನಗಳ ಅವಧಿಯ ಪ್ರಚಾರದ ಸಂದರ್ಭ ಸಿಎಂ ಕುಮಾರಸ್ವಾಮಿ ಸಾಗರದಲ್ಲೇ ಸುದೀರ್ಘ ಭಾಷಣ ಮಾಡಿದ್ದಾರೆ. ಲೋಕಸಭಾ ಕ್ಷೇತ್ರಾದ್ಯಂತ ಯಶಸ್ವಿ ಪ್ರಚಾರ ಕಾರ‍್ಯ ಮಾಡಲಾಗಿದೆ. ಸೂಕ್ತ ಹೊಂದಾಣಿಕೆ ಮೂಲಕ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ‍್ಯಕರ್ತರು ಕೆಲಸ ಮಾಡಬೇಕು ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಆರ್‌.ಜಯಂತ್‌ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಒಂದೂವರೆ ಲಕ್ಷ ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದರು. ಜಿ.ಪಂ.ಸದಸ್ಯ ಭೀಮನೇರಿ ಶಿವಪ್ಪ ಮಾತನಾಡಿದರು. ನಗರ ಬ್ಲಾಕ್‌ ಅಧ್ಯಕ್ಷ ತಶ್ರೀಫ್‌, ಪ್ರಮುಖರಾದ ತೀ.ನ.ಶ್ರೀನಿವಾಸ್‌, ಮಲ್ಲಿಕಾರ್ಜುನ ಹಕ್ರೆ, ಎನ್‌.ಜಿ.ಪೈ, ರವಿಕುಮಾರ್‌ ಹುನಾಲುಮಡಿಕೆ. ಎಲ್‌.ಟಿ.ತಿಮ್ಮಪ್ಪ, ಮಕ್ಬೂಲ್‌ ಅಹ್ಮದ್‌, ಹೊಳಿಯಪ್ಪ, ಮಧುಮಾಲತಿ, ಸೈಯದ್‌ ಜಾಕೀರ್‌, ಅಶೋಕ ಬರದವಳ್ಳಿ ಇತರರು ಇದ್ದರು. ಕಲಸೆ ಚಂದ್ರಪ್ಪ ಸ್ವಾಗತಿಸಿ, ಮಹಾಬಲ ಕೌತಿ ವಂದಿಸಿ, ವಿ.ಶಂಕರ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ