ಆ್ಯಪ್ನಗರ

ಕಣ್ಣಿನ ಕಾಳಜಿ ಅಗತ್ಯ

ಪ್ರತಿಯೊಬ್ಬರು ಅರೋಗ್ಯದ ಕಾಳಜಿ ವಹಿಸುವುದರ ಜತೆಗೆ ಕಣ್ಣಿನ ಬಗ್ಗೆ ವಿಶೇಷ ಕಾಳಜಿ ಹಾಗೂ ಮುಂಜಾಗ್ರತೆ ಅಗತ್ಯ ಎಂದು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಸ್ವಾತಿ ಹೇಳಿದರು.

Vijaya Karnataka 20 Jan 2019, 5:00 am
ರಿಪ್ಪನ್‌ಪೇಟೆ : ಪ್ರತಿಯೊಬ್ಬರು ಅರೋಗ್ಯದ ಕಾಳಜಿ ವಹಿಸುವುದರ ಜತೆಗೆ ಕಣ್ಣಿನ ಬಗ್ಗೆ ವಿಶೇಷ ಕಾಳಜಿ ಹಾಗೂ ಮುಂಜಾಗ್ರತೆ ಅಗತ್ಯ ಎಂದು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಸ್ವಾತಿ ಹೇಳಿದರು.
Vijaya Karnataka Web SMR-19rpt3


ಪಟ್ಟಣದ ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌, ಶಂಕರ ಕಣ್ಣಿನ ಅಸ್ಪತ್ರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಸವೇಶ್ವರ ವೀರಶೈವ ಸಮಾಜ ಞ ಸಹಯೋಗದಲ್ಲಿ ಶಿವಮಂದಿರಲ್ಲಿ ಶನಿವಾರ ಏರ್ಪಡಿಸಿದ್ದ 'ನೇತ್ರ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತಿ ಮುಖ್ಯ ಅಂಗವಾದ ಕಣ್ಣಿನ ರಕ್ಷ ಣೆಗೆ ಪ್ರತಿಯೊಬ್ಬರು ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಮಕ್ಕಳಾದಿಯಾಗಿ ಪ್ರತಿಯೊಬ್ಬರೂ ಪ್ರತಿವರ್ಷ ವೈದ್ಯರಲ್ಲಿ ತಮ್ಮ ಕಣ್ಣು ತಪಾಸಿಸಿಕೊಳ್ಳಬೇಕು. ತರಕಾರಿ ಮತ್ತು ಸೊಪ್ಪುಗಳಿಂದ ತಯಾರಿಸಿದ ಪದಾರ್ಥಗಳನ್ನು ಪೋಷಕರು ಮಕ್ಕಳಿಗೆ ನೀಡುವುದರ ಮೂಲಕ ಕಣ್ಣು ಸಮಸ್ಯೆಯನ್ನು ದೂರಮಾಡಲು ಸಾಧ್ಯ. ಮಕ್ಕಳು ಟಿ.ವಿ., ಮೊಬೈಲ್‌ ಮತ್ತು ಕಂಪ್ಯೂಟರ್‌ ಬಳಕೆಯನ್ನು ಕಡಿಮೆ ಮಾಡುವುದು ಅವಶ್ಯಕ ಎಂದರು.

ತಾ.ಪಂ.ಅಧ್ಯಕ್ಯ ವಾಸಪ್ಪಗೌಡ ಮಾತನಾಡಿ, ರೋಟರಿ ಮತ್ತು ಲಯನ್ಸ್‌ ನಂತಹ ಸಮಾಜ ಸೇವಾ ಸಂಸ್ಥೆಗಳು ಆರೋಗ್ಯ ಮತ್ತು ಶಿಕ್ಷ ಣದ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿರುವುದು ಶ್ಲಾಘನೀಯ. ಸಾರ್ವಜನಿರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಗ್ರಾಮಾಧ್ಯಕ್ಷೆ ಶಾರದಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್‌ ಅಧ್ಯಕ್ಷ ಗಣೇಶ್‌ ಎನ್‌.ಕಾಮತ್‌ ಅಧ್ಯಕ್ಷತೆ ವಹಿಸಿದ್ದರು.

ತಾ.ಪಂ.ಉಪಾಧ್ಯಕ್ಷೆ ಸುಶೀಲಮ್ಮ ರಘುಪತಿ, ಶಿವಮೊಗ್ಗ ಲಯನ್ಸ್‌ ಕ್ಲಬ್‌ ಅಧ್ಯಕ್ಷ ರಾಜಕುಮಾರ್‌, ಕಾರ್ಯದರ್ಶಿ ಗಿರೀಶ್‌ ನಾಯ್ಕ, ಖಜಾಂಚಿ ಅಪ್ಪುಕುಟ್ಟಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಡಾ. ರಾಮಚಂದ್ರ ಭಟ್‌. ಶಿವಮೊಗ್ಗ ಆಪ್ಟಿಕಲ್ಸ್‌ ನ ಎನ್‌.ಟಿ .ನಂದೀಶ್‌, ಶಿವಮಂದಿರದ ಆಡಳಿತ ಮಂಡಳಿ ನಿದೇರ್ಶಕ ಎಚ್‌.ಎಂ. ವರ್ತೇಶ್‌ ಗೌಡ, ಇನ್ನಿತರರು ಹಾಜರಿದ್ದರು

ಕೃಷ್ಣರಾಜ್‌ ಪ್ರಾರ್ಥಿಸಿ, ಜೆ.ರಾಧಾಕೃಷ್ಣ ಸ್ವಾಗತಿಸಿದರು. ಎಂ.ಬಿ.ಲಕ್ಷ ್ಮಣಗೌಡ ಪ್ರಾಸ್ತಾವಿಕ ಮಾತನಾಡಿ, ಸಬ್ಬಾಸ್ಟಿನ್‌ ಮ್ಯಾಥ್ಯೂಸ್‌ ನಿರೂಪಿಸಿದರು. ಎಚ್‌.ಎ.ರಾಧಾಕೃಷ್ಣ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ